Connect with us

TV ಸೀರಿಯಲ್

ಕನಸು ಕಂಡ ಮಹಿಮಾ ಜೀವನ್ ಬಳಿ ಸತ್ಯ ಹೇಳುತ್ತಾಳಾ..?

TV ಸೀರಿಯಲ್ : ಮಹಿಮಾ ಮಗುವನ್ನು ತೆಗೆಸಿದ್ದು ತನ್ನ ಬ್ಯೂಟಿ ನ ಕಾಪಾಡಿಕೊಳ್ಳಲು ಎಂಬ ಸತ್ಯ ಇನ್ನೂ ಯಾರಿಗೂ ಗೊತ್ತಾಗಿಲ್ಲ. ಆದರೆ, ಮಹಿಮಾ ತಾನು ಮಾಡಿದ್ದು ತಪ್ಪು ಎಂದು ಪಶ್ಚಾತಾಪ ಪಡುತ್ತಿದ್ದಾಳೆ. ಅದಲ್ಲದೇ, ಮಂದಾಕಿನಿ ಹಾಗೂ ಸದಾಶಿವ ಇಬ್ಬರೂ ಸೊಸೆಗೆ ಆದಷ್ಟು ಬೇಗನೇ ಮಗುವಾಗಲಿ ಎಂದು ಉಪವಾಸ ಮಾಡಿ ವ್ರತ ಮಾಡುತ್ತಿರುವುದು ಇನ್ನಷ್ಟು ಕಾಡುತ್ತಿದೆ. ಹೀಗಾಗಿ ಮಹಿಮಾ ಜೀವನ ಬಳಿ ನಡೆದ ಘಟನೆಯನ್ನೆಲ್ಲಾ ಹೇಳಿಬಿಡಬೇಕು ಎಂದು ಭಾವಿಸುತ್ತಾಳೆ. ಅದೇ ರೀತಿ ಜೀವನ್ ಗೆ ಸತ್ಯವನ್ನು ಹೇಳಲು ಮುಂದಾಗುತ್ತಾಳೆ.

ಮಹಿಮಾಳನ್ನು ಜೀವನ್ ಬೈಯುತ್ತಾನೆ. ನಿನಗೆ ನಮ್ಮ ಮನೆಯವರು, ನಿಮ್ಮ ಮನೆಯವರು ಅಥವಾ ಮಗು ಏನಾದರೂ ತೊಂದರೆ ಮಾಡಿತ್ತಾ. ಆ ಪುಟ್ಟ ಮಗುವನ್ನು ಸಾಯಿಸಲು ಮನಸಾದರೂ ಹೇಗೆ ಬಂತು ಎಂದು ಕೋಪ ಮಾಡಿಕೊಂಡು ಜಗಳ ಮಾಡುತ್ತಾನೆ. ಆದರೆ, ಇದೆಲ್ಲವೂ ಮಹಿಮಾಳ ಕನಸಾಗಿರುತ್ತದೆ. ಒಂದು ವೇಳೆ ತಾನು ಅಬಾರ್ಷನ್ ಮಾಡಿಸಿಕೊಂಡ ವಿಚಾರವನ್ನು ಹೇಳಿದರೆ ಜೀವನ್ ಹೇಗೆ ರಿಯಾಕ್ಟ್ ಮಾಡಬಹುದು ಎಂದು ಊಹಿಸಿಕೊಳ್ಳುತ್ತಾಳೆ. ಸತ್ಯ ಹೇಳಿದರೆ, ಯಾರೂ ಮಹಿಮಾ ಕೆಲಸವನ್ನು ಒಪ್ಪುವುದಿಲ್ಲ ಎಂದು ಅರ್ಥ ಮಾಡಿಕೊಂಡ ಅವಳು, ಕೊನೆಗೆ ಜೀವನ್ ಬಳಿ ಸೆಕೆಂಡ್ ಹನಿಮೂನ್ ಗೆ ಹೋಗೋಣ ಎನ್ನುತ್ತಾಳೆ.

ಇಬ್ಬರೂ ಆಫೀಸ್ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದೀವಿ. ಇಬ್ಬರೂ ಸ್ವಲ್ಪ ದಿನ ಹೊರಗೆ ಹೋಗಿ ಬರೋಣ ಎಂದು ಕೇಳುತ್ತಾಳೆ. ಅದಕ್ಕೆ ಜೀವನ್ ಸ್ವಲ್ಪ ದಿನ ಕಷ್ಟ, ಸದ್ಯಕ್ಕೆ ಆಗೋದಿಲ್ಲ ಎಂದು ಹೇಳುತ್ತಾನೆ. ಮಹಿಮಾ ಬೇಸರ ಮಾಡಿಕೊಳ್ಳದೇ ಇದ್ದಿದ್ದನ್ನು ಕಂಡು ಪರವಾಗಿಲ್ಲವೇ ಬದಲಾಗಿದ್ದೀಯಾ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಿದ್ದೀಯಾ ಎಂದು ಹೇಳುತ್ತಾನೆ. ಇನ್ನು ಸದಾಶಿವ ಮನೆಯವರಿಗೆಲ್ಲಾ ಕೈ ತುತ್ತು ನೀಡುತ್ತಾನೆ. ಮಹಿಮಾ ಕೂಡ ಇಷ್ಟಪಟ್ಟು ಮಾವನ ಕೈ ತುತ್ತು ತಿನ್ನುತ್ತಾಳೆ.

ಶಕುಂತಲಾ ಗೌತಮ್ ಗೋಸ್ಕರ ಆಸ್ಪತ್ರೆಗೆ ಬಂದಿದ್ದಾಳೆ. ಗೌತಮ್ ನನ್ನು ಸಪರೇಟ್ ಆಗಿ ಕರೆದು, ಹೀಗೆಲ್ಲಾ ಹೆದರಿಕೊಂಡರೆ ಕಷ್ಟವಾಗುತ್ತದೆ. ಭೂಮಿಕಾಳಿಗೆ ಅನುಮಾನ ಬಂದು ಸತ್ಯ ಗೊತ್ತಾಗಬಹುದು. ಇದನ್ನೆಲ್ಲಾ ನಾನು ನೋಡಿಕೊಳ್ಳುತ್ತೇನೆ ನೀನು ಮನೆಗೆ ಹೋಗು ಎಂದು ಹೇಳುತ್ತಾಳೆ. ಭೂಮಿಕಾಳಿಗೂ ಕೂಡ ಗೌತಮ್ ಟೆಷ್ಷನ್ ಮಾಡಿಕೊಂಡಿದ್ದಾನೆ. ನೀವಿಬ್ಬರೂ ಇಲ್ಲೇ ಇದ್ದರೆ, ಅವನ ಆರೋಗ್ಯಕ್ಕೂ ಸಮಸ್ಯೆ ಆಗುತ್ತದೆ ಎಂದು ಹೇಳುತ್ತಾಳೆ. ಆ ಹುಡುಗಿಯನ್ನು ನಾನು ನೋಡಿ ನೋಡಿಕೊಳ್ಳುತ್ತೇನೆ ಎಂದು ಕಳಿಸಲು ಮುಂದಾಗುತ್ತಾಳೆ. ಅಷ್ಟರಲ್ಲಿ ಪೊಲೀಸರು ಬಂದು ಮಾಹಿತಿ ಪಡೆಯುತ್ತಾರೆ. ಭೂಮಿಕಾ ಹುಡುಗಿಯ ಮನೆಯವರನ್ನು ಕರೆಸಬೇಕಿತ್ತು ಎಂದು ಪೊಲೀಸರ ಬಳಿ ಹೇಳಿದಾಗ ಗೌತಮ್ ಇನ್ನಷ್ಟು ಗಾಬರಿಗೊಳ್ಳುತ್ತಾನೆ.

Advertisement

ಆರೋಗ್ಯ4 days ago

ಕಾಫಿ ಜೊತೆ 1 ಸ್ಪೂನ್‌ ತುಪ್ಪ ಸೇರಿಸಿ ಕುಡಿರಿ, ಸೊಂಟ ಸುತ್ತ ಇರೋ ಬೊಜ್ಜು ಅದ್ರಂತೆ ಕರಗಿಹೋಗುತ್ತೆ!

ರಾಜಕೀಯ2 weeks ago

ಶ್ರೀರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ, ಪ್ರಧಾನಿ ನರೇಂದ್ರ ಮೋದಿಯಿಂದ ರಾಮರಾಜ್ಯ ನಿರ್ಮಾಣ

ಆರೋಗ್ಯ2 weeks ago

ಹೆಂಡತಿ ಗರ್ಭಿಣಿಯಾಗಿದ್ದಾಗ ಪ್ರತಿಯೊಬ್ಬ ಗಂಡಂದಿರು ಮಾಡಲೇಬೇಕಾದ ಕೆಲಸಗಳಿವು!

ಸಿನಿಮಾ2 weeks ago

ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ, ಪಂಚಭೂತಗಳಲ್ಲಿ ಪ್ರಚಂಡ ಕುಳ್ಳ ಲೀನ

ಸಿನಿಮಾ2 weeks ago

ದ್ವಾರಕೀಶ್ ಅಂತಿಮ ದರ್ಶನಕ್ಕೆ ಬಂದ ಯಶ್ ದಂಪತಿ

ಸಿನಿಮಾ2 weeks ago

ಮಂತ್ರಾಲಯ ಭಕ್ತರಿಗೆ ಒಂದೊಳ್ಳೆ ಗಿಫ್ಟ್ ಕೊಟ್ಟಿದ್ರು ಈ ಹಾಸ್ಯನಟ!

ಜ್ಯೋತಿಷ್ಯ2 weeks ago

ಭಗವಾನ್ ರಾಮನಿಗೆ ಈ ವಸ್ತುಗಳನ್ನ ಅರ್ಪಿಸಿ, ಸಂತೋಷ-ಸಮೃದ್ಧಿ ಸಿಗುತ್ತೆ

ಬೆಂಗಳೂರು2 weeks ago

ದ್ವಾರಕೀಶ್ ನಿಧನಕ್ಕೆ ಪ್ರಧಾನಿ ಮೋದಿ, ರಜನಿಕಾಂತ್ ಸಂತಾಪ..!

ಕ್ರೀಡೆ3 weeks ago

ಟಾಸ್​​ ಗೆದ್ದ ಬೆಂಗಳೂರು ಟೀಂ, ಆರ್​​ಸಿಬಿ ಪ್ಲೇಯಿಂಗ್​ 11ನಿಂದ ಸಿರಾಜ್-ಮ್ಯಾಕ್ಸಿ​ ಔಟ್!

ಬೆಂಗಳೂರು3 weeks ago

ಶಿವರಾಜ್​ಕುಮಾರ್ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಕೋಟಿ ಸಾಲ ಗೊತ್ತಾ..?

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured10 months ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured10 months ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

ಆರೋಗ್ಯ2 years ago

ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್​ಡೌನ್​ ಫಿಕ್ಸಾ.?