ರೈಸಿಂಗ್ ಕನ್ನಡ:
ಬೆಂಗಳೂರು:
ಕೊರೊನಾ ಮನುಷ್ಯರನ್ನು ಕಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ವಿಶ್ವದ ಎಲ್ಲಾ ದೇಶಗಳು ಕೂಡ ಕೊರೊನಾದಿಂದ ನಲುಗುತ್ತಿವೆ. ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಆದ್ರೆ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಮತ್ತು ಹಬ್ಬಗಳ ಆಚರಣೆಗೆ ಇನ್ನೂ ಅನುಮತಿ ಇಲ್ಲ. ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. ಈ ಮಧ್ಯೆ ಕೊರೊನಾ ದೇವರಿಗೂ ಕಾಟ ಕೊಡುತ್ತಿದೆ. ಈ ಬಾರಿಯ ಗಣೇಶೋತ್ಸವ ಕೊರೊನಾಕ್ಕೆ ಬಲಿಯಾಗಲಿದೆ.
ಬೆಂಗಳೂರು ಮಹಾನಗರ ಪಾಲಿಕೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯನ್ನು ನಿಷೇಧಿಸಿದೆ. ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ವೇಗವಾಗಿ ಹಬ್ಬುತ್ತಿರುವುದರಿಂದ ಈ ನಿರ್ಧಾರ ಮಾಡಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚರಿಸಿದ್ದಾರೆ.
ಈ ಬಾರಿಯ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲು ಅನುಮತಿ ನೀಡಲಾಗಿದೆ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಹಾಕಿಕೊಂಡು ಹಬ್ಬದ ಶಾಪಿಂಗ್ ಮಾಡಬಹುದು. ಆದ್ರೆ ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯನ್ನು ಮನೆಯಲ್ಲೇ ವಿಸರ್ಜನೆ ಮಾಡಬೇಕು. ಸಾರ್ವಜನಿಕ ಕೆರೆ, ಕಲ್ಯಾನಿ ಮತ್ತು ಟ್ಯಾಂಕ್ಗಳಲ್ಲಿ ಮೂರ್ತಿ ವಿಸರ್ಜನೆಗೆ ಅವಕಾಶವಿಲ್ಲ. ಅನ್ಲಾಕ್ 3.0 ಮಾರ್ಗಸೂಚಿ ಅನ್ವಯ ಹಬ್ಬ, ಸಮಾರಂಭ ಅಥವಾ ಗುಂಪುಗೂಡುವ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಹೀಗಾಗಿ ರಾಜ್ಯ ಸರ್ಕಾರವೂ ಇದೇ ಮಾರ್ಗಸೂಚಿಯನ್ನು ಅನುಸರಿಸಬೇಕಿದೆ. ಹೀಗಾಗಿ ಬಿಬಿಎಂಪಿ ಈ ಆದೇಶ ಹೊರಡಿಸಿದೆ.
ಹೋಳಿ ಹಬ್ಬದ ಆಚರಣೆ ಹೇಗಿರಬೇಕು ಗೊತ್ತಾ?
ವಿಸ್ಮಯ , ಪವಾಡಗಳ ತಾಣ ಶ್ರೀ ವರದರಾಜೇಶ್ವರ ಶಿವಾಲಯ ಹೇಗಿರಲಿದೆ ಗೊತ್ತಾ.? ಶಿವರಾತ್ರಿ ಉತ್ಸವ..
ಬಿಬಿಎಂಪಿ 8 ವಲಯಗಳಲ್ಲಿ ತೆರಿಗೆ ಬಾಕಿ: ಕೋಟಿ ಕುಳಗಳೇ ಕಟ್ಟಿಲ್ಲ ತೆರಿಗೆ
ಪಾಕಿಸ್ತಾನ ಜಿಂದಾಬಾದ್ ಘೋಷಣೆಗೆ ಹುಬ್ಬಳ್ಳಿ ಎಬಿವಿಪಿ ಆಕ್ರೋಶ
ಶಿವಲಿಂಗಕ್ಕೂ ಮಹಾಶಿವರಾತ್ರಿಗೂ ಸಂಬಂಧವೇನು .?
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ