TV ಸೀರಿಯಲ್ : ಮಹಿಮಾ ಮಗುವನ್ನು ತೆಗೆಸಿದ್ದು ತನ್ನ ಬ್ಯೂಟಿ ನ ಕಾಪಾಡಿಕೊಳ್ಳಲು ಎಂಬ ಸತ್ಯ ಇನ್ನೂ ಯಾರಿಗೂ ಗೊತ್ತಾಗಿಲ್ಲ. ಆದರೆ, ಮಹಿಮಾ ತಾನು ಮಾಡಿದ್ದು ತಪ್ಪು ಎಂದು ಪಶ್ಚಾತಾಪ ಪಡುತ್ತಿದ್ದಾಳೆ. ಅದಲ್ಲದೇ, ಮಂದಾಕಿನಿ ಹಾಗೂ ಸದಾಶಿವ ಇಬ್ಬರೂ ಸೊಸೆಗೆ ಆದಷ್ಟು ಬೇಗನೇ ಮಗುವಾಗಲಿ ಎಂದು ಉಪವಾಸ ಮಾಡಿ ವ್ರತ ಮಾಡುತ್ತಿರುವುದು ಇನ್ನಷ್ಟು ಕಾಡುತ್ತಿದೆ. ಹೀಗಾಗಿ ಮಹಿಮಾ ಜೀವನ ಬಳಿ ನಡೆದ ಘಟನೆಯನ್ನೆಲ್ಲಾ ಹೇಳಿಬಿಡಬೇಕು ಎಂದು ಭಾವಿಸುತ್ತಾಳೆ. ಅದೇ ರೀತಿ ಜೀವನ್ ಗೆ ಸತ್ಯವನ್ನು ಹೇಳಲು ಮುಂದಾಗುತ್ತಾಳೆ.
ಮಹಿಮಾಳನ್ನು ಜೀವನ್ ಬೈಯುತ್ತಾನೆ. ನಿನಗೆ ನಮ್ಮ ಮನೆಯವರು, ನಿಮ್ಮ ಮನೆಯವರು ಅಥವಾ ಮಗು ಏನಾದರೂ ತೊಂದರೆ ಮಾಡಿತ್ತಾ. ಆ ಪುಟ್ಟ ಮಗುವನ್ನು ಸಾಯಿಸಲು ಮನಸಾದರೂ ಹೇಗೆ ಬಂತು ಎಂದು ಕೋಪ ಮಾಡಿಕೊಂಡು ಜಗಳ ಮಾಡುತ್ತಾನೆ. ಆದರೆ, ಇದೆಲ್ಲವೂ ಮಹಿಮಾಳ ಕನಸಾಗಿರುತ್ತದೆ. ಒಂದು ವೇಳೆ ತಾನು ಅಬಾರ್ಷನ್ ಮಾಡಿಸಿಕೊಂಡ ವಿಚಾರವನ್ನು ಹೇಳಿದರೆ ಜೀವನ್ ಹೇಗೆ ರಿಯಾಕ್ಟ್ ಮಾಡಬಹುದು ಎಂದು ಊಹಿಸಿಕೊಳ್ಳುತ್ತಾಳೆ. ಸತ್ಯ ಹೇಳಿದರೆ, ಯಾರೂ ಮಹಿಮಾ ಕೆಲಸವನ್ನು ಒಪ್ಪುವುದಿಲ್ಲ ಎಂದು ಅರ್ಥ ಮಾಡಿಕೊಂಡ ಅವಳು, ಕೊನೆಗೆ ಜೀವನ್ ಬಳಿ ಸೆಕೆಂಡ್ ಹನಿಮೂನ್ ಗೆ ಹೋಗೋಣ ಎನ್ನುತ್ತಾಳೆ.
ಇಬ್ಬರೂ ಆಫೀಸ್ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದೀವಿ. ಇಬ್ಬರೂ ಸ್ವಲ್ಪ ದಿನ ಹೊರಗೆ ಹೋಗಿ ಬರೋಣ ಎಂದು ಕೇಳುತ್ತಾಳೆ. ಅದಕ್ಕೆ ಜೀವನ್ ಸ್ವಲ್ಪ ದಿನ ಕಷ್ಟ, ಸದ್ಯಕ್ಕೆ ಆಗೋದಿಲ್ಲ ಎಂದು ಹೇಳುತ್ತಾನೆ. ಮಹಿಮಾ ಬೇಸರ ಮಾಡಿಕೊಳ್ಳದೇ ಇದ್ದಿದ್ದನ್ನು ಕಂಡು ಪರವಾಗಿಲ್ಲವೇ ಬದಲಾಗಿದ್ದೀಯಾ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಿದ್ದೀಯಾ ಎಂದು ಹೇಳುತ್ತಾನೆ. ಇನ್ನು ಸದಾಶಿವ ಮನೆಯವರಿಗೆಲ್ಲಾ ಕೈ ತುತ್ತು ನೀಡುತ್ತಾನೆ. ಮಹಿಮಾ ಕೂಡ ಇಷ್ಟಪಟ್ಟು ಮಾವನ ಕೈ ತುತ್ತು ತಿನ್ನುತ್ತಾಳೆ.
ಶಕುಂತಲಾ ಗೌತಮ್ ಗೋಸ್ಕರ ಆಸ್ಪತ್ರೆಗೆ ಬಂದಿದ್ದಾಳೆ. ಗೌತಮ್ ನನ್ನು ಸಪರೇಟ್ ಆಗಿ ಕರೆದು, ಹೀಗೆಲ್ಲಾ ಹೆದರಿಕೊಂಡರೆ ಕಷ್ಟವಾಗುತ್ತದೆ. ಭೂಮಿಕಾಳಿಗೆ ಅನುಮಾನ ಬಂದು ಸತ್ಯ ಗೊತ್ತಾಗಬಹುದು. ಇದನ್ನೆಲ್ಲಾ ನಾನು ನೋಡಿಕೊಳ್ಳುತ್ತೇನೆ ನೀನು ಮನೆಗೆ ಹೋಗು ಎಂದು ಹೇಳುತ್ತಾಳೆ. ಭೂಮಿಕಾಳಿಗೂ ಕೂಡ ಗೌತಮ್ ಟೆಷ್ಷನ್ ಮಾಡಿಕೊಂಡಿದ್ದಾನೆ. ನೀವಿಬ್ಬರೂ ಇಲ್ಲೇ ಇದ್ದರೆ, ಅವನ ಆರೋಗ್ಯಕ್ಕೂ ಸಮಸ್ಯೆ ಆಗುತ್ತದೆ ಎಂದು ಹೇಳುತ್ತಾಳೆ. ಆ ಹುಡುಗಿಯನ್ನು ನಾನು ನೋಡಿ ನೋಡಿಕೊಳ್ಳುತ್ತೇನೆ ಎಂದು ಕಳಿಸಲು ಮುಂದಾಗುತ್ತಾಳೆ. ಅಷ್ಟರಲ್ಲಿ ಪೊಲೀಸರು ಬಂದು ಮಾಹಿತಿ ಪಡೆಯುತ್ತಾರೆ. ಭೂಮಿಕಾ ಹುಡುಗಿಯ ಮನೆಯವರನ್ನು ಕರೆಸಬೇಕಿತ್ತು ಎಂದು ಪೊಲೀಸರ ಬಳಿ ಹೇಳಿದಾಗ ಗೌತಮ್ ಇನ್ನಷ್ಟು ಗಾಬರಿಗೊಳ್ಳುತ್ತಾನೆ.
ಕಾಫಿ ಜೊತೆ 1 ಸ್ಪೂನ್ ತುಪ್ಪ ಸೇರಿಸಿ ಕುಡಿರಿ, ಸೊಂಟ ಸುತ್ತ ಇರೋ ಬೊಜ್ಜು ಅದ್ರಂತೆ ಕರಗಿಹೋಗುತ್ತೆ!
ಶ್ರೀರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ, ಪ್ರಧಾನಿ ನರೇಂದ್ರ ಮೋದಿಯಿಂದ ರಾಮರಾಜ್ಯ ನಿರ್ಮಾಣ
ಹೆಂಡತಿ ಗರ್ಭಿಣಿಯಾಗಿದ್ದಾಗ ಪ್ರತಿಯೊಬ್ಬ ಗಂಡಂದಿರು ಮಾಡಲೇಬೇಕಾದ ಕೆಲಸಗಳಿವು!
ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ, ಪಂಚಭೂತಗಳಲ್ಲಿ ಪ್ರಚಂಡ ಕುಳ್ಳ ಲೀನ
ದ್ವಾರಕೀಶ್ ಅಂತಿಮ ದರ್ಶನಕ್ಕೆ ಬಂದ ಯಶ್ ದಂಪತಿ
ಮಂತ್ರಾಲಯ ಭಕ್ತರಿಗೆ ಒಂದೊಳ್ಳೆ ಗಿಫ್ಟ್ ಕೊಟ್ಟಿದ್ರು ಈ ಹಾಸ್ಯನಟ!