Featured
ಸ್ರ್ಟಾಬೆರಿ ಹಣ್ಣಿನಿಂದ ಚರ್ಮವನ್ನು ಆರೈಕೆ ಮಾಡಲು ಸುಲಭ ವಿಧಾನಗಳು..!

ರೈಸಿಂಗ್ ಕನ್ನಡ :- ಕೆಲವು ಹಣ್ಣುಗಳು ನೈಸರ್ಗಿಕವಾಗಿ ಅಧಿಕ ಫೋಷಕಾಂಶಗಳನ್ನು ಒಳಗೊಂಡಿರುತ್ತವೆ. ಅದರಲ್ಲೂ ಉತ್ಕರ್ಷಣ ನಿರೋಧಕ ಶಕ್ತಿಯನ್ನುಅಧಿಕವಾಗಿ ಹೊಂದಿರುವ ಹಣ್ಣುಗಳಲ್ಲಿ ಸೂರ್ಯನ ನೇರಳಾತೀತ ಕಿರಣಗಳಿಂದ ಉಂಟಾಗುವ ಹಾನಿಯನ್ನು ತಡೆಯುವ ಶಕ್ತಿ ಇರುತ್ತದೆ. ಅಂತಹ ವಿಶೇಷ ಶಕ್ತಿಯನ್ನು ಹೊಂದಿರುವ ಸ್ರ್ಟಾಬೆರಿ ಹಣ್ಣು ಸಹ ಒಂದು. ಇದನ್ನು ಮುಖದ ಲೇಪನ ಅಥವಾ ಸ್ಕ್ರಬರ್ ರೂಪದಲ್ಲಿ ಬಳಸುವುದರಿಂದ ಚರ್ಮದಲ್ಲಿ ಉಂಟಾದ ಹಾನಿಯನ್ನು ತಡೆಗಟ್ಟಬಹುದು.
ಸ್ರ್ಟಾಬೆರಿ ಸ್ಕ್ರಬ್ ಅನ್ನು ವಾರದಲ್ಲಿ ಒಮ್ಮೆ ಬಳಸುವುದರಿಂದ ಸೂರ್ಯನ ಕಿರಣಗಳಿಂದ ಉಂಟಾದ ಕಪ್ಪುಕಲೆ, ಶುಷ್ಕ ಚರ್ಮಗಳು , ಸತ್ತ ಜೀವಕೋಶಗಳು ನಿವಾರಣೆಯಾಗುತ್ತವೆ. ಜೊತೆಗೆ ಮುಖದ ಕಾಂತಿ ಮತ್ತು ಹೊಲಪನ್ನು ಹೆಚ್ಚಿಸಬಹುದು.
ಸ್ರ್ಟಾಬೆರಿ ಸ್ಕ್ರಬ್ ಗೆ ಬೇಕಾಗುವ ಸಾಮಾಗ್ರಿಗಳು :-
2 ಟೀ ಚಮಚ ತೆಂಗಿನ ಎಣ್ಣೆ
ವೆನ್ನಿಲಾ ಸಾರಾ 3-5 ಹನಿಗಳು
ಸ್ರ್ಟಾಬೆರಿ ಹಣ್ಣುಗಳು 5
ಹರಳಾದ ಸಕ್ಕರೆ 2 ಟೀ ಚಮಚ
1/2 ಟೀ ಚಮಚ ಜೇನುತುಪ್ಪ
ತಯಾರಿಸುವ ವಿಧಾನ :-
ಒಂದು ಪಾತ್ರೆಯಲ್ಲಿ 2 ಟೀ ಚಮಚ ತೆಂಗಿನ ಎಣ್ಣೆ , ವೆನ್ನಿಲಾ ಸಾರಾ 3-5 ಹನಿಗಳು , 5 ಸ್ರ್ಟಾಬೆರಿ ಹಣ್ನುಗಳು , ಹರಳಾದ ಸಕ್ಕರೆ 2 ಟೀ ಚಮಚ , 1/2 ಟೀ ಚಮಚ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಬೇಕು.
– ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಹಿಸಿ ಮೃದುವಾಗಿ ವೃತ್ತಕಾರದಲ್ಲಿ ಮಾಸಾಜ್ ಮಾಡಬೇಕು.
– ಸ್ವಲ್ಪ ಸಮಯದ ನಂತರ ಮೃದುವಾಗಿ ಮಖವನ್ನು ತನ್ನಿನೀರಿನಂದ ಸ್ವಚ್ಚವಾಗಿ ತೊಳೆಯಬೇಕು
– ವಾರದಲ್ಲಿ ಎರಡು ಬಾರಿ ಈ ಕ್ರಮವನ್ನು ಅನುಸರಿಸಿದರೆ ಚರ್ಮವು ಮೃದು ಹಾಗೂ ಹೊಳಪನ್ನು ಪಡೆದುಕೊಳ್ಳುತ್ತದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?