ರಾಜ್ಯ
ನಾರಾಯಣಮೂರ್ತಿ ಮೊಮ್ಮಗನಿಗೆ 243 ಕೋಟಿ ಮೌಲ್ಯದ ಷೇರು! 4 ತಿಂಗಳ ಮಗು ಮಿಲಿಯನೇರ್!

Infosys : ಮೊಮ್ಮಗನನ್ನು ಷೇರು ಪಾಲುದಾರ ಮಾಡಿಕೊಂಡ ನಂತರ ನಾರಾಯಣಮೂರ್ತಿಯವರ ಪಾಲು ಶೇ.0.36 ಆಗಿದೆ. ಕಳೆದ ನವೆಂಬರ್ ನಲ್ಲಿ ನಾರಾಯಣ ಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಹಾಗೂ ಅಪರ್ಣಾ ಕೃಷ್ಣನ್ ಗಂಡು ಮಗುವಿನ ಪೋಷಕರಾದರು. ಏಕಾಗ್ರಹ ಆಗಮನದಿಂದ ತಾತ-ಅಜ್ಜಿಯಾದ ನಾರಾಯಣಮೂರ್ತಿ ಹಾಗೂ ಅವರ ಪತ್ನಿ, ಸಮಾಜಸೇವಕಿ ಸುಧಾಮೂರ್ತಿ ಅವರು ಸಂತೋಷದಿಂದ ಮೊಮ್ಮಗನನ್ನು ಬರಮಾಡಿಕೊಂಡರು.
ಈಗಾಗಲೇ ಇಬ್ಬರು ಮೊಮ್ಮಕ್ಕಳಿದ್ದು, ಏಕಾಗ್ರಹ ಇವರಿಗೆ ಮೂರನೇ ಮೊಮ್ಮಗು. ಮೊದಲ ಎರಡು ಹೆಣ್ಣು ಮೊಮ್ಮಕ್ಕಳು ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ನಾರಾಯಣಮೂರ್ತಿ ಅವರ ಮಕ್ಕಳು.
ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಕುಟುಂಬದವರು ಮೊಮ್ಮಗನಿಗೆ ಏಕಾಗ್ರಹ ಎಂಬ ಹೆಸರು ಇಟ್ಟಿದ್ದಾರೆ. ಸಂಸ್ಕೃತದಲ್ಲಿ ಏಕಾಗ್ರಹ ಎಂದರೆ ಅಚಲವಾದ ಗಮನ ಮತ್ತು ನಿರ್ಣಯ ಎಂದರ್ಥ. ಮಹಾಭಾರತದಲ್ಲಿ ಅರ್ಜುನನ ಏಕಾಗ್ರಹತೆಯ ಸ್ಫೂರ್ತಿಯಿಂದ ಮೊಮ್ಮಗನಿಗೆ ಈ ಹೆಸರನ್ನಿಟ್ಟಿದ್ದಾರೆ.
ಇನ್ಫೋಸಿಸ್ ಕಂಪನಿ ಭಾರತದಲ್ಲಿ ಅತ್ಯಂತ ಪ್ರಸಿದ್ಧ ಪಡೆದ ಕಂಪನಿಗಳಲ್ಲಿ ಒಂದು. 1981ರಲ್ಲಿ $250 ನೊಂದಿಗೆ ಇನ್ಫೋಸಿಸ್ ಕಂಪನಿ ಪ್ರಾರಂಭವಾಯಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅತಿದೊಡ್ಡ ಕಂಪನಿಯಾಗಿ ಇನ್ಫೋಸಿಸ್ ಹೊರಹೊಮ್ಮಿತು. ಇದರಲ್ಲಿ ಡಾ.ಸುಧಾಮೂರ್ತಿ ಅವರ ಪಾತ್ರ ಪ್ರಮುಖವಾಗಿತ್ತು.
25 ವರ್ಷಗಳಿಗೂ ಹೆಚ್ಚು ಕಾಲ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರಾಗಿ ಸುಧಾಮೂರ್ತಿ ಅವರು ಕಾರ್ಯ ನಿರ್ವಹಿಸಿದರು. ಡಿಸೆಂಬರ್ 2021 ರಲ್ಲಿ ನಿವೃತ್ತಿ ಪಡೆದು, ಅವರ ಕುಟುಂಬದ ಪ್ರತಿಷ್ಠಾನದ ಮೂಲಕ ದತ್ತಿ ಕೆಲಸ ಮಾಡುವುದನ್ನು ಮುಂದುವರೆಸಿದರು. ಸಮಾಜಸೇವೆಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಸುಧಾಮೂರ್ತಿಯವರು ಇತ್ತೀಚೆಗಷ್ಟೇ ಮೇಲ್ಮನೆ ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?