Uncategorized
ಸರ್ಕಾರದ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ – ಕೊರೊನಾ ವಿಚಾರದಲ್ಲಿ ಬಿಎಸ್ವೈ ಸೋತಿದ್ದಾರೆ ಎಂದ ಮಾಜಿ ಸಿಎಂ

ರೈಸಿಂಗ್ ಕನ್ನಡ :
ಬೆಂಗಳೂರು :
ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಕೋವಿಡ್-19 ದೇಶ ಹಾಗೂ ರಾಜ್ಯದಲ್ಲಿ ದಿನೇ ದಿನೇ ಆತಂಕ ಹೆಚ್ಚಿಸುತ್ತಲೇ ಇದೆ. ಆದ್ರೆ, ರಾಜ್ಯ ಸರ್ಕಾರ ಮಾತ್ರ ಕಳೆದ 5 ತಿಂಗಳಿಂದ ಕೇವಲ ಚರ್ಚೆ ಮಾಡುತ್ತಲೇ ಇದೆ ಎಂದಿದ್ದಾರೆ. ಲಾಕ್ಡೌನ್ಗೂ ಮೊದಲು ಭಾರತದಲ್ಲಿ ಸೋಂಕಿತರ ಸಂಖ್ಯೆ ಯುರೋಪ್ ಹಾಗೂ ಅಮೆರಿಕಾ ದೇಶಗಳಿಗಿಂತ ಕಡಿಮೆ ಇತ್ತು, ಭಾರತದಲ್ಲಿ ಸಿದ್ಧತೆ ಮಾಡಿಕೊಳ್ಳೋಕೆ ಸೂಕ್ತ ಸಮಯವೂ ಇತ್ತು. ವೆಂಟಿಲೇಟರ್, ಮಾಸ್ಕ್, ಸ್ಯಾನಿಟೈಸರ್ ಹಾಗೆ ಬೆಡ್ಗಳ ವಿಚಾರದಲ್ಲಿ ಆಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬಹುದಿತ್ತು. ಇವರುಗಳ ತಪ್ಪು ನಿರ್ಧಾರದಿಂದಾಗಿ ಇವತ್ತು ನಾವು ಜಗತ್ತಿನಲ್ಲಿ ನಾಲ್ಕನೇ ಸ್ಥಾನದಲ್ಲಿ ಇದ್ದೀವಿ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ದೇಶದಲ್ಲಿ ಸೋಂಕಿತರ ಸಂಖ್ಯೆ 6 ಲಕ್ಷ ದಾಟಿದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸರಿಯಾಗಿ ಕೆಲಸ ಮಾಡಿದ್ರೆ ಇವತ್ತು ಇಂತ ಪರಿಸ್ಥಿತಿ ಬರ್ತಾ ಇರಲಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ, ಈ ರೋಗ ಲಕ್ಷಣಗಳು ಕೆಲವರಿಗೆ ಕಾಣಿಸಿಕೊಂಡೇ ಇಲ್ಲ, ಶವ ಸಂಸ್ಕಾರ ಮಾಡೋಕು ಹಿಂದು ಮುಂದು ನೋಡ್ತಾ ಇದ್ದಾರೆ. ಸರ್ಕಾರದ ವತಿಯಿಂದಲೇ ಅಮಾನುಷವಾಗಿ ಮನುಕುಲಕ್ಕೆ ಅಗೌರವ ತೋರಲಾಗುತ್ತಿದೆ, ಇದು ಸರ್ಕಾರದ ಬೇಜವಾಬ್ದಾರಿ ಅಲ್ಲದೇ ಇನ್ನೇನು ಅಂತ ಪ್ರಶ್ನಿಸಿದ್ದಾರೆ.
ಇನ್ನೂ ಶವ ಸಂಸ್ಕಾರದ ಗೈಡ್ ಲೈನ್ ಬಗ್ಗೆ ಯಾಕೆ ತಿಳುವಳಿಕೆ ನೀಡುತ್ತಿಲ್ಲ, ಹೆಲ್ತ್ ಮಿನಿಸ್ಟರ್ ಜಿಲ್ಲೆಯಲ್ಲೇ ಆ ರೀತಿ ಆಗ್ತಾ ಇದೆ, ಆರು ಜನರನ್ನ ಸಸ್ಪೆಂಡ್ ಮಾಡಿದ್ರೆ ಅದು ಪರಿಹಾರನಾ ಅಂತ ಪ್ರಶ್ನಿಸಿದ್ದಾರೆ. ಸಿಎಂ ಯಡಿಯೂರಪ್ಪ ಕೈಯಲ್ಲಿ ಏನೂ ಆಗ್ತಾ ಇಲ್ಲ, ಸಚಿವರುಗಳ ನಡುವೆಯೇ ಮನಸ್ತಾಪವಿದೆ. ಅಶೋಕ್ ಹಾಗೂ ಸುಧಾಕರ್ ನಡುವೆ ಜಗಳಾ ನಡೆಯುತ್ತಿದೆ. ಸಚಿವ ಸುಧಾಕರ್ ಮೆಡಿಕಲ್ ಓದಿರೋದ್ರಿಂದ ಸ್ವಲ್ಪ ತಿಳುವಳಿಕೆ ಇರುತ್ತೆ, ಹೀಗಾಗಿ ಸುಧಾಕರ್ಗೆ ಸಂಪೂರ್ಣ ಇನ್ಚಾರ್ಜ್ ಕೊಡಬೇಕು ಎಂದಿದ್ದಾರೆ.
ಇನ್ನೂ ಕೊರೊನಾ ಸಂದರ್ಭದಲ್ಲಿ ಸರ್ಕಾರ ಜನರಿಗೆ ಸರಿಯಾಗಿ ಮಾಹಿತಿ ಕೊಡ್ತಿಲ್ಲ ಅಂತ ಸಿದ್ದರಾಮಯ್ಯ ಆರೋಪಿಸಿದ್ದಾರೆ. ವಿರೋಧ ಪಕ್ಷದವರಿಗೂ ಏನೂ ತಿಳಿಯುತ್ತಿಲ್ಲ, ಸರ್ಕಾರದಲ್ಲೇ ಸಮನ್ವಯತೆ ಇಲ್ಲ ಎಂದು ಟೀಕಿಸಿದ್ದಾರೆ. ಮಡಿವಾಳ. ನೇಕಾರ. ಟ್ಯಾಕ್ಸಿ ಡ್ರೈವರ್ಗಳಿ ಇನ್ನೂ ಒಂದು ರೂಪಾಯಿ ಕೂಡ ಕೊಟ್ಟಿಲ್ಲ, ಏಳೂವರೆ ಲಕ್ಷ ಜನಕ್ಕೆ ಕೊಡ್ತೀನಿ ಅಂತ ಹೇಳದ್ರು, ಲಾಕ್ ಡೌನ್ ಸಮಯದಲ್ಲೇ ಕೊಡಬೇಕಾಗಿತ್ತು, ಇನ್ನೂ ಕೊಟ್ಟಿಲ್ಲ ನಾವು ಎರಡುಮೂರು ಬಾರಿ ಭೇಟಿಯಾಗಿ ಸಿಎಂಗೆ ಹೇಳಿದ್ದೀವಿ ಆದ್ರೆ, ಒಂದು ಕೆಲಸವೂ ಆಗಿಲ್ಲ ಅಂತ ಟೀಕಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?