Connect with us

Featured

ಡಿಬಾಸ್​ ವರ್ಸಸ್​​ ಕಿಚ್ಚ..! ಸ್ಯಾಂಡಲ್​​ವುಡ್​ನಲ್ಲಿ ಇದೆಂಥಾ ಸ್ಟಾರ್​ ವಾರ್​..? ಬೇಕಾ ಇದೆಲ್ಲಾ..?


ರೈಸಿಂಗ್ ಕನ್ನಡ ಸಿನಿಮಾ : ಇಬ್ಬರೂ ಸ್ಟಾರ್​ಗಳು. ಕೋಟ್ಯಂತರ ಅಭಿಮಾನಿಗಳಿರೋ ಸ್ಟಾರ್​ ನಟರು. ಒಂದು ಕಾಲದಲ್ಲಿ ಕುಚುಕು ಗೆಳೆಯರು. ಒಬ್ಬರನ್ನ ಒಬ್ಬರು ಬಿಟ್ಟು ಇರಲಾರದಷ್ಟು ಆತ್ಮೀಯರು. ಆದ್ರೀಗ, ದ್ವೇಷ, ಅಸೂಯೆ ಮಾತ್ರ ಕಾಣ್ತಿದೆ. ಇಲ್ಲಿ ಯಾರದ್ದು ತಪ್ಪು, ಯಾರು ಸರಿ ಅನ್ನೋ ಮಾತೇ ಇಲ್ಲ. ಇಬ್ಬರದ್ದು ತಪ್ಪು.. ಇಬ್ಬರೂ ಸರಿ. ಎಲ್ಲವೂ ಅಹಂ ಮಯಂ ಅಂದ್ರೆ ತಪ್ಪಲ್ಲ.

ಯೆಸ್​, ನಾವ್​ ಹೇಳ್ತಿರೋದು ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಎಂಬ ಸ್ನೇಹಿತರು ವೈರಿಗಳಾಗಿರೋ ಕಥೆ. ಕಳೆದ ಮೂರು ತಿಂಗಳಿಂದ ಈ ಇಬ್ಬರು ಸ್ಟಾರ್​ಗಳ ಮಧ್ಯೆ, ವಾರ್ ನಡೆಯುತ್ತಲೇ ಇದೆ. ಬಹಿರಂಗ ಹೇಳಿಕೆಗಳಿಂದ ಹಿಡಿದು, ಸೋಶಿಯಲ್ ಮೀಡಿಯಾ ಸ್ಟೇಟಸ್​​ ಸೇರಿದಂತೆ ಆರೋಪ, ಪ್ರತ್ಯಾರೋಪಗಳು ಜೋರಾಗಿಯೇ ನಡೀತಿವೆ.

ಬಹುಶಃ ಕನ್ನಡ ಚಿತ್ರರಂಗದಲ್ಲಿ ಈ ಮಟ್ಟಿಗೆ ಸ್ಟಾರ್​ ವಾರ ನಾವು ಕಂಡಿಲ್ಲ ಅನ್ಸುತ್ತೆ. ಶೀತಲ ಸಮರವನ್ನ ನಾವು ನೋಡಿದ್ದೇವೆ. ಆದ್ರೆ, ಬಹಿರಂಗವಾಗಿ ಈ ರೀತಿಯ ಸ್ಟಾರ್ ವಾರ್​ ಈಗ ಕಾಣ್ತಿದ್ದೇವೆ. ಒಬ್ಬ ಸ್ಟಾರ್ ನಟನ ಸಿನಿಮಾ ಬಗ್ಗೆ ನೆಗೆಟಿವ್​ ಕಾಮೆಂಟ್​ ಹಾಕುವುದು. ಸಿನಿಮಾ ಚೆನ್ನಾಗಿದ್ರೂ, ಪ್ರೇಕ್ಷಕರೇ ಇಲ್ಲ. ಜನರೇ ಇಲ್ಲ. ಸಿನಿಮಾ ಕೆಟ್ಟದಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಿಂಬಿಸುವುದು ಪೈಲ್ವಾನ್​ ಸಿನಿಮಾದಿಂದ ಶುರುವಾದಂತೆ ಕಾಣ್ತಿದೆ.

Advertisement

ಪೈಲ್ವಾನ್​ ಸಿನಿಮಾ ಬಗ್ಗೆ ನೆಗೆಟಿವ್​ ಪ್ರಚಾರ, ನೆಗೆಟಿವ್ ಕಾಮೆಂಟ್​​ಗಳನ್ನ ದರ್ಶನ್​ ಅಭಿಮಾನಿಗಳು ಮಾಡಿದ್ರು ಅನ್ನೋದು ಸುದೀಪ್ ಅಭಿಮಾನಿಗಳ ವಾದ. ಆದ್ರೆ, ಇದಕ್ಕೆ ದರ್ಶನ್​ ಅಭಿಮಾನಿಗಳು ಕೊಡ್ತಿರೋ ಉತ್ತರ, ನಮಗೆ ಅದರ ಅನಿವಾರ್ಯ ಇಲ್ಲ. ನಾವು ಅಂತಹ ನೀಚ ಕೆಲಸ ಮಾಡಲ್ಲ ಎಂದು. ಇದಕ್ಕೆ ಮತ್ತಷ್ಟು ಮುಂದೆ ಹೋಗಿರೋ ಸ್ವತಃ ದರ್ಶನ್​ ಕೂಡ ಟ್ವೀಟ್​ ಮಾಡಿ ಅಭಿಮಾನಿಗಳ ಬೆಂಬಲಕ್ಕೆ ನಿಂತಿದ್ದಾರೆ. ನನ್ನ ಅಭಿಮಾನಿಗಳು, ದೇವರುಗಳು, ಸೆಲಬ್ರೆಟಿಗಳಿಗೆ ಯಾರು ಅಪಮಾನ ಮಾಡುವಂತಿಲ್ಲ ಎಂದು ಪರೋಕ್ಷವಾಗಿ ಸುದೀಪ್​ ಹಾಗೂ ಸುದೀಪ್​ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೂ ಮುನ್ನ ಇತ್ತೀಚೆಗಷ್ಟೇ ಸುದೀಪ್​ ಕೂಡ ಟ್ವೀಟ್​ ಮಾಡಿದ್ರು. ಯಾರು ಎಷ್ಟೇ ನೆಗೆಟಿವ್​ ಪ್ರಮೋಷನ್ ಮಾಡಿದ್ರೂ, ಒಳ್ಳೇ ಸಿನಿಮಾ ಗೆದ್ದೇ ಗೆಲ್ಲುತ್ತೆ. ಅಭಿಮಾನಿಗಳು, ಕನ್ನಡ ಜನತೆಗೆ ಧನ್ಯವಾದಗಳೂ ಎಂದು ಟ್ವೀಟ್​ ಮಾಡಿದ್ರು.

Advertisement

ಇಷ್ಟೆಲ್ಲಾ ಆದ್ರೂ, ಸುದೀಪ್​ ಮತ್ತು ದರ್ಶನ್​ ಫ್ಯಾನ್ಸ್​ ನಡುವೆ ವಾರ್ ಮಾತ್ರ ನಿಂತಿಲ್ಲ. ಅವರ ವಿರುದ್ಧ ಇವರು, ಇವರ ವಿರುದ್ಧ ಅವರು ಕಿತ್ತಾಡುತ್ತಲೇ ಇದ್ದು, ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಟ್ವೀಟ್​, ಪೋಸ್ಟ್​ ಹಾಕುತ್ತಲೇ ಇದ್ದಾರೆ. ಇದು ಕನ್ನಡ ಸಿನಿಮಾ ಮಟ್ಟಿಗೆ ಕೆಟ್ಟ ಬೆಳವಣಿಗೆ ಅಂದ್ರೆ ತಪ್ಪಲ್ಲ.

ಇದೇ ರೀತಿಯ ಬೆಳವಣಿಗೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಇತ್ತು. ಆದ್ರೀಗ ಅಲ್ಲೂ ಕೂಡ ಕಡಿಮೆ ಆಗಿದೆ. ಆದ್ರೆ, ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ ಹೀಗೆ ಬಹಿರಂಗವಾಗಿ ನಡೀತಿರೋದು ಚಿತ್ರರಂಗ ಹಾಗೂ ಅಭಿಮಾನಿಗಳು ಹಾಗೂ ಸಿನಿಮಾ ಪ್ರೇಕ್ಷಕರಿಗೆ ಒಳ್ಳೇದಂತೂ ಅಲ್ಲವೇ ಅಲ್ಲ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ