Featured
ಕೊರೊನಾ ಭೀತಿ ಹಿನ್ನಲೆ: ಸರಳ ದಸರಾ ಆಚರಣೆಗೆ ರಾಜ್ಯ ಸರ್ಕಾರ ನಿರ್ಧಾರ

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಕೊರೊನಾ ಭೀತಿ ಇರುವ ಹಿನ್ನಲೆಯಲ್ಲಿ ನಾಡ ಹಬ್ಬ ದಸರ ಹಬ್ಬವನ್ನ ಸರಳವಾಗಿ ಆಚರಿಸುವುದಾಗಿ ಸಿಎಂ ಬಿ.ಸ್.ಯಡಿಯೂರಪ್ಪ ಹೇಳಿದ್ದಾರೆ.
ಮಂಗಳವಾರ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ದಸರಾ ಮಹೋತ್ಸವಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಸಭೆ ನಡೆಯಿತು. ಸಾಂಪ್ರದಾಯಿಕ ಹಬ್ಬವನ್ನ ಕೈಬಿಡದೇ ವೈಭವಕ್ಕೆ ಕಡಿವಾಣ ಹಾಕಲು ತೀರ್ಮಾನಿಸಲಾಯಿತು. ಜನಸಂದಣಿ ಸೇರದೆ ಸಾಂಕೇತಿಕ ಅಚರಣೆಗೆ ಅವಕಾಶ ನೀಡಲಾಗುವುದೆಂದು ತೀರ್ಮಾನಿಸಲಾಯಿತು.
ಯುವ ದಸರಾ,ಆಹಾರ ಮೇಳ ಮತ್ತು ಕ್ರೀಡೆ ಕಾರ್ಯಕ್ರಮ ಈ ಬಾರಿ ಹಮ್ಮಿಕೊಳ್ಳದಿರಲು ತೀರ್ಮಾನಿಸಲಾಯಿತು.
ನಾಡ ದೇವತೆ ಚಾಮುಂಡೇಶ್ವರಿಯ ಅಗ್ರ ಪೂಜೆ ಮತ್ತು ದಸರಾ ಉದ್ಘಾಟನೆಯನ್ನ ಕೊರೊನಾ ಯೋಧರಾದ ವೈದ್ಯರು, ಅಶಾ ಕಾರ್ಯಕರ್ತರು ಪೌರ ಕಾರ್ಮಿಕರಿಂದ ಉದ್ಘಾಟಿಸಲು ಸಭೆ ತೀರ್ಮಾನಿಸಿದೆ.
ದಸರಾ ಮರ್ಗಾಸೂಚಿಗಳನ್ನ ಬಿಡುಗಡೆ ಮಾಡಲಾಗಿದೆ.ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿದ್ಯುಕ್ತವಾಗಿ ಪೂಜೆ ನೆರವೇರಿಸುವುದು. 5ರಿಂದ 6 ಆನೆಗಳನ್ನ ಬಳಸಿ ಜಂಬೂ ಸವಾರಿಯನ್ನ ಅರಮನೆ ಆವರಣದಲ್ಲಿ ನಡೆಸುವುದು. ಮೈಸೂರು ನಗರದಲ್ಲಿ ವಿದ್ಯುತ್ ಅಲಂಕಾರ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?