ರೈಸಿಂಗ್ ಕನ್ನಡ ವೆಬ್:
ಮುಂಬೈ:
ಕೊರೊನಾ ಕಾಲದಲ್ಲಿ ಎಲ್ಲಾ ಕಂಪನಿಗಳು ನಷ್ಟದ ಮಾತು ಮಾತ್ರ ಆಡುತ್ತಿವೆ. ಕಾಸ್ಟ್ ಕಟ್ಟಿಂಗ್, ಎಂಪ್ಲಾಯಿಗಳ ಕಡಿತ ಎಲ್ಲವೂ ನಡೆಯುತ್ತಿದೆ. ಆದ್ರೆ ರಿಲಯನ್ಸ್ ಇಂಡಸ್ಟ್ರೀಸ್ ದಾರಿ ಮಾತ್ರ ಎಲ್ಲರಿಗಿಂತ ಭಿನ್ನ. ತಾನು ನಡೆದಿದ್ದೇ ದಾರಿ ಎನ್ನುವಂತೆ ರಿಲಯನ್ಸ್ ಇಂಡಸ್ಟ್ರೀಸ್ ಮುನ್ನುಗ್ಗುತ್ತಿದೆ. ಷೇರು ಪೇಟೆಯ ಗೂಳಿಯನ್ನೇ ಮುಷ್ಟಿಯಲ್ಲಿ ಇಟ್ಟುಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಸಾರ್ವಕಾಲೀಕ ದಾಖಲೆ ಬರೆದಿದೆ. 11 ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯ ಹೊಂದಿರುವ ದೇಶದ ಮೊದಲ ಮತ್ತು ಏಕೈಕ ಕಂಪನಿಯಾಗಿ ರಿಲಯನ್ಸ್ ಇಂಡಸ್ಟ್ರೀಸ್ ಇತಿಹಾಸ ಬರೆದಿದೆ.
ಶುಕ್ರವಾರದ ಷೇರು ಪೇಟೆಯಲ್ಲಿ ಮುನ್ನುಗ್ಗಿದ್ದೇ ರಿಲಯನ್ಸ್. ಆರಂಭದಲ್ಲೇ ಭಾರೀ ವಹಿವಾಟು ಕಂಡ ರಿಲಯನ್ಸ್ ಷೇರು ಗಮನಾರ್ಹ ಏರಿಕೆ ದಾಖಲಿಸಿತು. ಸೆನ್ಸೆಕ್ಸ್ನಲ್ಲಿ 6.23% ಹಾಗೂ ನಿಫ್ಟಿಯಲ್ಲಿ 6.25%ನಷ್ಟು ಏರಿಕೆ ಕಂಡು ವಹಿವಾಟು ಮುಗಿಸಿದೆ. ಶುಕ್ರವಾರದ ಅಂತ್ಯಕ್ಕೆ ಸೆನ್ಸೆಕ್ಸ್ನಲ್ಲಿ ರಿಲಯನ್ಸ್ ಷೇರು 1759.50 ರೂಪಾಯಿಗಳಿದ್ದರೆ, ನಿಫ್ಟಿಯಲ್ಲಿ 1759.40 ರೂಪಾಯಿ ವಹಿವಾಟು ದಾಖಲಿಸಿ ವಾರಾಂತ್ಯಕ್ಕೆ ಕಾಲಿಟ್ಟಿದೆ. ಶುಕ್ರವಾರ ಒಂದೇ ದಿನ ರಿಲಯನ್ಸ್ ಷೇರು ಸೆನ್ಸೆಕ್ಸ್ನಲ್ಲಿ 103.25 ಹಾಗೂ ನಿಫ್ಟಿಯಲ್ಲಿ 103.50 ಪಾಯಿಂಟ್ ಗಳಷ್ಟು ಏರಿಕೆ ಕಂಡಿತ್ತು.
ಶುಕ್ರವಾರದ ಆರಂಭದಲ್ಲೇ ರಿಲಯನ್ಸ್ ನಿವ್ವಳ ಸಾಲ ಮುಕ್ತ ಕಂಪನಿ ಎಂದು ರಿಲಯನ್ಸ್ ತಿಳಿಸಿತ್ತು. ಇದಾದ ನಂತರ ಷೇರು ಪೇಟೆಯ ಗೂಳಿ ಸಂಪೂರ್ಣವಾಗಿ ರಿಲಯನ್ಸ್ ಹಿಡಿತಕ್ಕೆ ಬಂದಿತ್ತು. ಸುಮಾರು 11.30ರ ಹೊತ್ತಿಗೆ ರಿಲಯನ್ಸ್ ಇಂಡಸ್ಟ್ರೀಸ್ 11 ಲಕ್ಷ ಕೋಟಿ ಮಾರುಕಟ್ಟೆ ಹೊಂದಿರುವ ದೇಶದ ಮೊದಲ ಕಂಪನಿ ಎನ್ನುವ ಹೆಗ್ಗಳಿಕೆ ಪಡೆಯಿತು. ಕೊರೊನಾ ಲಾಕ್ ಡೌನ್ ಆರಂಭದಲ್ಲಿ ಅಂದ್ರೆ ಮಾರ್ಚ್ ಕೊನೆಯ ವಾರದಲ್ಲಿ ರಿಲಯನ್ಸ್ ಷೇರು 52 ವಾರಗಳ ಲೆಕ್ಕಚಾರದಲ್ಲಿ ಕನಿಷ್ಟ ಅಂದ್ರೆ 867.32 ರೂಪಾಯಿಗೆ ತಲುಪಿತ್ತು. ಆದ್ರೆ 3 ತಿಂಗಳಲ್ಲಿ ಸುಮಾರು 95% ಏರಿಕೆ ದಾಖಲಿಸಿ ಸೆನ್ಸೆಕ್ಸ್ನಲ್ಲಿ 1759.50 ಹಾಗೂ ನಿಫ್ಟಿಯಲ್ಲಿ 1759.50 ರೂಪಾಯಿಗೆ ತಲುಪಿದೆ. ಮುಕೇಶ್ ಅಂಬಾನಿಯ ಆರ್ಐಎಲ್ ಒಟ್ಟು 58 ದಿನಗಳಲ್ಲಿ ಮ್ಯಾಜಿಕ್ ಎನ್ನುವಂತೆ ದಾಖಲೆ ಮೇಲೆ ದಾಖಲೆ ಬರೆದಿದೆ.
ಕೊರೊನಾ ಅದೆಷ್ಟೋ ಶ್ರೀಮಂತರ ಆದಾಯವನ್ನು ನುಂಗಿ ನೀರು ಕುಡಿದಿದ್ದರೆ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಮಾತ್ರ ಅದೃಷ್ಟವನ್ನೇ ತಂದುಕೊಟ್ಟಹಾಗಿದೆ. ಕೆಲ ವಾರಗಳ ಹಿಂದೆ ಮುಕೇಶ್ ಏಷ್ಯಾದ ನಂಬರ್ 1 ಶ್ರೀಮಂತನಾಗಿದ್ದ ಆಲಿಬಾಬಾ ಮುಖ್ಯಸ್ಥ ಜಾಕ್ ಮಾ ರನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದರು. ಈಗ ಭಾರತದಲ್ಲೇ 11 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿರುವ ಏಕೈಕ ಕಂಪನಿಯಾಗಿರುವುದು ಇತಿಹಾಸ ಸೃಷ್ಟಿ ಮಾಡಿದೆ.
ಮಗುವಿನ ವಿಚಾರಕ್ಕೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್!
RCB ತಂಡದಲ್ಲಿ ಅಬ್ಬರಿಸುತ್ತಿದ್ದಾನೆ ಸೆಹ್ವಾಗ್ ಸೋದರಳಿಯ!
ಬಿಳಿ ಅಥವಾ ಗುಲಾಬಿ ಇವೆರಡರಲ್ಲಿ ಯಾವ ಬಣ್ಣದ ಸೀಬೆಹಣ್ಣು ಆರೋಗ್ಯಕ್ಕೆ ಬೆಸ್ಟ್!
ಭೀಕರ ರಸ್ತೆ ಅಪಘಾತದಲ್ಲಿ ಶಾಸಕಿ ದುರ್ಮರಣ
ಮೂರು ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ದೂರು ದಾಖಲು: ಡಾ: ಕುಮಾರ
ಯಪ್ಪಾ,, ಜಿದ್ದಿಗೆ ಬಿದ್ದ ಕುದುರೆ ಎತ್ತಿನಾಟ
ಎತ್ತುಗಳ ಶರವೇಗಕ್ಕೆ ಕುದುರೆ ಕಂಗಾಲು