Cinema : ಮಾಧ್ಯಮಗಳು ತಾವು ಪ್ರಕಟಿಸುವ ಸುದ್ದಿಗಳ ಸತ್ಯಾಸತ್ಯತೆಯನ್ನು ತಿಳಿದುಕೊಂಡು ವರದಿ ಮಾಡಬೇಕು ಎಂದು ದಕ್ಷಿಣ ಭಾರತದ ನಟಿ ನಿವೇತಾ ಪೇತುರಾಜ್ ಹೇಳಿದ್ದಾರೆ. ಯುಟ್ಯೂಬರ್ ಒಬ್ಬ ತಮಿಳುನಾಡು ಮಂತ್ರಿ ಉದಯನಿಧಿ ಸ್ಟಾಲಿನ್, ನಿವೇತಾ ಪೇತುರಾಜ್ ಗಾಗಿ ದುಬೈನಲ್ಲಿ 50 ಕೋಟಿ ರೂಪಾಯಿ ಮನೆ ಕೊಡಿಸಿದ್ದಾರೆ. ಅಲ್ದದೇ, ತಿಂಗಳಿಗೆ ಎರಡು ಬಾರಿ ಉದಯನಿಧಿ ಸ್ಟಾಲಿನ್ ಜೊತೆ ಮಾತನಾಡಲು ನಿವೇತಾ ಪೇತುರಾಜ್ ತಮಿಳುನಾಡಿಗೆ ಬಂದು ಹೋಗುತ್ತಾರೆ ಎಂದು ವರದಿ ಮಾಡಿದ್ದ. ಇದನ್ನು ಅಲ್ಲಗಳೆದಿರುವ ನಿವೇತಾ ಪೇತುರಾಜ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
‘‘ಈ ರೀತಿ ಸುಳ್ಳು ಸುದ್ದಿಗಳನ್ನು ಪ್ರಕಟಿಸುವ ಮೂಲಕ ನೆಮ್ಮದಿಯಾಗಿದ್ದ ಯುವತಿಯ ಮನಃ ಶಾಂತಿ ಹಾಳು ಮಾಡುವುದೇ ಅಲ್ಲದೇ, ಆಕೆಯ ಜೀವನದ ಜೊತೆಯೂ ಆಟವಾಡುತ್ತೇವೆ ಎಂದು ತಿಳಿದುಕೊಳ್ಳಬೇಕು. ಕಳೆದ 20 ವರ್ಷಗಳಿಂದ ನಾನು ಮತ್ತು ನನ್ನ ಕುಟುಂಬ ದುಬೈನಲ್ಲಿ ವಾಸವಾಗಿದ್ದೇವೆ. ಜೀವದನಲ್ಲಿ ಬಹಳ ಕಷ್ಟಪಟ್ಟು ಈಗಿನ ಸ್ಥಿತಿ ತಲುಪಿದ್ದೇನೆ.
ನಾನು ಪಟ್ಟ ಕಷ್ಟಕ್ಕೆ ಪ್ರತಿಫಲವನ್ನು ನಾನು ಪಡೆಯುತ್ತಿದ್ದೇನೆ. ಸಿನಿಮಾ ರಂಗದಲ್ಲಿಯೂ ಸಹ ನಾನು ಇದುವರೆಗೆ ಯಾವುದೇ ನಿರ್ಮಾಪಕ, ನಿರ್ದೇಶಕ, ನಟರ ಬಳಿ ನನಗೆ ಪಾತ್ರ ಕೊಡಿ ಎಂದು ಕೇಳಿಲ್ಲ. ನಾನು ನಟಿಸಿರುವ ಚಿತ್ರಗಳ ಪಾತ್ರಕ್ಕೆ ನಾನು ಸರಿಯಾದ ಕಲಾವಿದೆ ಎಂದು ಭಾವಿಸಿ ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವ ಮುನ್ನ ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ’’ ಎಂದು ಪೋಸ್ಟ್ ಮಾಡಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?