ರೈಸಿಂಗ್ ಕನ್ನಡ :
ಬೆಂಗಳೂರು :
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ತಮ್ಮ ರಾಜಕೀಯ ಬದುಕಿನಲ್ಲಿ ಆಡಿರೋ ಚದುರಂಗ ಅಷ್ಟಿಷ್ಟಲ್ಲ. ವಕೀಲ ವೃತ್ತಿಯಲ್ಲಿದ್ದುಕೊಂಡು ಬೇರುಮಟ್ಟದಿಂದ ಜನತಾ ಸೇವೆ ಆರಂಭಿಸಿದ ಸಿದ್ದರಾಮಯ್ಯನವರು, ಒಂದೊಂದೆ ಹಂತಕ್ಕೆ ಬೆಳೆದು ರಾಜ್ಯದ ಮುಖ್ಯಮಂತ್ರಿಯಾಗೋವರೆಗೂ ಸಾಗಿಬಂದ ಸಾಧನೆ ಅಷ್ಟಿಷ್ಟಲ್ಲ.
ಸದ್ಯ ಪ್ರತಿಪಕ್ಷದ ನಾಯಕನಾಗಿರೋ ಸಿದ್ದರಾಮಯ್ಯ, ಸದಾ ಆಡಳಿತ ಪಕ್ಷವನ್ನ ಎಚ್ಚರಿಸೋ ಕೆಲಸವನ್ನ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಕೊರೊನಾ ವೈದ್ಯಕೀಯ ವಸ್ತುಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡಿ ಬೃಹತ್ ಪ್ರತಿಭಟನೆಯನ್ನೇ ನಡೆಸಿದ್ರು.
ತಮ್ಮ ಬದುಕಿನುದ್ದಕ್ಕೂ ಸದಾ ಪ್ರತಿಭಟನೆ, ಪಾದಯಾತ್ರೆಯಲ್ಲಿ ತೊಡಗಿದ ಈ ಜನನಾಯಕ, ಸದ್ಯ ಕೊರೊನಾ ಸಂದರ್ಭದಲ್ಲಿ ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ತಮ್ಮ ಮೊಮ್ಮಗ, ಧವನ್ ರಾಕೇಶ್ ಜೊತೆ ಚೆಸ್ ಆಟವಾಡಿದ್ದಾರೆ. ರಾಜಕೀಯದ ಚದುರಂಗದಾಟದಲ್ಲಿ ಮಹಾನ್ ಚತುರನಾಗಿರೋ ಸಿದ್ದರಾಮಯ್ಯ, ಚೆಸ್ ಆಟದಲ್ಲೂ ಸಾಕಷ್ಟು ಪಳಗಿದ್ದಾರಂತೆ. ಮೊಮ್ಮಗನಿಗೆ ಚತುರ ನಡೆಗಳ ಕುರಿತು ಟಿಪ್ಸ್ ಕೂಡ ನೀಡಿದ್ದಾರಂತೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?