ರಾಕಿಂಗ್ ಸ್ಟಾರ್ ಯಶ್ ಚಿತ್ರರಂಗಕ್ಕೆ ಬಂದು 12 ವರ್ಷಗಳೇ ಕಳೆದಿವೆ. ಅದಕ್ಕಾಗಿ ತಮ್ಮ ಸಿನಿ ಕರಿಯರ್ನ ಆರಂಭಕ್ಕೆ ಕಾರಣರಾದಂತವರಿಗೆ ಯಶ್ ಧನ್ಯವಾದ ಅರ್ಪಿಸಿದ್ದಾರೆ.
‘ಮೊಗ್ಗಿನ ಮನಸ್ಸಿ’ನಲ್ಲಿ ‘ರಾಕಿ’ಯಾಗಿ ಎಂಟ್ರಿಕೊಟ್ಟು, ‘ಕಳ್ಳರ ಸಂತೆ’ಯನ್ನೇ ‘ಗೋಕುಲ’ವಾಗಿಸಿ ‘ಮೊದಲಾಸಲ’ ‘ರಾಜಧಾನಿ’ಗೆ ‘ಕಿರಾತಕ’ನಾಗಿ ಎಂಟ್ರಿಕೊಟ್ಟ ‘ಲಕ್ಕಿ’ ಈ ಯಶ್. ‘ಜಾನು’ ಅನ್ನುತ್ತಲೇ ‘ಡ್ರಾಮಾ’ ಮಾಡುತ್ತಾ ‘ಚಂದ್ರ’ನಿಗೆ ‘ಗೂಗ್ಲಿ’ ಎಸೆಯೋ ‘ರಾಜಾ ಹುಲಿ’ ಇವರು. ‘ಗಜಕೇಸರಿ’ಯಾಗಿ ‘ರಾಮಾಚಾರಿ’ ವೇಷ ತೊಟ್ಟು ‘ಮಾಸ್ಟರ್ ಪೀಸ್’ ಅಂದ್ರೆ ಹೀಗೆ ಇರೋದು ಅನ್ನೋದನ್ನ ಸ್ಯಾಂಡಲ್ವುಡ್ಗೆ ತೋರಿಸಿಕೊಟ್ರು. ‘ಸ್ಟ್ರೈಟ್ ಫಾರ್ವರ್ಡ್ ಸಂತು’ವಾಗಿ ‘ಕೆಜಿಎಫ್’ ಅನ್ನೋ ಕೋಟೆ ಕಟ್ಟಿದ ಈ ರಾಕಿ ಭಾಯ್ ಇದೀಗ ‘ಕೆಜಿಎಫ್-2’ಗೆ ಸಜ್ಜಾಗಿದ್ದಾರೆ.
ಈ 12 ವರ್ಷದ ಸಿನಿ ಪಯಣದ ಕುರಿತು ಫೇಸ್ಬುಕ್ನಲ್ಲಿ ಬರೆದುಕೊಂಡಿರೋ ಯಶ್, ಮೊಗ್ಗಿನ ಮನಸ್ಸಿನೊಂದಿಗೆ ನನ್ನ ಮತ್ತು ರಾಧಿಕಾ ಕರಿಯರ್ ಕೂಡ ಆರಂಭವಾಯ್ತು. ಮೊಗ್ಗಿನ ಮನಸ್ಸಿನಂತಹ ವಿಶೇಷ ಚಿತ್ರವನ್ನ ನೀಡಿದಕ್ಕಾಗಿ ಇ. ಕೃಷ್ಣಪ್ಪ ಸರ್ ಮತ್ತು ಗಂಗಾಧರ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಜೊತೆಯಲ್ಲೇ ಚಂದ್ರು ಸರ್, ಶಶಾಂಕ್ ಸರ್ಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ ಯಶ್.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?