ರೈಸಿಂಗ್ ಕನ್ನಡ :
ಚಿಕ್ಕೋಡಿ:
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಗುರುವಾರ ಬೆಳಗಾವಿಗೆ ಅಥಣಿಯ ರಾಯಣ್ಣನ ಅಭಿಮಾನಿಗಳು ತೆರಳುತ್ತಿರುವಾಗ ಚಿಕ್ಕೋಡಿ ಪೊಲೀಸರು ತಡೆದ ಹಿನ್ನೆಲೆ ಪೊಲೀಸ್ ಹಾಗೂ ರಾಯಣ್ಣನ ಅಭಿಮಾನಿಗಳ ಮದ್ಯೆ ವಾಗ್ವಾದವಾದ ಘಟನೆ ನಡೆಯಿತು.
ಬೆಳಗಾವಿಯ ಪೀರಣವಾಡಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ತೆರವುಗೊಳಿಸಿದ ಹಿನ್ನೆಲೆ ಇಂದು ಬೆಳಗಾವಿ ಎಲ್ಲ ಸಂಘಟನೆಗಳು ಸಭೆ ಏರ್ಪಡಿಸಿ ರಾಯಣ್ಣನ ಮೂರ್ತಿ ಮರು ಪ್ರತಿಷ್ಠಾಪಿಸಲು ಸಭೆ ಹಮ್ಮಿಕೊಳ್ಳಲಾಗಿತ್ತು.
ಆ ಸಭೆಗೆ ಬೆಳಗಾವಿ ಜಿಲ್ಲೆಯ ಅಥಣಿಯ ರಾಯಣ್ಣನ ಅಭಿಮಾನಿಗಳು ಭಾಗವಹಿಸಲು ಹೊರಡುತ್ತಿರುವಾಗ ಚಿಕ್ಕೋಡಿ ಪಿಎಸ್ ಐ ಅವರ ತಂಡ ತಡೆದು ಅವರನ್ನು ಬೆಳಗಾವಿಗೆ ಹೋಗದಿರಲು ಮನವಿ ಮಾಡಿದ್ದಾರೆ.
ನಾವು ಶಾಂತಿಯುತ ಸಭೆ ಮಾಡುವುದಕ್ಕೆ ಹೊರಟ್ಟಿದ್ದೇವೆ. ಯಾವುದೇ ಗಲಾಟೆ ಅಲ್ಲ ಎಂದು ರಾಯಣ್ಣನ ಅಭಿಮಾನಿಗಳು ಸಹಿತ ಮನವಿ ಮಾಡಿದರೂ ಪಿಎಸ್ ಐ ಅವರು ಕೇಳದೆ ಡಿವೈ ಎಸ್ಪಿ ಬರುತ್ತಿದ್ದು ವೇಟ್ ಮಾಡಿ ಎಂದಿದ್ದಾರೆ.
ಈ ಸಂದರ್ಭದಲ್ಲಿ ಕೆಲ ಹೊತ್ತು ಪಿಎಸ್ ಐ ಹಾಗೂ ರಾಯಣ್ಣನ ಅಭಿಮಾನಿಗಳ ನಡುವೆ ವಾಗ್ವಾದವೇ ಸೃಷ್ಠಿಯಾಯಿತು. ಇದರಿಂದ ರಾಯಣ್ಣನ ಅಭಿಮಾನಿಗಳು ಕೆಂಡಾಮಂಡಲವಾದರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?