ಬಿಡದಿ : ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ 25 ಮನುಷ್ಯರ ...
ಹಾಸನ: ನನ್ನ ಆರೋಗ್ಯ ಗುಣಮುಖವಾದರೆ ನಿನ್ನ ಸಮ್ಮುಖದಲ್ಲಿ ೧೦೦೧ ಕಳಸ, ಪೂಜಾ ಕೈಂಕರ್ಯ ...
ಅಲಹಾಬಾದ್ ಹೈಕೋರ್ಟ್ 1993ರಲ್ಲಿ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸರ್ಕಾರ ಹೊರಡಿಸಿದ್ದ ಆದೇಶ ...
ಪೂಜಾ ಹೆಗ್ಡೆ, ಬಾಲಿವುಡ್ನಲ್ಲಿ ಮೊದಲ ಚಿತ್ರ ಮಾಡಿ ಮಿಂಚಿದ ಕರುನಾಡ ಸುಂದರಿ. ಹೃತಿಕ್ ...
ಹಾಸನ : ವರ್ಷಕ್ಕೆ ಒಮ್ಮೆಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆಯ ದರ್ಶನಕ್ಕೆ ಕ್ಷಣಗಣನೆ ...
ಬಳ್ಳಾರಿ : ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಪರವಾಗಿ ಮಾಜಿ ...
ಚಿಕ್ಕಮಗಳೂರು : ಮಳೆ ಬಾರದೆ ಇದ್ರೆ, ದೇವರ ಮೊರೆ ಹೋಗೋದುಸಾಮಾನ್ಯ. ಅದರಲ್ಲೂ ಚಿಕ್ಕಮಗಳೂರಿನ ಕಿಗ್ಗಾದ ಋಷ್ಯಶೃಂಗೇಶ್ವರನಿಗೆಮಳೆಗಾಗಿ ರಾಜಕಾರಣಿಗಳು, ಸ್ಥಳೀಯರು ಪೂಜ ಮಾಡ್ತಾರೆ. ಆದ್ರೀಗ, ಪರಿಸ್ಥಿತಿ ಉಲ್ಟಾ ಆಗಿದೆ. ಮಲೆನಾಡಿನಲ್ಲಿ ಭಾರೀ ಮಳೆಯಾಗಿದ್ದಿ, ಅತಿವೃಷ್ಠಿ ಆಗಿದೆ. ಹೀಗಾಗಿ, ಇದೇ ಕಿಗ್ಗಾದ ಋಷ್ಯಶೃಂಗೇಶ್ವರನಿಗೆ ಮಳೆನಿಲ್ಲಿಸುವಂತೆ ವಿಶೇಷ ಪೂಜೆ ಮಾಡಲಾಗ್ತಿದೆ. ಮಳೆ ದೇವರೆಂದೇ ಖ್ಯಾತಿ ಪಡೆದಿರೋ ಋಷ್ಯಶೃಂಗ, ಬೇಕಾದಾಗಮಳೆಯಾಗಿಸಿ, ಬೇಡವಾದಾಗ ಮಳೆ ನಿಲ್ಲಿಸೋ ಶಕ್ತಿವಂತ ದೇವರುಎಂದೇ ಖ್ಯಾತಿ. ಕಳೆದ ಹಲವು ವರ್ಷ ಮಳೆ ಆಗದೇ ಇದ್ದಾಗ, ಮಳೆಗಾಗಿ ಋಷ್ಯಶೃಂಗೇಶ್ವರನಿಗೆ ಪೂಜೆ ಮಾಡಲಾಗಿತ್ತು. ಬಳಿಕ ಉತ್ತಮಮಳೆ ಕೂಡ ಆಗಿತ್ತು. ಈಗ, ವರುಣನ ಅಬ್ಬರಕ್ಕೆ ಇಡೀ ಮಲೆನಾಡುತತ್ತರಿಸಿದೆ. ಹೀಗಾಗಿ, ಮಳೆಗೆ ಹೆದರಿರೋ ಜನ, ಋಷ್ಯಶೃಂಗೇಶ್ವರನ ಮೊರೆ ಹೋಗಿದ್ದಾರೆ. ಶಾಸಕರು, ಸ್ಥಳೀಯರ ನೇತೃತ್ವದಲ್ಲಿ ಪ್ರಾಥನೆ ನಡೆದಿದ್ದು, ರುದ್ರಾಭಿಷೇಕಮಾಡಿಲಾಯ್ತು. ಮಲೆನಾಡಿನಲ್ಲಿ ಹೆಚ್ಚಿನ ಮಳೆಯಾಗಿದ್ದು, ಅತಿವೃಷ್ಠಿಯಿಂದ ಸಾಕಷ್ಟು ಹಾನಿಯಾಗಿದೆ. ಹೀಗಾಗಿ, ಮಳೆ ಸಾಕುಮಾಡು ಸ್ವಾಮಿ ಎಂದು ಎಲ್ಲರು ಬೇಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿಇವತ್ತು ವಿಶೇಷ ಪೂಜೆ, ಪುನಸ್ಕಾರ, ಹೋಮ, ರುದ್ರಾಭಿಷೇಕನಡೆಲಾಯ್ತು.