International News
ಏನಿದು ನೀಲಿ ಆಧಾರ್ ಕಾರ್ಡ್..? ಇದೇಕೆ ಮುಖ್ಯ..?

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಪ್ರತಿಯೊಬ್ಬ ಭಾರತೀಯನಿಗೂ 12 ಅಂಕಿಗಳ ಗುರುತಿನ ಚೀಟಿಯಾದ ಆಧಾರ್ ವಿತರಿಸುತ್ತದೆ. ಇದರಲ್ಲಿ ನಿಮ್ಮ ವಾಸ ಸ್ಥಳದ ಜೊತೆಗೆ ಜೈವಿಕ ಗುರುತುಗಳು ಸಹ ಜೋಡಣೆಯಾಗಿದ್ದು, ನಿಮ್ಮ ವೈಯಕ್ತಿಕ ಗುರುತು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ. ಸರ್ಕಾರದ ಹಲವು ಸೇವೆ, ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ನೆರವಾಗುತ್ತದೆ. ಅಲ್ಲದೇ ಸರ್ಕಾರಿ ಸೇವೆಗಳು ಸಮರ್ಪಕವಾಗಿ ಫಲಾನುಭವಿಯನ್ನು ತಲುಪಲು ಸಹಾಯಕವಾಗಿದೆ. 2018ರಲ್ಲಿ 5 ವರ್ಷದೊಳಗಿನ ಮಕ್ಕಳಿಗಾಗಿ ಪ್ರಾಧಿಕಾರ ಬ್ಲೂ ಆಧಾರ್ ಅಥವಾ ಬಾಲ್ ಆಧಾರ್ ಜಾರಿಗೆ ತಂದಿದೆ. ಹೆಸರಿಗೆ ತಕ್ಕಂತೆ ಇವು ನೀಲಿ ಬಣ್ಣದ ಕಾರ್ಡ್ ಗಳಾಗಿವೆ. ಇವುಗಳಿಗೆ ಅನೇಕ ವಿಶಿಷ್ಟ ಗುಣಲಕ್ಷಣಗಳು, ಪ್ರತ್ಯೇಕ ಸೌಲಭ್ಯಗಳು ಸೇರಿವೆ.
ನೀಲಿ ಆಧಾರ್ ಪಡೆಯುವುದು ಹೇಗೆ..?
ಹತ್ತಿರದ ಆಧಾರ್ ಕೇಂದ್ರಗಳಿಗೆ ಪೋಷಕರು ತಮ್ಮ ಮಕ್ಕಳ ಜೊತೆಗೆ ತಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿ ನೀಲಿ ಆಧಾರ್ ಗೆ ಅರ್ಜಿ ಸಲ್ಲಿಸಬಹುದು. ಮಗುವಿನ ಜನನ ಪ್ರಮಾಣ ಪತ್ರ ಅಥವಾ ಬೇರಾವುದೇ ಜನನಕ್ಕೆ ಪೂರಕವಾಗುವ ಪ್ರಮಾಣ ಪತ್ರ ವನ್ನು ಅರ್ಜಿಯ ಜೊತೆಗೆ ಲಗತ್ತಿಸಬೇಕು. ಆಧಾರ್ ಕೇಂದ್ರದಲ್ಲಿ ಮಗುವಿನ ಫೋಟೋ ಮಾತ್ರ ತೆಗೆದುಕೊಳ್ಳುತ್ತಾರೆ. ಮಕ್ಕಳಲ್ಲಿ ಜೈವಿಕ ಗುರುತುಗಳು ಬದಲಾಗುವ ಸಾಧ್ಯತೆ ಹೆಚ್ಚಿರುವ ಕಾರಣಕ್ಕೆ ಜೈವಿಕ ಗುರುತುಗಳನ್ನು ಪಡೆಯುವುದಿಲ್ಲ. ಈ ಪ್ರಕ್ರಿಯೆ ಉಚಿತವಾಗಿದ್ದು, ನೋಂದಣಿಯಾದ 90 ದಿನಗಳ ಒಳಗೆ ನಿಮ್ಮ ಕೈಗೆ ನೀಲಿ ಆಧಾರ್ ಕಾರ್ಡ್ ತಲುಪುತ್ತದೆ.
ನೀಲಿ ಆಧಾರ್ ಪ್ರಯೋಜನವೇನು..?
ಮಕ್ಕಳನ್ನು ಶಾಲೆಗೆ ಸೇರಿಸುವುದು, ಪಾಸ್ ಪೋರ್ಟ್ ಮಾಡಿಸಲು, ಬ್ಯಾಂಕ್ ಖಾತೆ ತೆರೆಯುವುದು ಸೇರಿದಂತೆ ನಾನಾ ಸೇವೆಗಳಿಗೆ ಅನುಕೂಲ ಮಾಡಿಕೊಡುತ್ತದೆ. ಅಲ್ಲದೇ ಮಧ್ಯಾಹ್ನದ ಬಿಸಿಯೂಟ ಯೋಜನೆ, ಸರ್ಕಾರದಿಂದ ಸಿಗುವ ಶಿಷ್ಯ ವೇತನ, ಆರೋಗ್ಯ ವಿಮೆ ಸೇರಿ ಇತರ ಯೋಜನೆಗಳನ್ನು ಸುಲಭವಾಗಿ ಪಡೆಯಬಹುದು. ತುರ್ತು ಪರಿಸ್ಥಿತಿಗಳಲ್ಲಿ ಅಥವಾ ಮಕ್ಕಳ ಪೋಷಕತ್ವದ ಕುರಿತು ಯಾವುದೇ ವ್ಯಾಜ್ಯಗಳು ಏರ್ಪಟ್ಟಾಗ ಶೀಘ್ರ ಇತ್ಯರ್ಥ ಮಾಡಲು ನೆರವಾಗುತ್ತದೆ. ಅಲ್ಲದೇ ಮಕ್ಕಳ ಸಾಗಾಣಿಕೆ ತಡೆಯಲು, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ತಡೆ ಮತ್ತಿತ್ತರ ರೀತಿಯಲ್ಲಿ ಮಕ್ಕಳ ಶೋಷಣೆ ತಡೆಗೆ ನೆರವಾಗಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?