Featured
ಪಶುಗಳಿಗಾಗಿ ಪಶುಸಂಜೀವಿನಿ ಹೆಸರಿನಲ್ಲಿ ಪಶು ಆಂಬುಲೆನ್ಸ್ ಲೋಕಾರ್ಪಣೆ

ರೈಸಿಂಗ್ ಕನ್ನಡ:
ವಿಶ್ವಕುಮಾರ್, ಬೀದರ್:
ರಾಜ್ಯದಲ್ಲಿ ಮೊದಲ ಬಾರಿಗೆ ಪಶುಸಂಗೋಪನಾ ಇಲಾಖೆವತಿಯಿಂದ ಪಶುಗಳ ರಕ್ಷಣೆಗಾಗಿ ಪಶುಸಂಜೀವಿನಿ ಹೆಸರಿನಲ್ಲಿ ಬೆಂಗಳೂರು ವಿಧಾನಸೌಧದ ಮುಂದೆ ಸಿಎಂ ಬಿ.ಎಸ್ ಯಡಿಯೂರಪ್ಪ ಪಶುಸಂಜೀವಿನಿ ಲೋಕಾರ್ಪಣೆ ಮಾಡಿದರು.
ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಶುಸಂಗೋಪನ ಸಚಿವ ಪ್ರಭುಚೌಹಾಣ್ ಪಶುಸಂಜೀವಿನಿಗೆ ಹಸಿರು ನಿಶಾನೆ ತೋರಿದರು. ಬಳಿಕ ಮಾತನಾಡಿದ ಪಶುಸಂಗೋಪನಾ ಸಚಿವ ಪ್ರಭುಚೌಹಾಣ್,ಸದ್ಯ ರಾಜ್ಯದ 18 ಭಾಗಗಳಿಗೆ ಪಶುಸಂಜೀವಿನಿ ವಸ್ಯವಸ್ಥೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಿಗೆ ಪಶುಸಂಜೀವಿನಿ ವ್ಯವಸ್ಥೆ ಮಾಡಲಾಗುವುದು ಎಂದರು.
ಪಶುಪಾಲಕರು,ರೈತರು,ಜಾನುವಾರು ಸಾಕಗಾಣಿಕೆಯಲ್ಲಿ ತೊಡಗಿರುವವರಿಗೆ ಜಾನುವಾರುಗಳ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಸದ್ಯದಲ್ಲಿ ಪಾಶುಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಈ ಪಶುಸಂಜೀವಿನಿಯಲ್ಲಿ ಅತ್ಯಾಧುನಿಕ ವಿಶೆಷ ಸೌಲಭ್ಯಗಳಿದ್ದು, ರೈತರು ತಮ್ಮ ಜಾನುವಾರುಗಳ ಆರೋಗ್ಯ ಕಾಪಾಡುವ ದೃಷ್ಠಿಯಿಂದ ರೈತರಿಗೆ ಇದು ಸಹಕಾರಿಯಾದಂತಾಗಿದೆ ಎಂದು ವಿವರಿಸಿದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?