Featured
ತುಮಕೂರಿನಲ್ಲಿ ಕೊರೊನಾ ನಾಗಾಲೋಟ – ಭಾನುವಾರವೂ ಶತಕ ದಾಟಿದ ಸೋಂಕಿತರ ಸಂಖ್ಯೆ..!
![](https://risingkannada.com/wp-content/uploads/2020/07/tumkuur-corona-3.jpeg)
ರೈಸಿಂಗ್ ಕನ್ನಡ :
ಕೆ.ಆರ್ ಬಾಬು, ಪ್ರತಿನಿಧಿ, ತುಮಕೂರು :
ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 135 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಇದರೊಂದಿಗೆ, ಸೊಂಕಿತರ ಸಂಖ್ಯೆ ಜಿಲ್ಲೆಯಲ್ಲಿ 1916ಕ್ಕೆ ಏರಿಕೆಯಾಗಿದೆ. ಈ ಕುರಿತು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ ನಾಗೇಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವ ಯಾವ ತಾಲೂಕಿನಲ್ಲಿ ಎಷ್ಟು?
ತುಮಕೂರು 36, ಚಿಕ್ಕನಾಯಕನಹಳ್ಳಿ 17, ಪಾವಗಡ 7, ತಿಪಟೂರು 21, ಮದುಗಿರಿ 6, ಕೊರಟಗೆರೆ 3, ಕುಣಿಗಲ್ 13, ತುರುವೇಕೆರೆ 7, ಶಿರಾ 24, ಗುಬ್ಬಿ 1, ಸೊಂಕಿತರು ಪತ್ತೆಯಾಗಿದ್ದಾರೆ. ಭಾನುವಾರ ಕಂಡು ಬಂದಿರುವ ಸೊಂಕಿತರಲ್ಲಿ 5 ವರ್ಷದ ಒಳಗಿನ ಎರಡು ಮಕ್ಕಳು ಹಾಗೂ ನಾಲ್ವರು ಗರ್ಭಿಣಿಯರೂ ಸೇರಿದ್ದಾರೆ. 7 ಜನ ವೃದ್ದರು ಸೇರಿದಂತೆ 31 ಜನ ಪುರುಷರು ಹಾಗೂ 32 ಜನ ಮಹಿಳೆಯರಿಗೆ ಕೊರೊನಾ ಸೊಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಮೂರು ಸಾವು..!
ಜಿಲ್ಲೆಯಲ್ಲಿ ಭಾನುವಾರ ಮೂವರು ಕೊರೊನಾ ಸೊಂಕಿತರು ಮೃತಪಟ್ಟಿದ್ದು ತುಮಕೂರು ನಗರದ ಬಾರ್ ಲೈನ್ ರಸ್ತೆ ಬಡಾವಣೆ ನಿವಾಸಿ 60 ವರ್ಷದ ವ್ಯಕ್ತಿ ಹಾಗೂ ಸದಾಶಿವನಗರ ಬಡಾವಣೆ 31 ವರ್ಷದ ಮಹಿಳೆ ಮತ್ತೋರ್ವ ಸೋಂಕಿತ ಶಿರಾ ತಾಲ್ಲೂಕಿನ ಮೇಲ್ಲೆಕೆರೆಹಳ್ಳಿ ನಿವಾಸಿ 36 ವರ್ಷದ ವ್ಯಕ್ತಿ ಸೇರಿದಂತೆ ಒಟ್ಟು, ಮೂವರು ಸೊಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 57 ಜನರು ಕೊರೊನಾಗೆ ಬಲಿಯಾಗಿದ್ದಾರೆ.
54 ಜನ ಗುಣಮುಖ – ಆಸ್ಪತ್ರೆಯಿಂದ ಡಿಸ್ಚಾರ್ಜ್
ಜಿಲ್ಲೆಯಲ್ಲಿ ಭಾನುವಾರ 54 ಜನ ಸೊಂಕಿತರು ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 971 ಜನರು ಕೋವಿಡ್ನಿಂದ ಗುಣಮುಖರಾಗಿದ್ದಾರೆ. ಉಳಿದ 888 ಮಂದಿ ಸಕ್ರಿಯ ಸೋಂಕಿತರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರಿಗಿಂತ ಗುಣಮುಖರಾದವರೇ ಅತಿ ಹೆಚ್ಚು ಎನ್ನುವುದೇ ಸಮಾಧಾನಕರ ಸಂಗತಿ.
ಜಿಲ್ಲೆಯಲ್ಲಿ ಈವರೆಗೆ 37026 ಜನರನ್ನ ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದ್ದು 33577 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ ಸೊಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 4044 ಜನರನ್ನ ನಿಗಾದಲ್ಲಿ ಇಡಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?