ಬೆಂಗಳೂರು
ಬೆಂಗಳೂರು ಉತ್ತರ ಕ್ಷೇತ್ರದ ಜನರ ಮೂಡ್ ಯಾವ ಪಕ್ಷದತ್ತ?

Bengaluru : ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತಿಹೆಚ್ಚು ಮತದಾರರನ್ನು ಹೊಂದಿರುವುದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ. ಮಾರ್ಚ್ ಹದಿನಾರಕ್ಕೆ ಚುನಾವಣಾ ಆಯೋಗ ಹೊರಡಿಸಿದ ಸರ್ಕ್ಯೂಲರ್ ಪ್ರಕಾರ ಇಲ್ಲಿ ಪುರುಷರು 16,29,089, ಮಹಿಳೆಯರು 15,44,415, ಇತರರು 594 ಸೇರಿದಂತೆ ಒಟ್ಟು 31,74,098 ಮತದಾರರಿದ್ದಾರೆ.
ಕಳೆದ ನಾಲ್ಕು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಅವಲೋಕಿಸುವುದಾದರೆ ಬಿಜೆಪಿಗೆ ಸೇಫ್ ಕ್ಷೇತ್ರಗಳಲ್ಲೊಂದು ಬೆಂಗಳೂರು ಉತ್ತರ. ಈ ಕ್ಷೇತ್ರದಿಂದ ಗೆದ್ದ ಸಂಸದರಲ್ಲಿ ಕೆಲವರು ಕೇಂದ್ರ ಸಚಿವರಾಗಿ ಕೆಲಸ ಮಾಡಿದ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಕಾಂಗ್ರೆಸ್ಸಿನ ಸಿ.ಕೆ.ಜಾಫರ್ ಷರೀಫ್ ಈ ಕ್ಷೇತ್ರದಿಂದ ಸತತ ಐದು ಬಾರಿ, ನಂತರ ಎರಡು ಬಾರಿ ಗೆದ್ದಿದ್ದರು.
ಒಟ್ಟಾರೆಯಾಗಿ 1952 ರಿಂದ 2019ರವರೆಗಿನ ಹದಿನೇಳು ಚುನಾವಣೆಯಲ್ಲಿ ಹನ್ನೆರಡು ಬಾರಿ ಕಾಂಗ್ರೆಸ್, ನಾಲ್ಕು ಬಾರಿ ಬಿಜೆಪಿ ಮತ್ತು ಒಮ್ಮೆ ಜೆಡಿಎಸ್ ಟಿಕೆಟಿನಿಂದ ಸಿ.ನಾರಾಯಣಸ್ವಾಮಿ ಗೆಲುವು ಸಾಧಿಸಿದ್ದರು. 2004ರಿಂದ ಈಚೆಗಿನ ನಾಲ್ಕು ಚುನಾವಣೆಯಲ್ಲಿ ತಲಾ ಒಮ್ಮೆ, ಎಚ್.ಟಿ.ಸಾಂಗ್ಲಿಯಾನ, ಡಿ.ಬಿ.ಚಂದ್ರೇಗೌಡ ಮತ್ತು ಎರಡು ಬಾರಿ ಡಿ.ವಿ.ಸದಾನಂದ ಗೌಡ ಗೆಲುವು ಸಾಧಿಸಿದ್ದರು.
ಎರಡು ಬಾರಿ ಗೆಲುವು ಸಾಧಿಸಿ ಕೇಂದ್ರದಲ್ಲಿ ಹಲವು ಖಾತೆಯನ್ನು ನಿಭಾಯಿಸಿದ್ದ ಹಾಲೀ ಸಂಸದ ಸದಾನಂದ ಗೌಡ್ರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಲಿಲ್ಲ. ಬದಲಿಗೆ, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಲಾಗಿದೆ. ಇನ್ನು, ಕಾಂಗ್ರೆಸ್ಸಿನಿಂದ ಪ್ರೊ.ರಾಜೀವ್ ಗೌಡ ಸ್ಪರ್ಧಿಸಲಿದ್ದಾರೆ. ಇಬ್ಬರೂ, ಒಕ್ಕಲಿಗ ಸಮುದಾಯದವರು.
ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಐವರು (ಕೆ.ಆರ್.ಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರ), ಇನ್ನು ಕಾಂಗ್ರೆಸ್ಸಿನ ಮೂವರು ( ಬ್ಯಾಟರಾಯನಪುರ, ಹೆಬ್ಬಾಳ, ಪುಲಿಕೇಶಿನಗರ) ಶಾಸಕರಿದ್ದಾರೆ. ಇದರಲ್ಲಿ ಯಶವಂತಪುರ ಶಾಸಕರಾದ ಎಸ್.ಟಿ.ಸೋಮಶೇಖರ್ ಅವರ ಬೆಂಬಲವನ್ನು ಬಿಜೆಪಿ ನಿರೀಕ್ಷಿಸುವಂತಿಲ್ಲ.
ಅಸಲಿಗೆ ಈ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟಿಗೆ ಅಷ್ಟೇನೂ ಫೈಟ್ ಇರಲಿಲ್ಲ. ಸಚಿವ ಕೃಷ್ಣ ಭೈರೇಗೌಡ್ರನ್ನು ಮತ್ತೆ ಕಣಕ್ಕೆ ಇಳಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡಿದ್ದರು. ಅದು ಸಾಧ್ಯವಾಗದೇ ಇದ್ದಾಗ, ಗೋವಿಂದರಾಜ ನಗರದ ಶಾಸಕ ಪ್ರಿಯಕೃಷ್ಣ ಅವರನ್ನೂ ಟ್ರೈ ಮಾಡಿತು, ಅವರೂ ಒಪ್ಪದ ಹಿನ್ನಲೆಯಲ್ಲಿ ರಾಜೀವ್ ಗೌಡ್ರಿಗೆ ಮಣೆಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?