ರೈಸಿಂಗ್ ಕನ್ನಡ :
ರಾಮನಗರ :
ಚಿಕ್ಕ ವಯಸ್ಸಿನಲ್ಲಿಯೇ ಸಮಾಜ ಸೇವೆ ಮಾಡುತ್ತಿರುವ ಯುವತಿ. ಕೊರೊನಾ ಸಂದರ್ಭದಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡುತ್ತಿದ್ದಾರೆ ಈ ಯವತಿ. ನವ್ಯ ಫೌಂಡೇಶ್ ಮೂಲಕ ಬಡವರಿಗೆ ಆಸರೆಯಾಗುತ್ತಿದ್ದಾರೆ.
ಬಡವರಿಗೆ ಆಸರೆಯಾದ ನವ್ಯ ಫೌಂಡೇಶನ್
ಈ ಯವತಿ ಹೆಸರು ನವ್ಯ. ಓದಿದ್ದು ಇಂಜಿನಿಯರಿಂಗ್ ಆದ್ರು ಸಾಮಾಜ ಸೇವೆಯಲ್ಲಿ ತಮ್ಮನ್ನ ತಾವು ತೋಡಗಿಸಿಕೊಂಡಿದ್ದಾರೆ. ಪ್ರಸ್ತುತ ಈಕೆ ಕಿಸಾನ್ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ಹಸಿವಿನಿಂದ ಬಳಲುತ್ತಿರುವ ಬಡವರಿಗೆ ತಮ್ಮ ಆದೇ ನವ್ಯ ಫೌಂಡೇಶನ್ ವತಿಯಿಂದ ಉಚಿತವಾಗಿ ಬಡವರಿಗೆ ಆಹಾರ ಧಾನ್ಯ ವಿತರಣೆ ಮಾಡಿದ್ದಾರೆ.
ನೂರಾರು ಬಡವರಿಗೆ ಆಹಾರ ಕಿಟ್ ವಿತರಣೆ
ಚನ್ನಪಟ್ಟಣ ತಾಲೂಕಿನ ಕುಂತೂರು ದೊಡ್ಡಿ , ಕಳ್ಳಿ ಹುಸೂರು, ಪೇಟೆ ಬೀದಿ, ಮಳೂರುಪಟ್ಟಣ, ರಾಂಪುರ, ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ಆಹಾರ ದಾನ್ಯದ ಕಿಟ್ ಗಳನ್ನ ಮನೆ ಮನೆಗೆ ತೆರಳಿ ವಿತರಣೆ ಮಾಡಿದ್ದಾರೆ.
ಹಾಗೆಯೇ ಇದಲ್ಲದೆ ರೈತರು ಬೆಳೆದೆ ತರಕಾರಿ ಖರೀದಿ ಮಾಡಿ ಮೊದಲ ಹಂತದಲ್ಲಿ ಈ ಫೌಂಡೇಶನ್ ವತಿಯಿಂದ ಸುಮಾರು 500 ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಜೊತೆಗೆ ತರಕಾರಿಗಳ ಕಿಟ್ ವಿತರಿಸಲಾಯಿತು. ತಾಲೂಕಿನ ಬಡಕುಟುಂಬಗಳಿಗೆ, ನಿರ್ಗತಿಕರಿಗೆ ಹಾಗೂ ಕೂಲಿಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ ಮಾಡಲಾಯಿತು. ಯಾರು ಕೂಡ ಮನೆಯಿಂದ ಹೊರ ಬರಬೇಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಇದೇ ವೇಳೆ ಫೌಂಡೇಷನ್ ಅಧ್ಯಕ್ಷರು ಮನವಿ ಮಾಡಿದರು.
ದೇಗುಲದ ಕಲ್ಯಾಣಿ ಸ್ವಚ್ಛತೆ
ಲಾಕ್ ಡೌನ್ ಸಂದರ್ಭದಲ್ಲಿ ಒಂದು ಹೊತ್ತು ಊಟಕ್ಕೂ ಜನರು ಪರದಾಡುವ ಪರಿಸ್ಥಿತಿ ಇತ್ತು. ದಿನಗೂಲಿ ನಂಬಿಕೊಂಡವರ ಸ್ಥಿತಿ ಆತಂತ್ರವಾಗಿತ್ತು. ಕೂಲಿಯು ಇಲ್ಲದೆ ಹಣವು ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂಥ ಬಡವರನ್ನ ಗುರ್ತಿಸಿ ನವ್ಯ ಫೌಂಡೇಶನ್ ಅವರಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ. ಹಾಗೆಯೇ ದೊಡ್ಡಮಳೂರು ಗ್ರಾಮದಲ್ಲಿನ ಐತಿಹಾಸಿಕ ದೇಗುಲದ ಕಲ್ಯಾಣಿ ಸ್ವಚ್ಛತೆ ಕಾರ್ಯ ಮಾಡುತ್ತಿದ್ದಾರೆ. ಸ್ನೇಹಿತರೊಡಗೂಡಿ ಕಲ್ಯಾಣಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ.
ಒಟ್ಟಾರೆ ಚಿಕ್ಕ ವಯಸ್ಸಿನಲ್ಲಿಯೇ ನವ್ಯಶ್ರಿ ಮಾಡುತ್ತಿರುವ ಸಾಮಾಜಿಕ ಸೇವೆಗೆ ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಮುಂದೆಯು ಕೂಡ ಇವರ ಸಾಧನೆ ಹೀಗೆ ಮುಂದುವರೆಯಲಿ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?