ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಐಪಿಎಲ್ನ 48ನೇ ಪಂದ್ಯದಲ್ಲಿ ಆರ್ಸಿಬಿ ಹಾಲಿ ಚಾಂಪಿಯನ್ ಮುಂಬೈ ಎದುರು ಮುಗ್ಗರಿಸಿಬಿದ್ದು ಪ್ಲೇ ಆಫ್ ಹಾದಿಯನ್ನ ಕಠಿಣವಾಗಿರಿಸಿಕೊಂಡಿದೆ. ಉತ್ತಮ ಆರಂಭ ಪಡೆದ ಹೊರತಾಗಿಯೂ ಆರ್ಸಿಬಿ ಸೋಲಲು ಕಾರಣವಾಗಿದ್ದು ಮೂರು ಅಂಶಗಳು.
ಹಾಗಾದ್ರೆ ಆ ಮೂರು ಅಂಶಗಳ್ಯಾವು ಅನ್ನೋದನ್ನ ತೋರಿಸ್ತೀವಿ ನೋಡಿ.ಮೊದಲನೇ ಕಾರಣ ಎಬಿಡಿ ವಿಲಿಯರ್ಸ್ ಬ್ಯಾಟಿಂಗ್ ವೈಫಲ್ಯ. ತಂಡದ ಓಪನರ್ಸ್ಗಳಾದ ದೇವದತ್ ಪಡೀಕಲ್ ಮತ್ತು ಜೋಶ್ ಫಿಲೀಪ್ 71 ರನ್ಗಳ ಸಾಲಿಡ್ ಓಪನಿಂಗ್ ಕೊಟ್ಟ ಹೊರತಾಗಿಯೂ ಮಿಡ್ಲ್ ಆರ್ಡರ್ನಲ್ಲಿ ಆರ್ಸಿಬಿ ಬ್ಯಾಟ್ಸ್ಮನ್ಗಳು ಒಬ್ಬರ ಹಿಂದೆ ಪೆವಿಲಿಯನ್ ಸೇರಿದ್ರು. ತಂಡದ ಗೇಮ್ ಚೇಂಜರ್ ಎಬಿಡಿ ವಿಲಿಯರ್ಸ್ 15 ರನ್ಗಳಿಸಿದ್ದಾಗ ನಾಯಕ ಪೊಲಾರ್ಡ್ ಎಸೆತದಲ್ಲಿ ಲೆಗ್ ಸೈಡ್ನತ್ತ ಸಿಕ್ಸರ್ ಹೊಡೆಯಲು ಹೋಗಿ ರಾಹುಲ್ ಚಹರ್ಗೆ ಕ್ಯಾಚ್ ನೀಡಿದ್ರು. ಎಬಿಡಿ ವಿಲಿಯರ್ಸ್ ನೆಲಕಚ್ಚಿ ನಿಂತಿದ್ದರೇ 200 ಪಸ್ಲ್ ಸ್ಕೋರ್ ನಿರೀಕ್ಷೆ ಮಾಡಬಹುದಿತ್ತು.
ಎರಡನೇ ಕಾರಣ ಮಿಡ್ಲ್ ಆರ್ಡರ್ ಬ್ಯಾಟಿಂಗ್ ವೈಫಲ್ಯ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಔಟಾದ ನಂತರ ಬಂದ ಶಿವಂ ದುಬೆ 2,ಕ್ರಿಸ್ ಮಾರಿಸ್ 4,ಗುರು ಕೀರಾತ್ ಸಿಂಗ್ 14, ವಾಷಿಂಗ್ಟನ್ ಸುಂದರ್ 10 ರನ್ ಗಳಿಸಿದ್ರು ಇದರ ಪರಿಣಾಮ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ಗಳಿಸಿತು. ಮೂರನೇ ಕಾರಣ ವೇಗಿ ಡೇಲ್ ಸ್ಟೇನ್ ದುಬಾರಿ ಬೌಲರ್ ಆಗಿದ್ದು 4 ಓವರ್ಗಳಿಂದ ಸ್ಟೇನ್ ಕೊಟ್ಟಿದ್ದು ಬರೋಬ್ಬರಿ 43 ರನ್. ನಾಯಕ ವಿರಾಟ್ ಕೊಹ್ಲಿ ಆಲ್ರೌಂಡರ್ ಶಿವಂ ದುಬೆಗೆ ಬೌಲಿಂಗ್ ಕೊಡಬಹುದಿತ್ತು. ಈ ಮೂರು ಮಿಸ್ಟೇಕ್ಗಳು ಆರ್ಸಿಬಿ ಸೋಲಿಗೆ ಕಾರಣವಾಯಿತು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?