ರೈಸಿಂಗ್ ಕನ್ನಡ : ಜ್ಯೋತಿಷಶಾಸ್ತ್ರದ ಪ್ರಕಾರ ರವಿ ಗ್ರಹ ಪಿತೃಕಾರಕನಾದರೆ ಚಂದ್ರ ಗ್ರಹ ಮಾತೃಕಾರಕನಾಗಿರುವನು. ತಾಯಿಗೆ ಚಂದ್ರ ಗ್ರಹನೇ ಕಾರಕನಾಗಿರುವನು. ಏಕೆಂದರೆ ಇದು ಸೌಮ್ಯ ಗ್ರಹ. ತಾಯಿಯ ಹೃದಯವೂ ಸೌಮ್ಯವಾಗಿರುತ್ತದೆ ಮತ್ತು ಚಂದ್ರ ಗ್ರಹಕ್ಕೆ ಶತ್ರು ಗ್ರಹಗಳು ಯಾವುದೂ ಇಲ್ಲ. ಅದೇ ರೀತಿ ಯಾವ ತಾಯಿಯೂ ತನ್ನ ಮಗುವನ್ನು ಶತ್ರುವಾಗಿ ಕಾಣುವುದಿಲ್ಲ.
ಶ್ರೀ ಶಂಕರಾಚಾರ್ಯರು ರಚಿಸಿರುವ ದೇವ್ಯ ಪರಾಧಕ್ಷಮಾರ್ಪ ಸ್ತೋತ್ರದಲ್ಲಿ ‘ಕುವುತೋ ಜಾಯತ ಕ್ವಚಿದಷಿ ಕುಮಾತನ ಭವತಿ’ ಎಂದು ಹೇಳಿರುವರು. ಅಂದರೆ ಕೆಟ್ಟ ಮಗ ಇರಬಹುದು. ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂದು.
ಜಾತಕದಲ್ಲಿ ಮಾತೃಕಾರಕನ ಫಲ: ಜಾತಕದ ಲಗ್ನದಿಂದ ಎರಡನೇ ಮನೆಯಿಂದ ತಾಯಿಯ ವಿಚಾರವನ್ನು ತಿಳಿಯಬಹುದು ಎಂದು ಜ್ಯೋತಿಷಶಾಸ್ತ್ರದಲ್ಲಿದೆ.
ಮೇಷ ಲಗ್ನಕ್ಕೆ ಎರಡನೇ ಮನೆ ವೃಷಭ ರಾಶಿ. ಇಲ್ಲಿ ಚಂದ್ರನಿದ್ದರೆ ತಾಯಿಯ ಮೇಲೆ ಅತಿಯಾದ ಮಮತೆ ಇರುವುದು.
ವೃಷಭಕ್ಕೆ ಎರಡನೇ ಮನೆ ಮಿಥುನ ರಾಶಿ. ಇಲ್ಲಿ ಚಂದ್ರನಿದ್ದರೆ ಚಂದ್ರನು ಬಲಾಢ್ಯನಾಗಿದ್ದರೆ ಈತನ ಮನಸು ಬಲಾಢ್ಯವಾಗಿರುತ್ತದೆ. ತಾಯಿಯ ಮಾತಿಗೆ ಬೆಲೆ ಕೊಡುವರು.
ಮಿಥುನ ಲಗ್ನಕ್ಕೆ ಎರಡನೇ ಮನೆ ಕಟಕ ರಾಶಿ. ಇಲ್ಲಿ ಚಂದ್ರನಿದ್ದರೆ ಇದು ಚಂದ್ರನ ಸ್ವಂತ ಮನೆ. ಈತನ ಮಾತು ಮೃದುವಾಗಿರುತ್ತದೆ. ದೊಡ್ಡ ಕುಟುಂಬದಲ್ಲಿ ಜನಿಸಿರುತ್ತಾರೆ. ತಾಯಿಯನ್ನು ಹೆಚ್ಚು ಪ್ರೀತಿಸುತ್ತಾರೆ.
ಕಟಕ ಲಗ್ನಕ್ಕೆ ಎರಡನೇ ಮನೆ ಸಿಂಹ ರಾಶಿ. ಇಲ್ಲಿ ಚಂದ್ರನಿದ್ದರೆ ತಾಯಿಯ ಮಾತಿಗೆ ಬೆಲೆ ಕೊಡುವುದು ಕಡಿಮೆ ಹಾಗೂ ತಾಯಿಯಿಂದ ದೂರ ಇರುತ್ತಾರೆ.
ಸಿಂಹ ಲಗ್ನಕ್ಕೆ ಕನ್ಯಾ ರಾಶಿ ಎರಡನೇ ಮನೆ. ಇಲ್ಲಿ ಚಂದ್ರನಿದ್ದರೆ ಮಾತಿನಲ್ಲಿ ಚತುರರು. ತಾಯಿ ಹಾಕಿದ ಗೆರೆ ದಾಟುವುದಿಲ್ಲ.
ಕನ್ಯಾ ಲಗ್ನಕ್ಕೆ ತುಲಾ ರಾಶಿ ಎರಡನೇ ಮನೆ. ಇಲ್ಲಿ ಚಂದ್ರನಿದ್ದರೆ ತಾಯಿಯ ಜತೆಯಲ್ಲಿಯೇ ವಾಸ. ಅವರಿಗಾಗಿ ಜೀವವೇ ಕೊಡುವರು.
ತುಲಾ ಲಗ್ನಕ್ಕೆ ವೃಶ್ಚಿಕ ರಾಶಿ ಎರಡನೇ ಮನೆ. ಇಲ್ಲಿ ಚಂದ್ರನಿದ್ದರೆ ತಾಯಿಯ ಹಾಗೆಯೇ ಸ್ವಭಾವ.
ವೃಶ್ಚಿಕ ಲಗ್ನಕ್ಕೆ ಧನಸ್ಸು ರಾಶಿ ಎರಡನೇ ಮನೆ. ಇಲ್ಲಿ ಚಂದ್ರನಿದ್ದರೆ ತಾಯಿಯ ಆಸ್ತಿ ಲಭ್ಯವಾಗುತ್ತದೆ. ತಾಯಿಯ ಮಾತಿಗೆ ಬೆಲೆ ನೀಡುವರು.
ಧನಸ್ಸು ರಾಶಿಗೆ ಮಕರ ರಾಶಿ ಎರಡನೇ ಮನೆ. ಇಲ್ಲಿ ಚಂದ್ರನಿದ್ದರೆ ತಾಯಿಗೆ ವಿರುದ್ಧವಾದ ಮಾತನ್ನೇ ಆಡುವುದು ಹೆಚ್ಚು.
ಮಕರ ಲಗ್ನಕ್ಕೆ ಕುಂಭ ಎರಡನೇ ಮನೆ. ಇಲ್ಲಿ ಚಂದ್ರನಿದ್ದರೆ ತಾಯಿಯ ಆಶ್ರಯದಲ್ಲಿಯೇ ಬೆಳೆಯುವರು. ಅವರ ವೃತ್ತಿಯನ್ನು ಮುಂದುವರಿಸುವರು.
ಕುಂಭ ಲಗ್ನಕ್ಕೆ ಮೀನ ಎರಡನೇ ಮನೆ. ಇಲ್ಲಿ ಚಂದ್ರನಿದ್ದರೆ ತಾಯಿಗೆ ತಕ್ಕ ಮಗನಾಗಿ ಜೀವಿಸುವರು.
ಮೀನ ಲಗ್ನಕ್ಕೆ ಮೇಷ ರಾಶಿ ಎರಡನೇ ಮನೆ. ಇಲ್ಲಿ ಚಂದ್ರನಿದ್ದರೆ ತಾಯಿಯ ಮೇಲೆ ಪ್ರೀತಿ ಕಡಿಮೆ ಇದ್ದರೂ ಅಂತ್ಯ ಕಾಲದಲ್ಲಿ ತಾಯಿಯನ್ನು ಚೆನ್ನಾಗಿ ನೋಡುವರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?