ರೈಸಿಂಗ್ ಕನ್ನಡ :- ಕೂದಲು ಉದುರುವುದು ಬಹಳ ದೊಡ್ಡ ಸಮಸ್ಯೆಯಾಗಿದ್ದು , ನಮ್ಮ ಹಲವಾರು ಅಭ್ಯಾಸಗಳು ಕೂಡ ಕೂದಲು ಉದುರುವಿಕೆಗೆ ಕಾರಣವಾಗುತ್ತವೆ. ಕಳಪೆ ಆಹಾರ ಪದ್ಧತಿ, ಹೆಚ್ಚಿದ ಮಾಲಿನ್ಯ, ಸರಿಯಾಗಿ ಸಂರಕ್ಷಿಸದಿರುವುದು ಇತರ ಅಂಶಗಲು ಕೂದಲು ಉದುರುವಿಕೆಗೆ ಕಾರಣವಾಗುತ್ತವೆ.
ಕೂದಲು ಒದ್ದೆಯಾದಾಗ ಬಾಚಬೇಡಿ
ನಿಮ್ಮ ಕೂದಲು ಒದ್ದೆಯಾದಾಗ , ಕತ್ತರಿಸುವ ಸಾಧ್ಯತೆ ಹೆಚ್ಚು ಇರುತ್ತದೆ. ಆದ್ದರಿಂದ ಕೂದಲು ಒದ್ದೆಯಾದಾಗ ಬಾಚಣಿಗೆಯಲ್ಲಿ ಬಾಚುವ ಬದಲು ಕೂದಲು ಸರಿಯಾಗಿ ಒಣಗಳು ಬಿಡಿ. ಹೇರ್ ಡ್ರೈಯರ್ ಬಳಸುವುದನ್ನು ನಿಲ್ಲಿಸಿ. ಕೂಸದಲು ನೈಸರ್ಗಿಕವಾಗಿ ಒಣಗಲು ಬಿಡಬೇಕು.
ನಿಯಮಿತವಾಗಿ ಎಣ್ಣೆ ಬಳಸಿ
ನಿಮ್ಮ ಕೂದಲಿಗೆ ಎಣ್ಣೆ ಹಾಕುವುದು ಸಹ ಬಹಳ ಮುಖ್ಯ. ಕೂದಲಿಗೆ ನಿಯಮಿತವಾಗಿ ಎಣ್ಣೆ ಹಚ್ಚುವುದರಿಂದ ಅಗತ್ಯವಾದ ಶಲ್ತಿ ಬರುತ್ತದೆ. ಪದೇ ಪದೇ ಎಣ್ಣೆ ಹಚ್ಚುವುದರಿಂದ ಕೂದಲಿನ ವಿವಿಧ ಸಮಸ್ಯೆಗಳನ್ನು ಎದುರಿದಬೇಕಾಗುತ್ತದೆ.
ಪೌಷ್ಟಿಕಾಂಶ ಆಹಾರ ಸೇವಿಸಬೇಕು
ನಿಮ್ಮ ಆಹಾರ ಪದ್ಧತಿ ಸಹ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಆಹಾರಗಳು ನಿಮ್ಮ ಕೂದಲಿಗೆ ಪೋಷಕಾಂಶಗಳನ್ನು ನೀಡುವ ಮೂಲಕ ನಿಮ್ಮ ಕೂದಲಿನ ಆರೋಗ್ಯವನ್ನು ಹೆಚ್ಚಿಸಬಹುದು. ಕೂದಲಿನ ಆರೋಗ್ಯ ಹೆಚ್ಚಿಸಲು ಮೊಟ್ಟೆ, ನಟ್ಸ್, ಸೋಯಾಬೀನ್, ಪಾಲಕ್, ಸಿಹಿ ಆಲೂಗಡ್ಡೆ, ಕೊಬ್ಬಿರುವ ಮೀನುಗಳು ಮತ್ತು ವಿಟಮಿನ್ ಸಿ ಇರುವ ಆಹಾರವನ್ನು ಸೇವಿಸಬೇಕು.
ಮನೆಮದ್ದುಗಳನ್ನು ಬಳಸಿ
ಮನೆಮದ್ದುಗಳು ಲೂದಲಿನ ಬೆಳವಣಿಗೆಗೆ ಚೆನ್ನಾಗಿ ಕೆಲಸ ಮಾಡುತ್ತವೆ. ಮುಖ್ಯವಾಗಿ ನಿಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳು ಲೂದಲು ಉದುರುವುದು ಮತ್ತು ಕೂದಲು ಸನಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಅಲೋವೆರಾ, ಕರಿಬೇವಿನ ಎಲೆಗಳು,ಮೆಂತ್ಯ ಕಾಳು,ಈರುಳ್ಳಿ,ಮೊಟ್ಟೆ,ತೆಂಗಿನ ಎಣ್ಣೆ ಇಂತಹ ಕೆಲವು ಪದಾರ್ಥಗಳು ಕೂದಲಿನ ಆರೋಗ್ಯಕ್ಕೆ ಕಾರಣವಾಗುತ್ತವೆ.
ಹೇರ್ ಮಾಸ್ಕ್ ಬಳಸಿ
ಹೇರ್ ಮಾಸ್ಕ್ ಬಳಸುವುದರಿಂದ ಲೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಕೂದಲು ಉದುರುವುದನ್ನು ನಿಯಂತ್ರಿಸುತ್ತವೆ. ಕೊಬ್ಬರಿ ಎಣ್ಣೆ ಮತ್ತು ಆಲಿವ್ ಎಣ್ಣೆಯನ್ನು ಚೆನ್ನಾಗಿ ಬೆರೆಸಿ, ನಿಮ್ಮ ಕೂದಲಿನ ಮೂಲದಿಂದ ತುದಿವರೆಗೆ ನಿಧಾನವಾಗಿ ಹಚ್ಚಿ. ಒಂದು ಗಂಟೆ ಬಿಡಿ.ನಂತರ ಶಾಂಪೂ ಬಳಸಿ ತೊಳೆಯಿರಿ ಮತ್ತು ಕಂಡಿಷನರ್ ಬಳಸಿ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?