ರೈಸಿಂಗ್ ಕನ್ನಡ : ರಕ್ತದಲ್ಲಿ ಶುಗರ್ ಲೆವಲ್ ಜಾಸ್ತಿ ಇದ್ದರೆ ಏನಾದರೊಂದು ತೊಂದರೆಯಾಗುತ್ತೆ. ಆದ್ರೆ, ಶೀತಕಾಲದಲ್ಲಿ ಕೆಲವು ರೀತಿಯ ಹಣ್ಣುಗಳನ್ನ ತಿನ್ನೋದ್ರಿಂದ ಡಯಾಬಿಟಿಸ್ ಕಡಿಮೆಯಾಗುತ್ತೆ ಅಂತಾರೆ ವೈದ್ಯರು ಹಾಗೂ ವಿಜ್ಞಾನಿಗಳು.
ಪ್ರಪಂಚದಲ್ಲಿ ಡಯಾಬಿಟಿಸ್ ರೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಲೆ ಹೋಗುತ್ತಿದೆ. ಜಗತ್ತಿನಲ್ಲಿರೋ ಡಯಾಬಿಟಿಸ್ ರೋಗಿಗಳು ಚೀನಾ, ಭಾರತದಲ್ಲೇ ಹೆಚ್ಚಿದ್ದಾರೆ. ನಿಮಗೆ ಗೊತ್ತಿರುವ ಯಾರಿಗಾದರೂ ಡಯಾಬಿಟಿಸ್ ಇದ್ರೆ, ಮೊದಲು ವ್ಯಾಯಾಮ ಮಾಡುವುದಕ್ಕೆ ಹೇಳಿ. ಡಯಾಬಿಟಿಸ್ ಕಂಟ್ರೋಲ್ನಲ್ಲಿ ಇರಬೇಕಾದ್ರೆ, ಉಪ್ಪು ಜಾಸ್ತಿ ಬಳಸುವ ಊಟ, ತಿಂಡಿಗಳಿಂದ ದೂರವಿರಬೇಕು. ಕುರುಕಲು ತಿಂಡಿ ಬೇಡ. ಇದರ ಬದಲು ಫೈಬರ್ ಜಾಸ್ತಿ ಇರುವ, ಕಾರ್ಬೋಹೈಡ್ರೆಡ್ಸ್ ಚೆನ್ನಾಗಿ ತಿನ್ನಬೇಕು.
ಹಾಗಿದ್ರೆ ಯಾವೆಲ್ಲಾ ಹಣ್ಣುಗಳನ್ನ ತಿಂದ್ರೆ, ಮಧುಮೇಹ ಅಥವಾ ಡಯಾಬಿಟಿಸ್ ಕಡಿಮೆ ಆಗುತ್ತೆ ಅನ್ನೋದನ್ನ ನೋಡೋಣ.
ಕಿತ್ತಳೆ ಹಣ್ಣು : ಕಿತ್ತಳೆ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಇರುತ್ತೆ. ಇದರಿಂದ ಆಂಟಿ ಆಕ್ಸಿಡೆಂಟ್ ಹೆಚ್ಚಾಗಿದ್ದು, ಡಯಾಬಿಟಿಸ್ ರೋಗಿಗಳು ತಿಂದ್ರೆ, ಒಳ್ಳೇದು. ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೆ ಕಿತ್ತಳೆ ಹಣ್ಣು.
ಸೀಬೆಹಣ್ಣು : ಸೀಬೆಹಣ್ಣಿನಲ್ಲಿ ಫೈಬರ್ ಜಾಸ್ತಿ ಇರುತ್ತದೆ. ಫೈಬರ್ ಅನ್ನೋದು ನಾವು ತಿನ್ನುವ ಆಹಾರವನ್ನು ತಕ್ಷಣ ಜೀರ್ಣವಾಗಲು ಬಿಡುವುದಿಲ್ಲ. ಅದ್ದರಿಂದ ಶುಗರ್ ತಕ್ಷಣ ರಕ್ತದಲ್ಲಿ ಸೇರುವುದಿಲ್ಲ. ಗ್ಲೂಕೋಸ್ ಲೆವೆಲ್ಸ್ ಜಾಸ್ತಿಯಾಗುವುದಿಲ್ಲ. ಸೀಬೆಹಣ್ಣು ಡಯಾಬಿಡಿಸ್ ಇರುವವರು ತಿಂದರೂ ತೊಂದರೆಯಾಗುವುದಿಲ್ಲ.
ಕಿವಿ ಹಣ್ಣು : ಸಲ್ಪ ಹಣ ಜಾಸ್ತಿಯಾದರೂ ತುಂಬಾ ಒಳ್ಳೆಯದು ಈ ಹಣ್ಣು. ಇದರಲ್ಲಿ ವಿಟಮಿನ್ ಸಿ ಇರುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ಗಳು ನಮ್ಮ ಶರೀರದಲ್ಲಿ ಫ್ರಿರಾಡಿಕಲ್ಸ್ ಗಳನ್ನು ಓಡಿಸಿ ಬಿಡುತ್ತವೆ. ಇದರಲ್ಲಿ ಹುಳಿ ಜಾಸ್ತಿಯಾಗಿರುತ್ತದೆ. ಆದ್ದರಿಂದ ಶೀತದ ಕಾಲದಲ್ಲಿ ಕಿವಿ ಹಣ್ಣು ತಿಂದರೆ ತುಂಬಾ ಒಳ್ಳೆಯದು.
ಸೇಬು ಹಣ್ಣು : ಸೇಬು ಹಣ್ಣಿನಲ್ಲಿ ಫ್ರಕ್ಟೊಜ್ ಆಂಟಿ ಆಕ್ಸಿಡೆಂಟ್ ಪಾಲಿಫೆನಾಲ್ಸ್ ಇರುತ್ತದೆ. ಇವು ನಮ್ಮ ದೇಹದಲ್ಲಿ ಮೆಟಾಬಾಲಿಸಂ ಅನ್ನು ಹೆಚ್ಚಿಸುತ್ತವೆ. ಆದ್ದರಿಂದ ರಕ್ತದಲ್ಲಿ ಬೇಗ ಶುಗರ್ ಬೆರೆಯುವುದಿಲ್ಲ. ಟೈಪ್ -2 ಡಯಾಬಿಟಿಸ್ ಬಾರದೆ ಸೇಬು ಹಣ್ಣು ತಡೆಯುತ್ತದೆ. ಇದರಲ್ಲಿರುವ ಆಂಥೊಸಿಯಾನಿನ್, ಈ ಪ್ರಯೊಜನವನ್ನು ಕಲ್ಪಿಸುತ್ತದೆ.
ಪೇರು ಅಥವಾ ಪಿಯರ್ ಹಣ್ಣು : ಈ ಹಣ್ಣು ಸಲ್ಪ ದುಡ್ಡು ಜಾಸ್ತಿ. ಆದರೂ ಈ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್, ಫೈಬರ್ ಜಾಸ್ತಿಯಾಗಿರುತ್ತವೆ. ಈ ಹಣ್ಣು ಜ್ಯೂಸ್ ಮಾಡುವ ಬದಲು ಹಾಗೆ ತಿಂದರೆ ತುಂಬಾ ಒಳ್ಳೆಯದು. ಯಾಕೆಂದರೆ ಜ್ಯೂಸ್ ಮಾಡಿ ಕುಡಿಯುವುದರಿಂದ ಬೇಗನೆ ಶುಗರ್ ಲೆವೆಲ್ ಜಾಸ್ತಿಯಾಗುತ್ತದೆ.
ಸೋ, ಇನ್ನೇನು ಶೀತ ಕಾಲ ಶುರುವಾಗ್ತಿದೆ. ನಿಮಗೆ, ನಿಮ್ಮವರಿಗೆ, ಸ್ನೇಹಿತರಿಗೆ ಡಯಾಬಿಟಿಸ್ ಲಕ್ಷಣಗಳು ಇದ್ರೆ, ಈ ಹಣ್ಣುಗಳನ್ನ ಟ್ರೈ ಮಾಡಿ ಆರೋಗ್ಯವಾಗಿರಿ..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?