ಒಮ್ಮೆ ಅರ್ಜುನ ಕೃಷ್ಣನನ್ನು ಕೇಳ್ತಾನೆ, ಕೃಷ್ಣ ನಾವು ಕರ್ಣನಿಗಿಂತ ಹೆಚ್ಚಾಗಿ ದಾನ ಮಾಡ್ತೀವಿ. ಆದರೆ ಆತನನ್ನು ಮಾತ್ರ ದಾನಶೂರ ಅಂತ ಕರೆಯೋದು ಎಷ್ಟು ಸರಿ ಎಂದು ಪ್ರಶ್ನಿಸಿದಾಗ ಕೃಷ್ಣ ನಕ್ಕು, ನಾಳೆ ಅರಮನೆಗೆ ಬರಲು ಹೇಳಿ ಹಾಗೆ ಕರ್ಣನನ್ನು ಆಹ್ವಾನಿಸುತ್ತಾನೆ. ಮರುದಿನ ಅರಮನೆಗೆ ಬಂದ ಅರ್ಜುನ ಮತ್ತು ಕರ್ಣರಿಬ್ಬರಿಗು ಒಂದೊಂದು ಚಿನ್ನದ ಗಟ್ಟಿನಿಡಿ ಇದನ್ನು ನೀವು ಸ್ವಲ್ಪವು ಇಟ್ಟುಕೊಳ್ಳದೆ ಜನರಿಗೆ ದಾನ ಮಾಡಿ ಎಂದು ಕೃಷ್ಣ ಹೇಳುವನು.
ಚಿನ್ನದ ಗಟ್ಟಿ ಪಡೆದ ಅರ್ಜುನ ಅರಮನೆಗೆ ಬಂದು ಜನತೆಗೆ ಚಿನ್ನ ನೀಡುವುದಾಗಿ ಢಂಗುರ ಸಾರುವನು. ರಾಜ್ಯದ ಎಲ್ಲಾ ಜನರು ಅರಮನೆ ಬಳಿ ಬಂದು ಸೇರುವರು. ಅರ್ಜುನ ಎಲ್ಲಾ ಜನರಿಗೂ ಸ್ವಲ್ಪ ಚಿನ್ನ ನೀಡುತಾ ಹೋದರು ಚಿನ್ನದ ಗಟ್ಟಿ ಸ್ವಲ್ಪವೂ ಕಡಿಮೆ ಆಗಲೇ ಇಲ್ಲ. ನಂತರ ನಡೆದ ವಿಷಯವನ್ನು ಕೃಷ್ಣನ ಬಳಿ ಅರ್ಜುನ ಹೇಳಿದಾಗ ಕೃಷ್ಣ ಅರ್ಜುನನ್ನ ಕರೆದುಕೊಂಡು ಕರ್ಣನ ಮನೆಗೆ ಬಂದು ಕರ್ಣ ನನ್ನು ಕೇಳಿದ. ಕರ್ಣ ಆ ಚಿನ್ನದಗಟ್ಟಿ ದಾನ ಮಾಡಿದೆಯಾ..? ಎಂದಾಗ ಕರ್ಣ ಹೇಳ್ತಾನೆ ಹೋ ಕೃಷ್ಣ ಕ್ಷಮಿಸಿ ನಾನು ಆ ಚಿನ್ನದಗಟ್ಟಿ ಪಡೆದು ರಥದಲ್ಲಿ ಬರುವಾಗ ಒಬ್ಬ ಬಡವ ದಾನ ಕೇಳಿದಾಗ ನಾನು ಸಂಪೂರ್ಣ ಆ ಚಿನ್ನದಗಟ್ಟಿಯನ್ನೆ ಆತನಿಗೆ ಕೊಟ್ಟೆ ನೀವು ಹೇಳಿದಾಗೇ ಎಲ್ಲರಿಗೂ ನಿಡಲಾಗಲ್ಲಿಲ್ಲ. ಕ್ಷಮಿಸಿ, ಎಂದಾಗ ಕೃಷ್ಣ ಅರ್ಜುನನ ಕಡೆ ನೋಡಿ ಅರ್ಜುನ, ಈಗ ತಿಳಿಯಿತೆ ಕರ್ಣನನ್ನ ಮಾತ್ರ ಏಕೆ ದಾನಶೂರ ಎನ್ನುವರು ಎಂದು. ನೀನು ದಾನ ಮಾಡಬೇಕು ಎಂಬ ಆಸೆಯಿಂದ ನೀಡಿದರೆ ಕರ್ಣ ಯಾವುದೇ ಆಕಾಂಕ್ಷೆ, ಆಸೆ ಇಲ್ಲದೆ ನೀಡಿದ ಹಾಗಾಗಿ ಕರ್ಣನನ್ನ ದಾನಶೂರ ಎನ್ನುವರು ಎಂದು ಕೃಷ್ಣ ಹೇಳಿದ
ಇದರ ತಾತ್ಪರ್ಯ ಇಷ್ಟೇ ನಾವು ಕೊಡುವ ದಾನ ನಮ್ಮಲ್ಲಿ ಯಾವುದೇ ಇತರ ಉದ್ದೇಶದಿಂದ ನೀಡಬಾರದು ಸಣ್ಣ ಸಣ್ಣ ಸಹಾಯವನ್ನು ಹೇಳಿಕೊಳ್ಳುವುದು ಸ್ವಾರ್ಥವಾಗುತ್ತೆ ಹೊರತು ದಾನ ಆಗಲ್ಲ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?