ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಮನೆ ಮದ್ದು ಹೆಚ್ಚು ಮಹತ್ವ ಪಡೆದಿದೆ. ಮನೆಯಲ್ಲೇ ಸಿಗುವ ವಸ್ತುಗಳಿಂದ ತಯಾರಿಸಬಹುದಾದ ಮದ್ದುಗಳು ರೋಗದ ವಿರುದ್ಧ ರೋಗ ನಿರೋಧಕಗಳನ್ನು ಹೆಚ್ಚಿಸಿ ಹೋರಾಟ ಮಾಡುತ್ತವೆ. ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ದಿನಕ್ಕೊಂದು ಮನೆಮದ್ದನ್ನು ಓದುಗರಿಗೆ ತಿಳಿಸಿಕೊಡುತ್ತಿದೆ. ಇಂದು ಚೇಳು ಕಚ್ಚಿದಾಗ ಥಟ್ಟನೆ ಏನು ಮಾಡಬೇಕು ಅನ್ನುವುದನ್ನು ತಿಳಿಸಿಕೊಟ್ಟಿದೆ.
ಚೇಳು ಸರ್ವೇ ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಅಥವಾ ಕೃಷಿ ಮಾಡುವ ಜಾಗಗಳಲ್ಲಿ ಕಾಣಸಿಗುತ್ತದೆ. ಚೇಳು ಕಚ್ಚುವುದು ಕೂಡ ಸಾಮಾನ್ಯ. ಆದ್ರೆ ಚೇಳು ಕಡಿತಕ್ಕೆ ಗಾಬರಿಯಾಗುವ ಅವಶ್ಯಕತೆ ಇಲ್ಲ. ಚೇಳು ಕಚ್ಚಿದಾಗ ಏನು ಮಾಡಬೇಕು ಅನ್ನುವುದನ್ನು ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ತಿಳಿಸಿಕೊಟ್ಟಿದೆ. ಚೇಳು ಕಚ್ಚಿದಾಗ ಗಾಬರಿಯಾಗದೆ ಧೈರ್ಯವಾಗಿ ಇರಬೇಕು ಅಷ್ಟೇ.
ಚೇಳು ಕಚ್ಚಿದಾಗ ಮೊದಲು ಮನೆ ಮದ್ದನ್ನು ಮಾಡಬೇಕು. ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು, ಅದನ್ನು ಕತ್ತರಿಸಿ ರಸ ತೆಗೆದುಕೊಳ್ಳಬೇಕು. ಅದಾದ ಮೇಲೆ ತುಳಸಿ ಗಿಡದ ಬೇರಿನ ಮಣ್ಣನ್ನು ನಿಂಬೆ ರಸದ ಜೊತೆಗೆ ಚೆನ್ನಾಗಿ ಮಿಕ್ಸ್ ಮಾಡಿ ಚೇಳು ಕಚ್ಚಿದ ಭಾಗಕ್ಕೆ ಹಚ್ಚಬೇಕು. ಹೀಗೆ ಮಾಡುವುದರಿಂದ ಚೇಳಿನ ವಿಷ,ನವೆ, ತುರಿಕೆ ಹಾಗೂ ನೋವು ಕಡಿಮೆ ಆಗುತ್ತದೆ.
ಒಂದು ವೇಳೆ ತುಳಸಿ ಗಿಡದ ಬೇರಿನ ಮಣ್ಣು ಸಿಗಲಿಲ್ಲ ಅಂದಾದರೆ, ತುಳಸಿ ಎಲೆಯ ರಸ ಅಥವಾ ತುಳಸಿ ಗಿಡಿದ ಯಾವುದೇ ಭಾಗದ ರಸವನ್ನು ತೆಗೆದು ನಿಂಬೆ ರಸದೊಂದಿಗೆ ಮಿಕ್ಸ್ ಮಾಡಿ ಚೇಳು ಕಚ್ಚಿದ ಜಾಗಕ್ಕೆ ಹಚ್ಚಬೇಕು.ಈ ಮನೆಮದ್ದು ಸಾಕಷ್ಟು ಉಪಯೋಗಕಾರಿ ಅನ್ನುವುದನ್ನು ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ತಿಳಿಸಿಕೊಟ್ಟಿದೆ.
ಆಯುರ್ವೇದದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಈ ಕೆಳಗಿನ ಸಂಖ್ಯೆಗೆ ಕರೆಮಾಡಿ:
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?