ಹೈದರಾಬಾದ್ : ತೆಲುಗು ಚಿತ್ರರಂಗದ ಹಾಸ್ಯ ನಟ, ವೇಣು ಮಾಧವ್ ಇವತ್ತು ಹೈದರಾಬಾದ್ನಲ್ಲಿ ಮೃತಪಟ್ಟಿದ್ದಾರೆ. 40 ವರ್ಷದ ವೇಣು ಮಾಧವ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಕಳೆದ ವಾರದಿಂದ ಹೈದರಾಬಾದ್ನ ಯಶೋಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಣು ಮಾಧವ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ..
ತೆಲುಗಿನ ಬಹುತೇಕ ಎಲ್ಲಾ ಸ್ಟಾರ್ಗಳ ಜೊತೆ ತೆರೆ ಹಂಚಿಕೊಂಡಿದ್ದ ವೇಣು ಮಾಧವ್, ಚಿರಂಜೀವಿ ಜೊತೆ ಮಾಸ್ಟರ್, ಪವನ್ ಕಲ್ಯಾಣ್ ಜೊತೆ ತೊಲಿಪ್ರೇಮ ಚಿತ್ರಗಳ ಮೂಲಕ ತೆಲುಗಿ ವೀಕ್ಷಕರ ಮನೆ ಮಾತಾದ್ರು. ಕೇವಲ ಹಾಸ್ಯನಟನಾಗಿಯೇ ಅಲ್ಲದೆ, ನಾಯಕ ನಟನಾಗಿ ಹಂಗಾಮ, ಭೂಕೈಲಾಸ್, ಪ್ರೇಮಾಭಿಷೇಕಂ ಚಿತ್ರಗಳಲ್ಲಿ ನಟಿಸಿದ್ದಾರೆ.
ನಟ, ಹಾಸ್ಯ ಕಲಾವಿದ, ಮಿಮಿಕ್ರಿ ಆರ್ಟಿಸ್ಟ್, TV ನಿರೂಪಕನಾಗಿಯೂ ಗುರ್ತಿಸಿಕೊಂಡಿದ್ದವರು ವೇಣು ಮಾಧವ್. ಚಿರಂಜೀವಿ, ಬಾಲಕೃಷ್ಣ, ಪ್ರಭಾಸ್, ವೆಂಕಟೇಶ್, ಜೂ. ಎನ್ ಟಿಆರ್, ಮಹೇಶ್ ಬಾಬು, ಪವನ್ ಕಲ್ಯಾಣ್, ಸೇರಿದಂತೆ ತೆಲುಗಿನ ಎಲ್ಲಾ ಸ್ಟಾರ್ ಗಳ ಜೊತೆ ನಟಿಸಿದ್ದಾರೆ. ವೇಣು ಮಾಧವ್ ನಿಧನಕ್ಕೆ ಇಡೀ ತೆಲುಗು ಚಿತ್ರರಂಗ ಸಂತಾಪ ಸೂಚಿಸಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?