ಕೋಲಾರ : ಕೊರೊನಾ ನಡುವೆಯು ರಾಜ್ಯಾದ್ಯಂತ ಸಂಕ್ರಾಂತಿ ಹಬ್ಬದ ಸಡಗರ ಕಳೆಗಟ್ಟಿದೆ. ಆದರೆ ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ತಲ ತಲಾಂತರಗಳಿಂದ ಸಂಕ್ರಾಂತಿ ಹಬ್ಬ ಬಂದಿತೆಂದರೆ ಗ್ರಾಮದಲ್ಲಿ ಸೂತಕದ ಛಾಯೆ ಮೂಡುತ್ತದೆ. ಈ ಗ್ರಾಮದಲ್ಲಿ ಎರಡು ತಲೆಮಾರಿನ ಹಿಂದೆ, ಸಂಕ್ರಾಂತಿ ಹಬ್ಬದ ಆಚರಣೆ ಸಂದರ್ಭದಲ್ಲಿ ರಾಸುಗಳಿಗೆ ಕಿಚ್ಚಾಯಿಸುವ ವೇಳೆ ಹಸುಗಳು, ಎತ್ತುಗಳಿಗೆ ಗಾಯಗಳಾಗಿ ಗ್ರಾಮದಿಂದಲೇ ಓಡಿಹೊಗಿವೆ. ಕೆಲ ಹಸುಗಳಿಗೆ ಸಾಂಕ್ರಾಮಿಕ ಖಾಯಿಲೆಗಳು ಕಂಡುಬಂದು ಕೆಲ ಹಸುಗಳು ಸಾವನ್ನಪ್ಪಿದ್ದವು.
ಹೀಗಾಗಿ ಭಯಭೀತರಾಗಿದ್ದ ಗ್ರಾಮಸ್ಥರು ಅರಾಭಿಕೊತ್ತನೂರು ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಆಚರಣೆಯನ್ನೆ ಮರೆತಿದ್ದಾರೆ. ಸಂಕ್ರಾಂತಿ ಹಬ್ಬವೆಂದರೆ ಗ್ರಾಮೀಣ ಭಾಗದಲ್ಲೆ ಸಂಭ್ರಮ ಸಡಗರದಿಂದ ಆಚರಿಸುವುದನ್ನ ಕಾಣಬಹುದು. ಆದರೆ ಈ ಗ್ರಾಮದಲ್ಲಿ ಹಬ್ಬದ ವಾತಾವರಣವೇ ಕಾಣಸಿಗುವುದಿಲ್ಲ.
ರಾಸುಗಳಿಗೆ ಪೂಜೆ ಮಾಡದಿರುವುದು, ತೋರಣ ಕಟ್ಟದಿರುವುದು, ರಂಗೋಲಿ ಹಾಕದಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈ ಕುರಿತು ಮಾತನಾಡಿರುವ ಗ್ರಾಮದ ಹಿರಿಯರಾದ ನಂಜುಂಡೇ ಗೌಡ ಅವರು ಹಿರಿಯರ ಆಚರಣೆಯಂತೆ ನಾವು ಸಂಕ್ರಾಂತಿ ಹಬ್ಬವನ್ನ ಆಚರಣೆ ಮಾಡುತ್ತಿಲ್ಲ. ಆದರೆ ಬಸವ ಜಯಂತಿಯ ದಿನ ಗೋಪೂಜೆಯನ್ನ ಮಾಡುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಫಿ ಜೊತೆ 1 ಸ್ಪೂನ್ ತುಪ್ಪ ಸೇರಿಸಿ ಕುಡಿರಿ, ಸೊಂಟ ಸುತ್ತ ಇರೋ ಬೊಜ್ಜು ಅದ್ರಂತೆ ಕರಗಿಹೋಗುತ್ತೆ!
ಶ್ರೀರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ, ಪ್ರಧಾನಿ ನರೇಂದ್ರ ಮೋದಿಯಿಂದ ರಾಮರಾಜ್ಯ ನಿರ್ಮಾಣ
ಹೆಂಡತಿ ಗರ್ಭಿಣಿಯಾಗಿದ್ದಾಗ ಪ್ರತಿಯೊಬ್ಬ ಗಂಡಂದಿರು ಮಾಡಲೇಬೇಕಾದ ಕೆಲಸಗಳಿವು!
ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ, ಪಂಚಭೂತಗಳಲ್ಲಿ ಪ್ರಚಂಡ ಕುಳ್ಳ ಲೀನ
ದ್ವಾರಕೀಶ್ ಅಂತಿಮ ದರ್ಶನಕ್ಕೆ ಬಂದ ಯಶ್ ದಂಪತಿ
ಮಂತ್ರಾಲಯ ಭಕ್ತರಿಗೆ ಒಂದೊಳ್ಳೆ ಗಿಫ್ಟ್ ಕೊಟ್ಟಿದ್ರು ಈ ಹಾಸ್ಯನಟ!