ಬೆಂಗಳೂರು : ಕೇಂದ್ರ ಸರ್ಕಾರದ ಹೊಸ ಮೋಟಾರು ಕಾಯ್ದೆಯನ್ನ ರಾಜ್ಯದ ಸರ್ಕಾರ ಸಡಿಲಗೊಳಿಸಿದೆ. ವಾಹನ ಸವಾರರಿಗೆ ದುಬಾರಿ ದಂಡ ತೆತ್ತುವ ಈ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡಿದ್ದರೂ, ದಂಡ ಮರುಪರಿಶೀಲನೆ ಆಗಲಿದೆ. ಬಹುತೇಕ ಶೇಕಡಾ 50ರಷ್ಟು ದಂಡ ಕಡಿತಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇವತ್ತಿನಿಂದಲೇ ದುಬಾರಿ ದಂಡಕ್ಕೆ ಬ್ರೇಕ್ ಬೀಳಲಿದ್ದು, ವಾಹನ ಸವಾರರು ಕೊಂಚ ನಿಟ್ಟುಸಿರು ಬಿಡಲಿದ್ದಾರೆ.
ದುಬಾರಿ ದಂಡಕ್ಕೆ ಬ್ರೇಕ್ ಬಿದ್ದಿದ್ರೂ, ವಾಹನ ಸವಾರರು ಬೇಕಾ ಬಿಟ್ಟ ವಾಹನ ಸಂಚಾರ ಮಾಡುವಂತಿಲ್ಲ. ಟ್ರಾಫಿಕ್ಸ್ ರೂಲ್ಸ್ ಫಾಲೋ ಮಾಡಲೇಬೇಕು. ಸರ್ಕಾರ ನಮ್ಮ ಬೇಡಿಕೆಗಳಿಗೆ ಬಗ್ಗಿದೆ ಎಂದುಕೊಂಡು, ಇಷ್ಟಬಂದಂತೆ ಸಂಚಾರಿ ನಿಯಮ ಉಲ್ಲಂಘಿಸಿದ್ರೆ ದುಬಾರಿ ದಂಡ ಅನ್ವಯ ಆಗುತ್ತೆ. ಒಮ್ಮೆ ಅಥವಾ ಎರಡೂ ಬಾರಿ ತಪ್ಪಿಸಿಕೊಂಡ್ರೆ ಬಚಾವ್ ಆಗ್ತೀವಿ ಅನ್ಕೋಬೇಡಿ. ಪದೇ ಪದೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ, ದುಬಾರಿ ದಂಡದ ಜೊತೆ ಜೈಲು ಶಿಕ್ಷೆಯೂ ಅನುಭವಿಸಬೇಕಾಗುತ್ತದೆ.
ದುಬಾರಿ ದಂಡಕ್ಕೆ ಬ್ರೇಕ್ ಹಾಕುವ ಕುರಿತು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಹೀಗಾಗಿ ಇವತ್ತಿನಿಂದ ದುಬಾರಿ ದಂಡಕ್ಕೆ ಬ್ರೇಕ್ ಬೀಳಲಿದೆ.
ಈ ಮಧ್ಯೆ, ಕೇಂದ್ರದ ಸಾರಿಗೆ ಸಚಿವ ನಿತಿನ್ ಗಡ್ಕರಿ ದಂಡ ಕಡಿತಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಗುಜರಾತ್, ಮಹಾರಾಷ್ಟ್ರ ಕೂಡ ದಂಡ ಕಡಿತ ಮಾಡಿತ್ತು. ಈಗ ಕರ್ನಾಟಕವೂ ದಂಡಕ್ಕೆ ಬ್ರೇಕ್ ಹಾಕಿದೆ. ಜೊತೆಗೆ ಉತ್ತರ ಪ್ರದೇಶ, ಉತ್ತರಾಖಂಡ್ ಕೂಡ ಕೇಂದ್ರದ ನೀತಿಯನ್ನ ವಿರೋಧಿಸಿವೆ. ಹೀಗಾಗಿ, ಕೇಂದ್ರದಲ್ಲಿರೋ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ನಿಯಮಗಳನ್ನೇ ರಾಜ್ಯಗಳಲ್ಲಿರೋ ಬಿಜೆಪಿ ಸರ್ಕಾರಗಳೇ ವಿರೋಧಿಸಿರೋದು ವಿಶೇಷ.
ಮಗುವಿನ ವಿಚಾರಕ್ಕೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್!
RCB ತಂಡದಲ್ಲಿ ಅಬ್ಬರಿಸುತ್ತಿದ್ದಾನೆ ಸೆಹ್ವಾಗ್ ಸೋದರಳಿಯ!
ಬಿಳಿ ಅಥವಾ ಗುಲಾಬಿ ಇವೆರಡರಲ್ಲಿ ಯಾವ ಬಣ್ಣದ ಸೀಬೆಹಣ್ಣು ಆರೋಗ್ಯಕ್ಕೆ ಬೆಸ್ಟ್!
ಪಿಯುಸಿ ಪರೀಕ್ಷಾ ಕೇಂದ್ರಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ, ಪರಿಶೀಲನೆ
Karavali Utsava | ಬೆಂಗಳೂರಲ್ಲಿ ಕರಾವಳಿಗರ ಉತ್ಸವ
Bangalore Water Crisis | ಬೆಂಗಳೂರಿಗೆ ಬೇಕಿದೆ ಕುಡಿಯುವ ನೀರಿನ ಗ್ಯಾರೆಂಟಿ – ಅಶೋಕ್