ರೈಸಿಂಗ್ ಕನ್ನಡ :
ಆನೇಕಲ್ :
ಆನೇಕಲ್ನ ಜಿಗಣಿಯಲ್ಲಿ ಮಹಿಳೆಯೊಬ್ಬಳನ್ನ ದುಷ್ಕರ್ಮಿಗಳು ಮನಸೋ ಇಚ್ಛೆಯಂತೆ ಕೊಚ್ಚಿ ಕೊಲೆ ಮಾಡಿದ್ದ ಕೇಸ್ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಅರ್ಚನಾ ರೆಡ್ಡಿ ಹತ್ಯೆಗೆ ಮಗಳೇ ಸುಫಾರಿ ಕೊಟ್ಟಿದ್ದಾರಾ ಅನ್ನೋ ಸಂಶಯ ಇದೀಗ ಚರ್ಚೆ ಆಗ್ತಿದ್ದು, ಪೊಲೀಸರು ವಿಚಾರಣೆಯನ್ನ ನಡೆಸ್ತಿದ್ದಾರೆ.
ಸ್ಟೋರಿ ಏನಪ್ಪ ಅಂದ್ರೆ..?
ಅರ್ಚನಾ ರೆಡ್ಡಿ ಅನ್ನೋ ಮಹಿಳೆ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನಲ್ಲಿ ವಾಸವಾಗಿದ್ರು. ಅರ್ಚನಾ ಮೊದಲ ಗಂಡ ಅರವಿಂದ್ಗೆ ಡೈವರ್ಸ್ ಕೊಟ್ಟು ಸಿದ್ದಿಕ್ ಜೊತೆ ಸಂಸಾರ ನಡೆಸ್ತಿದ್ರು. ಆದ್ರೆ ಸಿದ್ದಿಕ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆಗ ಆತನಿಗೂ ಗುಡ್ಬೈ ಹೇಳಿ ನವೀನ್ ಎಂಬಾತನನ್ನ 3ನೇ ಮದುವೆಯಾಗಿದ್ರು. ನಾಲ್ಕೈದು ವರ್ಷ ನವೀನ್ ಜೊತೆಯಲ್ಲೇ ಇದ್ರು. ಆದ್ರೆ, ನವೀನ್ ಜೊತೆಯೂ ಆಸ್ತಿ ವಿಚಾರವಾಗಿ ಜಗಳ ಆಗುತ್ಲೇ ಇತ್ತು. ಅರ್ಚನಾ ರೆಡ್ಡಿ ಮೊದಲ ಗಂಡನಿಗೆ ಹುಟ್ಟಿದ ಮಗಳ ಮೇಲೂ ನವೀನ್ ಕಣ್ಣಾಕಿದ್ದಾನೆ ಎಂದು ಸಂಶಯ ಇತ್ತು.
ಹೀಗೆ ಒಂದು ದಿನ ಜಗಳ ತಾರಕಕ್ಕೇರಿ ನವೀನ್ನಿಂದ ಅರ್ಚನಾ ದೂರವಾಗಿದ್ರು. ಅಷ್ಟೇ ಅಲ್ಲ ನವೀನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ಇಷ್ಟೆಲ್ಲಾ ಆದ್ರೂ ಅರ್ಚನಾ ಪುತ್ರಿ, ನವೀನ್ ಜೊತೆಯಲ್ಲೇ ಇರ್ತೀನಿ ಅಂತ ಆತನ ಜೊತೆಯೇ ವಾಸವಾಗಿದ್ರಂತೆ. ಇತ್ತ ಅರ್ಚನಾ ಬೇರೊಬ್ಬ ರೌಡಿ ಜೊತೆ ಅಕ್ರಮ ಸಂಬಂಧ ಹೊಂದಿದ್ರು ಅನ್ನೋ ಆರೋಪನೂ ಇದೆ. ಇದರಿಂದ ದ್ವೇಷ ಸಾಧಿಸಿದ ನವೀನ್ ಮೊನ್ನೆ ನಡುರೋಡಲ್ಲಿ ಅರ್ಚನಾಳನ್ನ ಹತ್ಯೆಮಾಡಿದ್ದಾನೆ.
ಸದ್ಯ ನವೀನ್ ಹಾಗೂ ಮತ್ತವನ ಗ್ಯಾಂಗ್ನನ್ನ ಪೊಲೀಸ್ರ ಬಂಧಿಸಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?