Featured
ಕನ್ನಡಿಗರ ಜನನ ಪ್ರಮಾಣ ಕುಸಿಯುತ್ತಿದೆ.. ಎಚ್ಚರ ಎಚ್ಚರ..! ಏನ್ ಮಾಡೋದು..?

ರೈಸಿಂಗ್ ಕನ್ನಡ : ಇದು ಕನ್ನಡಿಗರು ಆತಂಕ ಪಡಬೇಕಾದ ಸಂಗತಿ. ಒಂದೆಡೆ ಇಡೀ ದೇಶಾದ್ಯಂತ ಜನಸಂಖ್ಯಾ ಸ್ಫೋಟ, ಜನಸಂಖ್ಯೆ ಹೆಚ್ಚಾಗ್ತಿದೆ. ಎರಡೇ ಮಕ್ಕಳು ಸಾಕು. ಒಂದೇ ಮಗು ಸಾಕು ಅನ್ನೋ ಸಂದೇಶ ಜೋರಾಗಿಯೇ ನಡೀತಿದೆ. ಆದ್ರೆ, ಆತಂಕದ ವಿಚಾರ ಅಂದ್ರೆ, ಕರ್ನಾಟಕದಲ್ಲಿ ಕನ್ನಡಿಗರ ಜನನ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ.
ಯೆಸ್, ಕನ್ನಡ ಕುಲ ಮುಂದಿನ ದಿನಗಳಲ್ಲಿ ನಶಿಸುವ ಹಾದಿ ತಲುಪಿದ್ರೂ ಅಚ್ಚರಿಯಿಲ್ಲ. ಇದೆಲ್ಲವೂ ಸುಮ್ಮನೆ ಭಯ ಹುಟ್ಟಿಸೋ ಪ್ರಯತ್ನ ಎಂದುಕೊಳ್ಳಬೇಡಿ. ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಿಗರ ಸಂಖ್ಯೆ ಕ್ರಮೇಣ ಕಡಿಮೆಯಾಗಿ, ಉತ್ತರ ಭಾರತೀಯರ ತುಷ್ಟೀಕರಣ ಹಾಗೂ ಹಿಂದಿ ಭಾಷೆ ಹೇರಿಕೆ ಆಗೋದು ಗ್ಯಾರೆಂಟಿ.
ಸದ್ಯ ಭಾರತದಲ್ಲಿ ರಾಷ್ಟ್ರೀಯ ಫಲವಂತಿಕೆ ದರ : 2.2ರಷ್ಟಿದೆ. ಉತ್ತರ ಭಾರತದಲ್ಲಿ ಇದರ ಪ್ರಮಾಣ 3.2ರಷ್ಟಿದೆ. ಆದ್ರೆ, ಕರ್ನಾಟಕದಲ್ಲಿ ಫಲವಂತಿಕೆ ದರ ಕೇವಲ 1.7ರಷ್ಟಿದೆ. ಇದು ಕನ್ನಡಿಗರ ಜನನ ಪ್ರಮಾಣ ಕುಸಿದಿರುವ ಸಂಕೇತ. ಫಲವಂತಿಕೆ ಅಂದ್ರೆ, ಟೋಟಲ್ ಫರ್ಟಿಲಿಟಿ ರೇಟ್ ಎಂದು. ಟಿಎಫ್ಆರ್ ಎಂದು ಕರೆಯುತ್ತಾರೆ.
ಸಾಮಾನ್ಯವಾಗಿ ಯಾವುದೇ ದೇಶದ ಟಿಎಫ್ಆರ್ ದರ 2.1ರಷ್ಟು ಇರಬೇಕು. ಭಾರತದ್ದು ಸದ್ಯ 2.2ರಷ್ಟಿದೆ. ಹಾಗೆ ನೋಡಿದ್ರೆ, ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಮ್ಮ ದೇಶದ ಟಿಎಫ್ಆರ್ ದರ ಏರಿಕೆ ಆಗಿಲ್ಲ. ಆದ್ರೆ, ಉತ್ತರ ಭಾರತೀಯರ ಟಿಎಫ್ಆರ್ ದರ ಡಬಲ್ ಆಗಿದೆ. ಕೆಲವು ರಾಜ್ಯಗಳಲ್ಲಿ 3.4, 3.7ರಷ್ಟು ಟಿಆರ್ಎಫ್ ದರ ಏರಿಕೆ ಆಗಿದೆ. ಆದ್ರೆ, ಕರ್ನಾಟಕದ ಟಿಎಫ್ಆರ್ ದರ ಕೇಲವ 1.7ಕ್ಕೆ ಕುಸಿದಿದೆ. ಇದು ಮುಂದಿನ ದಿನಗಳಲ್ಲಿ 1.5ಕ್ಕೆ ಇಳಿಕೆಯಾಗೋ ಸಾಧ್ಯತೆ ಇದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದ್ರೆ, ಇಡೀ ದೇಶದಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗಿ, ಕನ್ನಡಿಗರು ಅಲ್ಪಸಂಖ್ಯಾತರಾಗೋ ಸಾಧ್ಯತೆ ಇದೆ.
ಈಗಾಗಲೇ ಕನ್ನಡಕ್ಕೆ ಕೇಂದ್ರ ಸರ್ಕಾರ ಮನ್ನಣೆ ನೀಡ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದ್ರೆ, ಅವರು ಹೇಳಿದೆಂತೆ ನಾವು ಕೇಳುವ ದಿನಗಳು ಬಹಳ ದೂರವಿಲ್ಲ. ಜನಸಂಖ್ಯೆ ನಿಯಂತ್ರಣ ಮಾಡಬೇಕಿರೋದು ಉತ್ತರ ಭಾರತದಲ್ಲಿ ಹೊರತು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಅಲ್ಲ. ಒಂದೇ ಮಗು ಸಾಕು ಎಂದು ಕೊಳ್ಳುವ ಕನ್ನಡಿಗರೇ, ಈ ಸುದ್ದಿ ನೋಡಿ, ಎಚ್ಚೆತ್ತುಕೊಳ್ಳಿ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?