Featured
ನೋಡ ಬನ್ನಿ ನಮ್ಮ ಮೈಸೂರು ದಸರಾ.. ನಾಡಹಬ್ಬಕ್ಕೆ ಎಸ್.ಎಲ್. ಭೈರಪ್ಪ, ಸಿಎಂ ಯಡಿಯೂರಪ್ಪ ಚಾಲನೆ

ಮೈಸೂರು : 409ನೇ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರೆಗೆ ಅದ್ದೂರಿ ಚಾಲನೆ ಸಿಕ್ಕಿದೆ. ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ, ಮುಖ್ಯಮಂತ್ರಿ ಯಡಿಯೂರಪ್ಪ ಜೊತೆಗೂಡಿ ಬೆಳಗ್ಗೆ 9.39ರಿಂದ 10.25ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡದೇವಿಯ ಮೂರ್ತಿಗೆ ಪುಷ್ಪಾರ್ಚನೆ ಮಾಡಿದ್ರು. ಈ ಮೂಲಕ ಅದ್ಧೂರಿ ದಸರಾಗೆ ಚಾಲನೆ ನೀಡಿದ್ರು.
ಇದಕ್ಕೂ ಮುನ್ನ, ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಎಸ್.ಎಲ್ ಭೈರಪ್ಪ ಮತ್ತು ಹಾಗು ಸಿಎಂ ಯಡಿಯೂರಪ್ಪ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ದಸರಾ ಉದ್ಘಾಟಿಸಿ ಮಾತಾನಾಡಿದ ಎಸ್.ಎಲ್.ಭೈರಪ್ಪ, ನವರು, ನಾನು ಕೂಡ ಚಾಮುಂಡಿ ಬೆಟ್ಟಕ್ಕೆ ನನ್ನ ಮೊಮ್ಮಕ್ಕಳ ಜೊತೆ ಬಂದು ತೀರ್ಥ ಹಾಕಿಸಿಕೊಂಡು ಪೂಜೆ ಮಾಡಿಸಿಕೊಂಡು ಹೋಗಿದೆ. ಕೆಲವರು ನೀವು ವಿಚಾರವಾದಿಗಳು, ನಿಮಗೆ ದೇವರ ಮೇಲೆ ನಂಬಿಕೆ ಇಲ್ಲ ಎಂದೆಲ್ಲ ಹೇಳಿದ್ರು. ಪ್ರಕೃತಿ ಮಾತೆಯಂತೆ ಹೆಣ್ಣು ದೇವರು ಎಂದು ನಾನು ಹೇಳುತ್ತೇನೆಂದು ದೇವರ ಬಗ್ಗೆ ಪ್ರಸ್ತಾಪಿಸಿದ್ರು.
ಇದೇ ವೇಳೆ ಮಾತ್ನಾಡಿದ ಸಿಎಂ ಯಡಿಯೂರಪ್ಪ, ನೆರೆಯಿಂದ ಉಂಟಾದ ಸಮಸ್ಯೆ ಸರಿ ಆಗಬೇಕು ಎಂದು ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ಈ ಬಾರಿಯ ದಸರಾ ಕೆಟ್ಟದ್ದನ್ನು ಅಳಿಸಿ ಹೊಸದನ್ನ ಬೆಳಗಲಿ. ಎಸ್.ಎಲ್.ಭೈರಪ್ಪ ದಸರಾ ಉದ್ಘಾಟನೆ ಮಾಡಿದ್ದು, ಸಂತೋಷ ತಂದಿದ್ದು, ಅವರು ಜ್ಞಾನಪೀಠ ಪ್ರಶಸ್ತಿಗೆ ಅರ್ಹರು ಎಂದ್ರು.
ಒಟ್ಟಿನಲ್ಲಿ ನವರಾತ್ರಿಯ ವೈಭವದ ದಸರಾಗೆ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, 9 ದಿನಗಳ ಕಾಲ ಮೈಸೂರಿನಾದ್ಯಂತ ದಸರೆಯ ಮೆರಗು, ಸಂಭ್ರಮ ಜೋರಾಗಿರಲಿದೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?