Featured
ಪೆನ್ನು ಹಿಡಿಯಬೇಕಾದ ಕೈಯಲ್ಲಿ ನೇಗಿಲು: ಕೃಷಿ ಮಾಡಿ ಇತರರಿಗೆ ಮಾದರಿಯಾದ ವಿಜಯಪುರದ ಮಕ್ಕಳು

ರೈಸಿಂಗ್ ಕನ್ನಡ :
ವಿಜಯಪುರ:
ಇಡೀ ಜಗತ್ತಿಗೆ ಮಹಾಮಾರಿ ಕೊರೊನಾ ಮನುಷ್ಯನ ಬದುಕನ್ನೆ ಕಿತ್ತುಕೊಳ್ಳುಷ್ಟರ ಮಟ್ಟಿಗೆ ಸಮಸ್ಯೆಗಳನ್ನು ತಂದೊಡ್ಡಿದೆ. ಇದರಿಂದ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳು ಎದುರಾಗಿದ್ದರೂ, ಹಲವಾರು ಬಗೆಯಲ್ಲಿ ಪಾಠವನ್ನ ಕೊರೊನಾ ಹೇಳಿ ಕೊಟ್ಟಿದೆ. ಕೋವಿಡ್ 19ಗೆ ಹೆದರಿ ಬೆಂಗಳೂರನ್ನ ತೊರೆದು ತಮ್ಮ ತಮ್ಮ ಹಳ್ಳಿಗಳನ್ನ ಸೇರಿದ್ದ ಅದೆಷ್ಟೊ ಮಂದಿ ಕೃಷಿ ಮಾಡಿ ಜೀವನ ನಡೆಸಲು ನಿರ್ಧರಿಸಿದ್ದರು.
ಇವರು ಮಾತ್ರವಲ್ಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡ ಕೃಷಿಯತ್ತ ಆಸಕ್ತಿ ತೋರುವಂತೆ ಮಾಡಿದೆ. ಪ್ರತಿ ಬಾರಿ ಮುಂಗಾರು ಆರಂಭವಾಗುತ್ತಿದ್ದಂತೆ ಶಾಲೆ, ಕಾಲೇಜುಗಳು ಪ್ರಾರಂಭವಾಗುತ್ತಿದ್ದವು. ಆದರೆ, ಈ ಬಾರಿ ಕೊರೊನಾ ಕಾಟದಿಂದಾಗಿ ಶಾಲೆ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಇದು ವಿದ್ಯಾರ್ಥಿಗಳ ಪಾಲಿಗಂತೂ ಮನೆಯಲ್ಲಿಯೇ ಇರುವಂತೆ ಮಾಡಿದೆ. ಆದರೆ, ಮನೆಯಲ್ಲಿಯೇ ಕುಳಿತುಕೊಳ್ಳಲು ಕೂಡ ಇವರಿಗೆ ಬೇಸರವಾಗುತ್ತಿತ್ತು. ಪರಿಣಾಮ ಈಗ ಮುಂಗಾರು ಆರಂಭವಾಗಿದ್ದರಿಂದ ಬಸವನಾಡು ವಿಜಯಪುರದಲ್ಲಿ ವಿದ್ಯಾರ್ಥಿಗಳು ಪಾಲಕರೊಂದಿಗೆ ಕೃಷಿಯಲ್ಲಿ ತೊಡಗಿದ್ದಾರೆ.
ಮುಂಗಾರು ಮಳೆಯಾದ ಪರಿಣಾಮ ಭೂಮಿ ಹದವಾಗಿದ್ದು, ನೇಗಿಲು ಹೊಡೆಯುವುದು, ಮಣ್ಣನ್ನು ಹರಗುವುದು, ಕಳೆ ಕೀಳುವುದು ಮತ್ತು ಬಿತ್ತನೆಯಂಥ ಚಟುವಟಿಕೆಗಳತ್ತ ಈಗ ಈ ಮಕ್ಕಳು ಮತ್ತು ವಿದ್ಯಾರ್ಥಿಗಳು ಖುಷಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಕೊರೊನಾದಿಂದಾಗಿ ಈಗ ಅರ್ಥ ವ್ಯವಸ್ಥೆ ಕುಸಿದಿದೆ.
ಹಲವಾರು ಉದ್ಯಮಗಳು ನೆಲ ಕಚ್ಚಿವೆ. ಸಾವಿರಾರು ಜನ ನಿರುದ್ಯೋಗಿಗಳಾಗಿದ್ದಾರೆ. ದೊಡ್ಡ ಕನಸುಗಳನ್ನು ಹೊತ್ತು ಮಹಾನಗರಗಳತ್ತ ಮುಖ ಮಾಡುತ್ತಿದ್ದ ಜನ ಈಗ ಕೆಲಸ ಕಳೆದುಕೊಂಡು ತಾಯ್ನಾಡಿಗೆ ಮರಳಿದ್ದಾರೆ.
ದೇಶದ ಬೆನ್ನೆಲುಬಾಗಿರುವ ಈ ಮಕ್ಕಳು ಮತ್ತು ಕೃಷಿ ಈ ಕೊರೊನಾ ಸಂದರ್ಭದಲ್ಲಿ ಒಂದು ವರದಾನವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳು ಈ ಕೊರೊನಾ ಜೊತೆಗೆ ಕೃಷಿಯ ಪಾಠವನ್ನು ಕಲಿಯುತ್ತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?