Featured
ಅಕ್ಟೋಬರ್ 18 ಮಧ್ಯರಾತ್ರಿ 12:59ಕ್ಕೆ ಜೀವನದಿ ಕಾವೇರಿ ತೀರ್ಥೋದ್ಭವ..!

ಮಡಿಕೇರಿ : ಸಾಮಾನ್ಯವಾಗಿ ಬೆಳಗ್ಗೆ ಅಥವಾ ಸಂಜೆ ಬರ್ತಿದ್ದ ಕಾವೇರಿ ತೀರ್ಥೋದ್ಭವ ಈ ಬಾರಿ ಮಧ್ಯರಾತ್ರಿ ಬಂದಿದೆ. ಹೌದು, ಈ ವರ್ಷ ಅಕ್ಟೋಬರ್ 18ರ ಮಧ್ಯರಾತ್ರಿ 12:59 ನಿಮಿಷಕ್ಕೆ ಕಾವೇರಿ ತೀರ್ಥೋದ್ಭವ ಆಗಲಿದೆ. ಜೀವನದಿ ಕಾವೇರಿ ಈ ಬಾರಿ ಮಧ್ಯರಾತ್ರಿ ತೀರ್ಥ ರೂಪಿಯಾಗಿ ಕಾಣಸಿಕೊಳ್ಳಲಿದ್ದಾಳೆ.
ಕಾವೇರಿ ಉಗಮಸ್ಥಾನ ತಲಕಾವೇರಿಯ
ಕುಂಡಿಕೆಯಲ್ಲಿ ಕಾವೇರಿ ತೀರ್ಥೋದ್ಭವಾಗಿ ದರ್ಶನ ನೀಡಲಿದ್ದಾಳೆ. ತೀರ್ಥೋದ್ಭವದ ಬಗ್ಗೆ ಭಗಂಡೇಶ್ವರ
ತಲಕಾವೇರಿ ದೇವಾಲಯ ಸಮಿತಿ ಪ್ರಕಟಣೆ ಹೊರಡಿಸಿದೆ. ಸೆಪ್ಟೆಂಬರ್ 27ರಿಂದ ವಿವಿಧ ಕಾರ್ಯಕ್ರಮಗಳು ಶುರುವಾಗಲಿದ್ದು,
ಅಂದು ಅಂದ್ರೆ, ಸೆಪ್ಟೆಂಬರ್ 27ರಂದು ಬೆಳಗ್ಗೆ 9:15ರ ತುಲಾ ಲಗ್ನದಲ್ಲಿ ಅಕ್ಕಿ ಹಾಕುವ ಕಾರ್ಯ ಶುರುವಾಗಲಿದೆ.
ಒಟ್ನಲ್ಲಿ ಕಳೆದ ಎರಡು ವರ್ಷಗಳಿಂದ ಜೀವನದಿ ಕಾವೇರಿ ತುಂಬಿ ಹರಿಯುತ್ತಿದ್ದಾಳೆ. ಕಳೆದ ವರ್ಷವಂತೂ ಇಡೀ ಮಡಿಕೇರಿಯನ್ನೇ ಮಳೆ ನುಂಗಿ ನೀರು ಕುಡಿತ್ತು. ಎಲ್ಲರೂ ಚೆನ್ನಾಗಿರಲಿ ಎಂದು ನಡೆಯುವ ವಿಶೇಷ ಪೂಜೆ ಕೈಂಕರ್ಯಗಳಲ್ಲಿ ಇದೂ ಕೂಡ ಒಂದು. ಕಾವೇರಿ ತೀರ್ಥೋದ್ಭವವನ್ನ ಕಂಣ್ತುಂಬಿಕೊಳ್ಳಲು ಸಾವಿರಾರು ಭಕ್ತರು, ಪ್ರವಾಸಿಗರು ತಲಕಾವೇರಿಗೆ ಬರ್ತಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?