ಶಿವಮೊಗ್ಗ : ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಹೇಗಿದೆ ಅನ್ನೋದಕ್ಕೆ ಇದು ಕಣ್ಮುಂದೆ ಇರೋ ಸಾಕ್ಷಿ. ಅದರಂತೆ ರೈತರ ಬದುಕು ಎಷ್ಟು ದುಸ್ಥರ, ಶೋಚನೀಯವಾಗಿದೆ ಅನ್ನೋದಕ್ಕೂ ಇದುವೇ ಸಾಕ್ಷಿ.
ಭಾರತದಲ್ಲಿ ಸಾವಿರಾರು ಕೋಟಿ, ಲಕ್ಷಾಂತರ ಕೋಟಿ ಸಾಲ ಮಾಡಿ ಕಟ್ಟದೆ, ಲೂಟಿ ಮಾಡ್ಕೊಂಡು ಐಶಾರಾಮಿ ಜೀವನ ನಡೆಸ್ತಿರೋ ಉದ್ಯಮಿಗಳು, ರಾಜಕಾರಣಿಗಳು ಇದ್ದಾರೆ. ಅವರೆಲ್ಲಾ ದಿಲ್ ದಾರಾಗಿಯೇ ಓಡಾಡಿಕೊಂಡು, ವಿದೇಶದಲ್ಲಿ ಟೂರ್ ಮಾಡ್ಕೊಂಡಿದ್ದಾರೆ. ಆದ್ರೆ, ರೈತರ ಸ್ಥಿತಿ ಹೇಗಿದೆ ನೋಡಿ.
ನೀವು ಸಾಲ ಬಾಕಿ ಉಳಿಸಿಕೊಂಡಿದ್ದೀರಿ, ತಕ್ಷಣ ಬ್ಯಾಂಕಿಗೆ ಬನ್ನಿ ಅಂತ ಬ್ಯಾಕಿನಿಂದ ರೈತನಿಗೆ ಫೋನ್ ಹೋಗುತ್ತೆ. ತಕ್ಷಣ ಗಾಬರಿಗೊಂಡ ರೈತ, ತಾನಿದ್ದ ಸ್ಥಳದಿಂದ ಹೊರಟು ಬರ್ತಾನೆ. ತನ್ನ ಬಳಿ ಬೈಕ್ ಇಲ್ಲ, ಸೈಕಲ್ ಇಲ್ಲ.. ಬಸ್ಸು, ಆಟೋನೂ ಇಲ್ಲ. ಸೋ, ಬರೋಬ್ಬರಿ 15 ಕಿ.ಮೀ. ನಡೆದುಕೊಂಡು ಬರ್ತಾನೆ. ಬ್ಯಾಂಕ್ಗೆ ಬಂದು ಎಷ್ಟು ಸಾಲ ಅಂತ ವಿಚಾರಿಸಿದ್ರೆ ಗೊತ್ತಾಗುತ್ತೆ. ಕೇವಲ 3 ರೂಪಾಯಿ 46 ಪೈಸೆ ಬಾಕಿ ಇದೆ ಎಂದು.
ಈ ಘಟನೆ ವರದಿಯಾಗಿರೋದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಿಟ್ಟೂರು ಎಂಬಲ್ಲಿ. ನಿಟ್ಟೂರಿನ ಕೆನರಾ ಬ್ಯಾಂಕ್ ಈ ರೀತಿಯ ಯಡವಟ್ಟು ಮಾಡಿದೆ. ನಿಟ್ಟೂರು ಸಮೀಪದ ಅಮಡೆ ಗ್ರಾಮದ ರೈತ ಲಕ್ಷ್ಮೀನಾರಾಯಣ, ಕೆನರಾ ಬ್ಯಾಂಕ್ನಲ್ಲಿ 25 ಸಾವಿರ ಸಾಲ ಪಡೆದಿದ್ರು. ಕೆಲವು ದಿನಗಳ ಹಿಂದ 32 ಸಾವಿರ ಸಾಲ ಮನ್ನ ಆಗಿತ್ತು. ಉಳಿದ 3 ಸಾವಿರ ಕೆಲವು ದಿನಗಳ ಹಿಂದೆಯೇ ಕಟ್ಟಿದ್ರು. ಆದ್ರೆ, ಶುಕ್ರವಾರ ದಿಢೀರ್ ಅಂತ ಬ್ಯಾಂಕ್ನಿಂದ ಫೋನ್ ಬರ್ತಿದ್ದಂತೆ ಗಾಬರಿಯಾಗಿದ್ರು ರೈತ.
ಇದೇನಿದು ಕೇವಲ 3 ರೂಪಾಯಿ 46 ಪೈಸೆಗೆ ಇಷ್ಟೊಂದು ಗಾಬರಿ ಮಾಡಿ, 15 ಕಿಲೋ ಮೀಟರ್ ನಡೆಸಿದ್ರೀ ಅಂತ ಬ್ಯಾಂಕ್ನವರಿಗೆ ಕೇಳಿದ್ರೆ, ಅವರದ್ದೇ ಬೇರೆ ಸಮಜಾಯಿಸಿ. ಬ್ಯಾಂಕ್ನಲ್ಲಿ ಆಡಿಟ್ ನಡೀತಿದೆ. ಹೀಗಾಗಿ ಲಕ್ಷ್ಮೀನಾರಾಯಣ ಅವರ ಸಾಲ ರಿನಿವಲ್ ಮಾಡಲು ತುರ್ತಾಗಿ ಸಹಿಯ ಅಗತ್ಯವಿತ್ತು. ಬ್ಯಾಂಕ್ ನಿಯಮದಂತೆ ಬಾಕಿ ಇರೋ 3.46 ರೂ ಕಟ್ಟಿಸಿಕೊಂಡು ಸಹಿ ಪಡೆಸಿದ್ದೇವೆ ಅಂತ ಕೆನರಾ ಬ್ಯಾಂಕ್ ನಿಟ್ಟೂರು ಶಾಖೆ ಮ್ಯಾನೇಜರ್ ಎಲ್. ಪಿಂಗ್ವಾ ಹೇಳಿದ್ದಾರೆ.
ಇನ್ನು, ರೈತ ಲಕ್ಷ್ಮೀನಾರಾಯಣ ಅವರನ್ನ ಮಾತನಾಡಿಸಿದ್ರೆ, ಬ್ಯಾಂಕ್ ನಿಂದ ಫೋನ್ ಬಂದಾಗ ಗಾಬರಿಯಾಯ್ತು. ಆದ್ರೆ, ಕೇವಲ 3.46 ರೂಪಾಯಿ ಬಾಕಿ ಇದೆ, ಅದನ್ನು ಕಟ್ಟಿ ಎಂಬ ಸಿಬ್ಬಂದಿಯ ಮಾತು ಕೇಳಿ ಆಶ್ಚರ್ಯವಾಯಿತು ಎಂದಿದ್ದಾರೆ. ಕೇವಲ 3.46 ರೂಪಾಯಿಗೆ 15 ಕಿಲೋ ಮೀಟರ್ ನಡೆಯುವಂತೆ ಮಾಡಿದ ಬ್ಯಾಂಕಿನವರ ವರ್ತನೆ ನೋವು ತಂದಿದೆ ಅಂತ ರೈತ ಲಕ್ಷ್ಮೀನಾರಾಯಣ ಬೇಸರ ಹೊರಹಾಕಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?