ರೈಸಿಂಗ್ ಕನ್ನಡ
ವಿಜಯಪುರ:
ಟಿವಿ ನೋಡಬೇಡ ಎಂಬ ಬುದ್ದಿ ಮಾತಿಗೆ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ವಿಜಯಪುರ ನಗರದ ಹೊರವಲಯದಲ್ಲಿರುವ ಗಾಂಧಿ ನಗರದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ 17 ವರ್ಷದ ಯುವತಿ ಸ್ನೇಹಾ ನಂದಿ ಇಂತಹ ದುಡುಕಿನ ನಿರ್ಧಾರ ಕೈಗೊಂಡು ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಮೃತ ಸ್ನೇಹಾ ಟಿವಿಯಲ್ಲಿ ಹಾಡು ಕೇಳುತ್ತಿದ್ದಳು. ಈ ವಿಚಾರಕ್ಕೆ ಮನೆಯಲ್ಲಿ ಜಗಳವಾಗಿದೆ.
ಈ ವೇಳೆ ತಾಯಿ ಮಗಳಿಗೆ ಬುದ್ದಿವಾದ ಹೇಳುತ್ತಿರುವಾಗ ತಾಯಿಯೊಂದಿಗೆ ಜಗಳ ಮಾಡಿಕೊಂಡ ಮಗಳು ಸ್ನೇಹಾ ನಾನು ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಕೋಪದಲ್ಲಿ ಮನೆಯ ಹತ್ತಿರವಿದ್ದ ಕಲ್ಲಿನ ಕ್ವಾರಿಯತ್ತ (ಕಲ್ಲಿನ ಖಣಿ) ಓಡತೊಡಗಿದ್ದಾಳೆ.
ಈ ವೇಳೆ ಬೇಡ ಮಗಳೆ ನಿಲ್ಲು ಎಂದು ತಾಯಿ ಲಕ್ಷ್ಮೀ ಬೆನ್ನತ್ತಿದ್ರೂ ಮಾತು ಕೇಳದ ಮಗಳು ಸ್ನೇಹಾ ಮಳೆ ನೀರಿನಿಂದ ತುಂಬಿದ್ದ ಕಲ್ಲಿನ ಖಣಿಗೆ ಧುಮುಕಿ ಪ್ರಾಣ ಕಳೆದುಕೊಂಡಿದ್ದಾಳೆ.
ಅಷ್ಟೊತ್ತಿಗೆ ತಾಯಿ ಲಕ್ಷ್ಮೀ ಓಡೋಡಿ ಬಂದು ಗಾಂಧಿ ನಗರದ ಜನರನ್ನು ಕರೆತಂದು ನೋಡುವಷ್ಟರಲ್ಲಿ ತಾಯಿಯ ಕಣ್ಮುಂದೆಯೇ ಮಗಳು ನೀರಲ್ಲಿ ಮುಳುಗಿಬಿಟ್ಟಿದ್ದಾಳೆ. ನಂತ್ರ ವಿಷಯ ತಿಳಿದ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಯುವತಿ ಸ್ನೇಹಾಳ ಶವ ಹೊರತೆಗೆದಿದ್ದಾರೆ. ಶವಪರೀಕ್ಷೆ ಬಳಿಕ ಶವಸಂಸ್ಕಾರ ಮಾಡಲಾಗಿದೆ.
ಮಗಳ ಒಂದು ದುಡುಕಿನ ನಿರ್ಧಾರದಿಂದಾಗಿ ಇಡಿ ಮನೆ ಸ್ಮಶಾನ ಮೌನವಾಗಿದೆ. ಹರೆಯದ ಮಗಳಿಗೆ ಟಿವಿ ನೋಡಬೇಡ ಎಂದಿದ್ದೆ ದೊಡ್ಡ ತಪ್ಪು ಎನ್ನುವಂತಾಗಿದ್ದು, ಇದ್ದ ಒಬ್ಬಳೇ ಮಗಳು ಇಂದು ಇಲ್ಲವಾಗಿದ್ದಾಳೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?