ರೈಸಿಂಗ್ ಕನ್ನಡ ಹೆಲ್ತ್ ಟಿಪ್ಸ್ : ಶೃಂಗಾರ ಅನ್ನೋದು ಒಂದು ಕಲೆ. ಫೋರ್ ಪ್ಲೇ ನಿಂದ ಹಿಡಿದು ಸಂಭೋಗದವರೆಗೂ ಪ್ರತಿ ಕ್ಷಣವೂ ಖುಷಿಯಾಗಿ, ಸಂತೋಷವಾಗಿ ಅಸ್ವಾಧಿಸಬೇಕು. ಅದು ನೀಡುವ ಅನುಭವ ಅತ್ಯಂತ ಮಧುರವಾಗಿರುತ್ತೆ. ಈ ಸೃಷ್ಟಿ ಕ್ರಿಯೆಗೆ, ಸ್ತ್ರೀ, ಪುರುಷರ ನಡುವಿನ ಸಂಬಂಧವನ್ನ ಸಾವಿರ ಪಟ್ಟು ಹೆಚ್ಚು ಮಾಡುವ ಶಕ್ತಿ ಇದೆ. ವಾತ್ಸಾಯನ, ಕಾಮಸೂತ್ರ ಹೆಸರಲ್ಲಿ ಒಂದು ಪುಸ್ತಕವನ್ನೇ ಬರೆದಿದ್ದಾರೆ ಅಂದ್ರೆ, ನೀವೇ ಊಹಿಸಿಕೊಳ್ಳಿ. ಈ ಪುಸ್ತಕದಲ್ಲಿ 1250 ಪದ್ಯ, 36 ವಿಭಾಗ, 7 ಭಾಗಗಳಿವೆ. ಕಾಮ ಯಾವ ರೀತಿ, ಹೇಗಿರುತ್ತೆ..? ಯಾವ ಪದ್ಧತಿಯಲ್ಲಿರುತ್ತೆ..? ಯಾವ ರೂಪದಲ್ಲಿ ಇರುತ್ತೆ ಅನ್ನೋದು ಈ ಪುಸ್ತಕದಲ್ಲಿದೆ.
ಸಂಭೋಗ ಒಂದೇ ಸೆಕ್ಸ್ ಅನ್ಕೊಂಡಿದ್ರೆ, ಅದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ. ಹೀಗಾಗಿಯೇ, ಪ್ರಣಯ ಕೋಣೆ ಪ್ರವೇಶಕ್ಕೂ ಮುನ್ನ, ಸೆಕ್ಸ್ ಕುರಿತು ಕೊಂಚ ಜ್ಞಾನವಾದರೂ ತಿಳಿದುಕೊಂಡಿರಬೇಕು. ಅದರಲ್ಲೂ ಪ್ರಮುಖವಾಗಿ, ಮೊದಲ ಸಲ ಮಿಲನದಲ್ಲಿ ಭಾಗಿಯಾಗುವವರು ಸಾಕಷ್ಟು ತಪ್ಪುಗಳನ್ನ ಮಾಡ್ತಾರೆ. ನಾವು ಬೆಳೆದ ಪರಿಸರ, ಸಂಸ್ಕೃತಿಯಿಂದಾಗಿ ಶೃಂಗಾರದ ಕುರಿತು ಪರಿಜ್ಞಾನ ಇಲ್ಲದೇ ಇರಬಹುದು. ಹೀಗಾಗಿ, ತಪ್ಪುಗಳು ಆಗೋದು ಸಹಜ. ಹೀಗಾಗಿಯೇ, ಮೊದಲ ಸಲ ಸೆಕ್ಸ್ ಮಾಡುವವರು ಕೆಲವು ವಿಚಾರಗಳನ್ನ ಗಮನದಲ್ಲಿ ಇಟ್ಟುಕೊಂಡಿರಬೇಕು ಎಂದು ತಜ್ಞರು ಸೂಚಿಸಿದ್ದಾರೆ.
ಈ ಎಲ್ಲಾ ಅಂಶಗಳ ಬಗ್ಗೆ ಸ್ಪಷ್ಟತೆ ಇಲ್ಲದೇ ಹೋದ್ರೆ, ಕೆಲ ಸಮಯ ತೆಗೆದುಕೊಂಡು ಆತ್ಮಶೋಧನೆ ಮಾಡಿಕೊಳ್ಳಬೇಕು. ಯಾವ ಪ್ರಕ್ರಿಯೆ ಪ್ರೇರಿಪಿಸುತ್ತೆ..? ಯಾವುದು ಸಂತೋಷ ನೀಡುತ್ತೆ..? ಅನ್ನೋದನ್ನ ತಿಳಿದುಕೊಳ್ಳಬೇಕು. ದೇಹದ ಯಾವ ಭಾಗ ಮುಟ್ಟಿದ್ರೆ, ಚೆನ್ನಾಗಿ ಅನ್ಸುತ್ತೆ ಅನ್ನೋದನ್ನೂ ತಿಳಿದುಕೊಳ್ಳಬೇಕು.
ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪಾರ್ಟನರ್. ನಮ್ಮ ಪತ್ನಿ/ಪತಿ ಜೊತೆ ಸೇಫಾಗಿ, ಸೌಕರ್ಯವಾಗಿ ಇರಬೇಕು. ಸೌಕರ್ಯವಾಗಿ ಇದ್ರೆ ಶೃಂಗಾರ ಚೆನ್ನಾಗಿರುತ್ತೆ. ಎಂಜಾಯ್ ಮಾಡ್ತೀರ. ಆದ್ರೆ, ಸೇಫ್ಟಿ, ಕಂಫರ್ಟ್ ಇಲ್ಲದೇ ಹೋದ್ರೆ, ಶೃಂಗಾರ ಚೆನ್ನಾಗಿರಲ್ಲ. ಗಮನಿಸಬೇಕಾದ ವಿಷಯ ಏನಂದ್ರೆ, ಆತೂರಕ್ಕೆ ಬಿದ್ದು ಏನೂ ಮಾಡಬಾರದು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?