Featured
ನಕ್ಕರೇ ಅದೇ ಸ್ವರ್ಗದ ಮೂಲಕ ಚಂದನವನದಲ್ಲಿ 4 ಸಾವಿರ ಹಾಡು ಹಾಡಿದ್ದ ಗಾನ ಕೋಗಿಲೆ ಎಸ್ಪಿಬಿ

ರೈಸಿಂಗ್ ಕನ್ನಡ:
ನ್ಯೂಸ್ಡೆಸ್ಕ್:
ಗಾನ ಗಂಧರ್ವ ಎಸ್ಪಿ ಬಾಲಸುಬ್ರಹ್ಮಣ್ಯಂ ವಿಧಿವಶರಾಗಿದ್ದಾರೆ. ಎಸ್ಪಿಬಿ ನಮ್ಮನ್ನು ಬಿಟ್ಟು ಹೋಗಿದ್ದರೂ ಅವರ ಹಾಡಗಳು ಯಾವತ್ತಿಗೂ ಅಜರಾಮರ.ಅದರಲ್ಲೂ ಕನ್ನಡ ಸಿನಿಮಾಕ್ಕೆ ಎಸ್ಪಿ ಕೊಟ್ಟ ಕೊಡುಗೆ ಅಪಾರ.
1966 ಡಿಸೆಂಬರ್ 15ರಲ್ಲಿ ತೆಲುಗಿನ ಶ್ರೀ ಶ್ರೀ ಶ್ರೀ ಮರ್ಯಾದ ರಾಮಣ್ಣ ಸಿನಿಮಾಕ್ಕೆ ಮೊದಲು ಹಾಡು ಹಾಡಿದ್ದರು. ವಿಶೇಷ ಎಂದರೆ ಎರಡನೆ ಹಾಡು ಕನ್ನಡಕ್ಕೆ ಧ್ವನಿಯಾಗಿದ್ದರು. ಕನ್ನಡದ ಗಾನ ಕೋಗಿಲೆ ಎಸ್ಪಿ ಬಾಲಸುಬ್ರಹ್ಮಣ್ಯಂ ನಕ್ಕರೇ ಅದೇ ಸ್ವರ್ಗ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು.
ಕನಸಿದೊ ನನಸಿದೊ ಡ್ಯುಯೆಟ್ ಹಾಡಿನ ಮೂಲಕ ಕನ್ನಡದಲ್ಲಿ ಹಾಡಿದ ಎಸ್ಪಿಬಿ ನಂತರ ಹಿಂತಿರುಗಿ ನೋಡಲಿಲ್ಲ. ಕನ್ನಡದಲ್ಲಿ ಎಸ್ಪಿ ಹಾಡಿದ್ದು ಬರೋಬ್ಬರಿ 4 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿದ್ದಾರೆ.
ವರನಟ ರಾಜ್ಕುಮಾರ್, ವಿಷ್ಣುವರ್ಧನ್, ಶಂಕರ್ನಾಗ್, ಅಂಬರೀಷ್,ರವಿಚಂದ್ರನ್ ಅವರ ಧ್ವನಿಗೆ ತಕ್ಕಂತೆ ಹಾಡುಗಳನ್ನ ಹಾಡಿದ್ದರು.
ಪಿಆರ್ಕೆ ಪ್ರೊಡಕ್ಷನ್ ಅವರ ಮಯಾಬಜಾರ್ 2016 ಚಿತ್ರದ ನಿಮಗೂ ಗೊತ್ತು ನಮಗೂ ಗೊತ್ತು ಹಾಡು ಕೊನೆಯ ಹಾಡಾಗಿತ್ತು.
ಎಸ್ಪಿ ಬಾಲಸುಬ್ರಹ್ಮಣ್ಯಂ ಬಹುತೇಕ ಎಲ್ಲಾ ಬಾಷೆಗಳಲ್ಲೂ ಹಾಡಿದ್ದಾರೆ.ಯಾವಗಲೂ ಹೇಳುತ್ತಿದ್ದ ಒಂದು ಮಾತು ಭಾಷೆ ಮುಖ್ಯವಲ್ಲ ಭಾವ ಮುಖ್ಯ ಅನ್ನುತ್ತಿದ್ದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?