Featured
ಅರಬ್ಬಿ ಸಮುದ್ರದಲ್ಲಿ ಗಾಳಿ ಅಬ್ಬರ : ಗಾಳಿ ಹೊಡೆತಕ್ಕೆ ದಡ ಸೇರಿದ ಎರಡು ಬೋಟ್

ರೈಸಿಂಗ್ ಕನ್ನಡ:
ಕಾರವಾರ:
ಕಾರವಾರದ ಟ್ಯಾಗೋರ್ ಕಡಲ ತೀರದಲ್ಲಿ ಗಾಳಿ ಹೊಡೆತಕ್ಕೆ ಎರಡು ಬೋಟುಗಳು ದಡ ಸೇರಿವೆ.
ಕಳೆದ ಕೆಲವು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ಗಾಳಿ ಅಬ್ಬರ ಜೋರಾಗಿದ್ದು ಮೀನುಗಾರರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.
ಮಲ್ಪೆಯ ಎರಡು ಬೋಟ್ಗಳು ಭಾನುವಾರ ರಾತ್ರಿ ಸಮಾರು 2.30ರಷ್ಟೊತ್ತಿಗೆ ಕಾರವಾರ ಬಂದರಿಗೆ ಬರಲು ಯತ್ನಿಸಿದ್ದವು. ಆ ವೇಳೆ ಗಾಳಿಗೆ ನಿಯಂತ್ರಣ ತಪ್ಪಿ ಅಲೆಗಳ ರಭಸಕ್ಕೆ ಸಿಲುಕಿ ಕಾರವಾರದ ಬೀಚ್ ನಲ್ಲಿ ಸಿಲುಕಿಕೊಂಡವು.
ಅದೃಷ್ಟವಶಾತ್ ಬೋಟ್ ನಲ್ಲಿದ್ದ ಮೀನುಗಾರರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೋಟುಗಳಿಗೆ ಹಾನಿಯಾಗಿವೆ. ಅದರ ಜತೆಯಲ್ಲಿಯೇ ನಾಡ ದೋಣಿ ಕೂಡ ಗಾಳಿ ಹೊಡೆತಕ್ಕೆ ಸಿಲುಕಿ ದಡಕ್ಕೆ ಬಂದು ಬಿದ್ದಿದೆ. ಆ ದೋಣಿ ಕೂಡ ಹಾನಿಯಾಗಿದೆ.
ಕಾರವಾರ ನಗರದ ಆರ್ ಟಿಓ ಕಚೇರಿ ಎದುರು ಇರುವ ಬೀಚ್ ನಲ್ಲಿ ಈ ಬೋಟುಗಳು ಬೀಡು ಬಿಟ್ಟಿವೆ.ಅರಬ್ಬಿ ಸಮುದ್ರದಲ್ಲಿ ತೂಫಾನ್ ಹೆಚ್ಚಾಗಿರುವುದರಿಂದ ಎಲ್ಲೆಡೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೆಲ ಮೀನುಗಾರರು ತೂಫಾನ್ ನಡುವೆಯೂ ಸಮುದ್ರಕ್ಕಿಳಿಯುವ ಸಾಹಸ ಮಾಡಿ ಅಪಾಯಕ್ಕೆ ಸಿಲುಕಿದೆ.
ಗಾಳಿಯ ಒತ್ತಡದ ನಡುವೆಯೂ ಸಮುದ್ರಕ್ಕಿಳಿದ ಹಲವು ಬೋಟುಗಳು ಕಾರವಾರ ಬಂದರಿನಲ್ಲಿ ಲಂಗರು ಹಾಕಿಕೊಂಡಿವೆ.ಕಳೆದೆರಡು ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೋಟುಗಳೇ ಹೆಚ್ಚಾಗಿ ಇಂಥ ಸಮಸ್ಯೆಯಲ್ಲಿ ಸಿಲುಕಿಕೊಂಡಿವೆ. ಎರಡೇ ದಿನಗಳಲ್ಲಿ ಉಡುಪಿ, ಮಂಗಳೂರು ಸೇರಿ ಸುಮಾರು 4-5 ಬೋಟುಗಳು ಮುಳುಗಡೆಯಾಗಿವೆ.
ನಾಲ್ವರು ಮೀನುಗಾರರು ಬದುಕಿಗಾಗಿ ನಡೆಸಿದ ಹೋರಾಟ ಅಷ್ಟಿಷ್ಟಲ್ಲ. ಅವರನ್ನು ಕಾಪಾಡಲು ಮೀನುಗಾರರೇ ಸಮುದ್ರಕ್ಕಿಳಿಯುವ ಸಂದರ್ಭ ಸೃಷ್ಟಿಯಾಗಿತ್ತು.ಭಾನುವಾರ ಅಳ್ವೆಕೋಡಿಯಲ್ಲಿ ಮೀನುಗಾರಿಕೆಗೆ ತೆರಳಿ ಗಾಳಿಯ ಅಬ್ಬರದಿಂದ ಮೀನುಗಾರರು ದೋಣಿ ಬಿಟ್ಟು ಜೀವ ಉಳಿಸಿಕೊಂಡಿದ್ದಾರೆ. ಸಮುದ್ರದಲ್ಲೇ ದೋಣಿ ಬಿಟ್ಟು ದಡ ಸೇರಿದ ಮೀನುಗಾರರು
ಗಾಬರಿಗೊಂಡ ವಾಯು ವಿಹಾರಿಗಳು
ಬೆಳಗ್ಗೆ ವಾಯು ವಿಹಾರಕ್ಕೆ ಹೊರಟವರು ದಡದಲ್ಲಿ ಬಿದ್ದಿರುವ ಬೋಟುಗಳನ್ನು ನೋಡಿ ಭಯಭೀತರಾಗಿದ್ದಾರೆ. ಮಲ್ಪೆ ಮೂಲದ ಎರಡು ಬೋಟುಗಳು ಮನುಷ್ಯರೇ ಎಳೆತಂದು ನಿಲ್ಲಿಸಿದ ರೀತಿಯಲ್ಲಿ ದಡಕ್ಕೆ ಬಂದಿವೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?