Featured
ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ಫುಲ್ ಡ್ರಿಲ್ : ಏನ್ ಹೇಳಿದ್ರೂ ಸ್ವೀಟಿ..?

ರೈಸಿಂಗ್ ಕನ್ನಡ :- ವಂಚಕ ಯುವರಾಜ ಸ್ವಾಮಿ ಪ್ರಕರಣದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಸಿಕ್ಕಿ ಬೀಳೋ ಎಲ್ಲಾ ಸಾಧ್ಯತೆಗಳಿವೆ. ಸ್ವಾಮಿ ವಿಚಾರವಾಗಿ ಸಿಸಿಬಿ ಎದುರು ರಾಧಿಕಾ ವಿಚಾರಣೆ ಎದುರಿಸಿದ್ರು. ಬರೋಬ್ಬರಿ 4 ಗಂಟೆಗಳ ಕಾಲ ರಾಧಿಕಾ ವಿಚಾರಣೆ ನಡೀತು. ಈ ವೇಳೆ, ಹಲವು ಪ್ರಶ್ನೆಗಳಿಗೆ ಉತ್ತರಿಸಿರೋ ರಾಧಿಕಾ, ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
4 ಗಂಟೆಗಳ ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತ್ನಾಡಿದ ರಾಧಿಕಾ ಕುಮಾರಸ್ವಾಮಿ, ನಾನು ಊರು ಬಿಟ್ಟು ಎಲ್ಲೂ ಓಡಿಹೋಗಲ್ಲ. ಹೆದರಿ ಓಡೋಗೋ ಕೆಲ್ಸ ನಾನೇನೂ ಮಾಡಿಲ್ಲ ಎಂದಿದ್ದಾರೆ. ಸಿಸಿಬಿ ಪ್ರಶ್ನೆಗಳಿಗೆ ಈಗಾಗ್ಲೇ ಉತ್ತರ ನೀಡಿದ್ದೇನೆ. ಸಿಸಿಬಿ ಕರೆದ್ರೆ ಮತ್ತೆ ವಿಚಾರಣೆಗೆ ಹಾಜರಾಗ್ತೇನೆ ಎಂದ್ರು.

ಇದೇ ವೇಳೆ, ಯುವರಾಜ್ ಜೊತೆ ನನ್ನ ಮುಖಾಮುಖಿ ವಿಚಾರಣೆ ನಡೆಸಿಲ್ಲ ಅಂತ ರಾಧಿಕಾ ಸ್ಪಷ್ಟನೆ ನೀಡಿದ್ರು. ರಾಧಿಕಾ ವಿಚಾರಣೆ ನಡೀತಿದ್ದ ವೇಳೆ, ವಂಚಕ ಸ್ವಾಮಿಯನ್ನ, ಸಿಸಿಬಿ ಕಚೇರಿಗೆ ಕರೆತರಲಾಯ್ತು. ಈ ವೇಳೆ, ರಾಧಿಕಾ ಮತ್ತು ಸ್ವಾಮಿಯ ಮುಖಾಮುಖಿ ವಿಚಾರಣೆ ನಡೆಯಬಹುದು ಎನ್ನಲಾಗಿತ್ತು. ಆದ್ರೆ, ಇಬ್ಬರ ಮುಖಾಮುಖಿ ವಿಚಾರಣೆ ನಡೆದಿಲ್ಲ ಅಂತ ರಾಧಿಕಾ ಹೇಳಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?