ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಆಸ್ತಿ ವಿವಾದ ಸಂಬಂಧ ಆರು ತಿಂಗಳಿಂದ ದೇವಸ್ಥಾನಕ್ಕೆ ಹಾಕಿದ್ದ ಬೀಗವನ್ನ ತೆರೆವುಗೊಳಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ನಗರದ ಪಿಬಿ ರಸ್ತೆ ಬಳಿ ಇರುವ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಕಳೆದ ಆರು ತಿಂಗಳಿಂದ ಬೀಗ ಹಾಕಲಾಗಿದೆ. ಇದನ್ನ ಪ್ರಶ್ನಿಸಿ ಇಲ್ಲಿ ಸ್ಥಳೀಯರು ಪೂಜೆ ಆರಂಭಿಸಿ ಎಂದು ದೇವಸ್ಥಾನ ಆಗ್ರಹಿಸಿದ್ದರು. ಶನಿವಾರ ಬೇರೆ ಪೂಜಾರಿಯ ತಂದು ಪೂಜೆ ಆರಂಭಿಸಲು ಜಿಲ್ಲಾಡಳಿತ ಮುಂದಾಗಿತ್ತು. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿದ್ದರು.
ಬೇರೆ ಪೂಜಾರಿಗಳಿಂದ ಪೂಜೆ ಮಾಡಿಸಲು ಮುಂದಾದಾಗ ಇಲ್ಲಿನ ಹಳೇ ಪೂಜಾರಿ ಕುಟುಂಬದ ವಿರೋಧ ವ್ಯಕ್ತಪಡಿಸಿತು. ದೇವಸ್ಥಾನದ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ದೇವಸ್ಥಾನ ದ ಆಸ್ತಿ ವಿಚಾರವಾಗಿ ಹೈಕೋರ್ಟ್ ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಎರಡು ಗುಂಪುಗಳಿಂದ ದೇವಸ್ಥಾನ ದ ಎದುರು ಧರಣಿ ನಡೆಸಿದವು. ದೇವಸ್ಥಾನದ ಬೀಗ ತೆಗೆಯದೇ ಜಿಲ್ಲಾಡಳಿತ ಕಾದು ಕುಳಿತ್ತಿತ್ತು. ಧರಣಿ ಕುಳಿತು ಅಡ್ಡಿ ಪಡಿಸುತ್ತಿದ್ದ ಹಳೇ ಪೂಜಾರಿ ಕುಟುಂಬದ ಸದಸ್ಯರನ್ನ ಪೊಲೀಸರು ವಶಕ್ಕೆ ಪಡೆದರು.
ದಾವಣಗೆರೆ ಉಪ ವಿಭಾಗಾಧಿಕಾರ ಮಮತಾ ಹೊಸಗೌಡರ ನೇತ್ರತ್ವದಲ್ಲಿ ಬೀಗ ತೆರವುಗೊಳಿಸಲಾಯಿತು. ಆರು ತಿಂಗಳಿಂದ ಬೀಗ ಹಾಕಿದ್ದ ಬೀರಲಿಂಗೇಶ್ವರ ದೇವಸ್ಥಾನ ಓಪನ್ ಆಯಿತು. ಬೇರೆ ಪೂಜಾರಿ ಕರೆಯಿಸಿ ಜಿಲ್ಲಾಡಳಿತ ಪೂಜೆ ಆರಂಭಿಸಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?