ಜ್ಯೋತಿಷ್ಯ
ಇಸ್ಕಾನ್ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಡಗರ- ಆನ್ಲೈನ್ನಲ್ಲೇ ಭಕ್ತರಿಗೆ ವಾಸುದೇವನ ದರ್ಶನ ಭಾಗ್ಯ

ರೈಸಿಂಗ್ ಕನ್ನಡ:
ಪ್ರಿಯಾಂಕ, ಬೆಂಗಳೂರು:
ಯಾವಾಗಲೂ ಭಕ್ತರಿಂದ ತುಂಬಿ ತುಳುಕಿತ್ತಿದ್ದ ಇಸ್ಕಾನ್ ದೇವಾಲಯದಲ್ಲಿ ಜನ್ಮಾಷ್ಟಮಿ ದಿನದಂದು ಬೆರಳೆಣಿಕೆಯಷ್ಟು ಭಕ್ತರು ಮತ್ತು ದೇವಾಲಯದ ಸಿಬ್ಬಂದಿ ಮಾತ್ರ ಉಪಸ್ಥಿತಿಯಿದ್ದರು.ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನಲೆಯಲ್ಲಿ ಹೂವಿನಿಂದ ಅಲಂಕೃತವಾದ ರಾಧಾಕೃಷ್ಣರ ಮೂರ್ತಿಯನ್ನು ತೆಪ್ಪದಲ್ಲಿ ಕೂರಿಸಿ ಕಲ್ಯಾಣಿಯ ಸುತ್ತಲೂ ಉತ್ಸವ ಮಾಡಲಾಯಿತು. ಬೆಂಗಳೂರಿನ ಕೃಷ್ಣ ದೇವಾಲಯ ಮತ್ತು ಮಠಗಳಲ್ಲಿ ಸಂಭ್ರಮ ಸಡಗರ ಮನೆ ಮಾಡಿತ್ತು.
ಬೆಂಗಳೂರಿನ ಇಸ್ಕಾನ್ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಕೊರೊನಾ ಹಿನ್ನೆಲೆ ಇಸ್ಕಾನ್ ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಆದ್ರೆ ಮಂಗಳವಾರ ಮತ್ತು ಬುಧವಾರ ಇಸ್ಕಾನ್ನಲ್ಲಿ ಕೃಷ್ಣಜನ್ಮಾಷ್ಟಮಿ ಪೂಜೆಯನ್ನು ಆನ್ಲೈನ್ನಲ್ಲಿ ವೀಕ್ಷಣೆ ಅವಕಾಶವಿದೆ. ಸ್ವಾಗತಂ ಕೃಷ್ಣ ಲೈವ್ ಎಂಬ ಶೀರ್ಷಿಕೆ ಯಡಿ ಇಸ್ಕಾನ್ ಸಾಮಾಜಿಕ ಜಾಲತಾಣ ಮೂಲಕ ಕಾರ್ಯಕ್ರಮ ಪ್ರಸಾರವಾಗಲಿದೆ. ಮನೆಯಲ್ಲಿ ಕುಳಿತುಕೊಂಡು ಭಕ್ತರು ದೀಪೋತ್ಸವ, ಅಭಿಷೇಕ,ಪಂಚಗವ್ಯ ವೀಕ್ಷಣೆ ಗೆ ಅವಕಾಶವಿದೆ. ಪ್ರತಿ ವರ್ಷ ಕೃಷ್ಣಜನ್ಮಾಷ್ಟಮಿ ದಿನದಂದು ಲಕ್ಷಾಂತರ ಜನ ಇಸ್ಕಾನ್ ಗೆ ಭೇಟಿ ನೀಡುತ್ತಿದ್ರು.
36 ವರ್ಷದಿಂದ ಅದ್ದೂರಿಯಾಗಿ ಶ್ರೀಕೃಷ್ಣ ಜನ್ಮದಿನವನ್ನಾ ಆಚರಣೆ ಮಾಡುತ್ತಿದ್ದೆವು. ಮೊದಲ ಬಾರಿಗೆ ಆನ್ ಲೈನ್ ನಲ್ಲಿ ಕೃಷ್ಣ ಜನ್ಮಾಷ್ಟಮಿ ಅಚರಣೆ ಮಾಡುತ್ತಿದ್ದೇವೆ. ಇಲ್ಲಿ ಜನ್ಮಾಷ್ಟಮಿ ಮಾಡುತ್ತಿದ್ದಾಗ ಬೆಂಗಳೂರಿನ ಭಕ್ತರು ಮಾತ್ರ ಪಾಲ್ಗೊಳ್ಳುತ್ತಿದ್ರು. ಈ ಬಾರಿ ದೇಶ ವಿದೇಶದ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು, ಚರ್ಚಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ.
- ನವೀನ ನೀರದ ದಾಸ, ಮುಖ್ಯ ಸಂಪರ್ಕಾಧಿಕಾರಿ, ಇಸ್ಕಾನ್
ಇಸ್ಕಾನ್ ನಲ್ಲಿ ಮಹಾಪೂಜೆ,ಅರ್ಘ್ಯ ಪ್ರಧಾನ, ತೆಪ್ಪೋತ್ಸವ ,ಕೃಷ್ಣನಿಗೆ ಅಭಿಷೇಕ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?