ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ರಾಜಸ್ಥಾನ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಟ್ವಿಸ್ಟ್ಗಳು ಹೆಚ್ಚಾಗುತ್ತಿದೆ. ಇತ್ತ ಸಚಿನ್ ಪೈಲಟ್ ಮತ್ತು ಬೆಂಬಲಿಗರು ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಬೀಳಿಸಬೇಕು ಅಂತ ಪಣತೊಟ್ಟಿದ್ದಾರೆ. ಹೊಟೇಲ್ನಿಂದ ಹೊಟೇಲ್ಗೆ ಶಿಫ್ಟ್ ಆಗುತ್ತಿರುವ ಪೈಲಟ್ ಗುಂಪು ಬೆಂಗಳೂರಿಗೆ ಬರ್ತಿದೆ ಅನ್ನುವ ಸುದ್ದಿ ಹರಡಿತ್ತು. ಆದ್ರೆ ಈಗ ಕರ್ನಾಟಕ ಅಥವಾ ಬೆಂಗಳೂರಿಗೆ ಬರ್ತಿರುವ ಸುದ್ದಿಯನ್ನು ಪೈಲಟ್ ಬಣ ತಳ್ಳಿಹಾಕಿದೆ. ಆದ್ರೆ ಎಲ್ಲಿ ಇದ್ದೀವಿ ಅಥವಾ ಎಲ್ಲಿಗೆ ಹೋಗ್ತೀವಿ ಅನ್ನೋದನ್ನ ಪೈಲಟ್ ಬಣ ಹೇಳದೆ ಸಸ್ಪೆನ್ಸ್ ಕಾಪಾಡುತ್ತಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಹೈಕಮಾಂಡ್ ವಿರುದ್ಧ ಸಚಿನ್ ಪೈಲಟ್ ಬಣ ಸಿಡಿದೆದ್ದಿದೆ. ಸಚಿನ್ ಪೈಲಟ್ ಸೇರಿದಂತೆ ಬೆಂಬಲಿಗ 18 ಶಾಸಕರು ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ವಾಸ್ತವ್ಯ ಹೂಡಿಕೆ ಎಂದು ಹೇಳಲಾಗುತ್ತಿದೆ. ಆದರೆ ಸದ್ಯ ತಾವಿರುವ ಜಾಗದ ಕುರಿತು ಯಾವುದೇ ಮಾಹಿತಿ ನೀಡಿಲ್ಲ.
ಈ ನಡುವೆ ರಾಜಸ್ಥಾನ ವಿಧಾನಸಭಾ ಅಧ್ಯಕ್ಷ ಸಿ.ಪಿ.ಜೋಷಿ, ಪೈಲಟ್ ಮತ್ತು ಬಣಕ್ಕೆ ಅನರ್ಹತೆ ನೋಟಿಸ್ ನೀಡಿದ್ದಾರೆ. ಈ ಕುರಿತು ರಾಜಸ್ಥಾನ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಅರ್ಜಿ ಕುರಿತ ವಿಚಾರಣೆ ಸೋಮವಾರ ಮತ್ತೆ ಆರಂಭವಾಗಲಿದೆ. ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಇವರು ಮೊದಲು ಹರಿಯಾಣದ ಮನಸೇರ್ನ ಹೊಟೇಲ್ ಒಂದರಲ್ಲಿ ತಂಗಿತ್ತು. ಅಲ್ಲಿಗೆ ರಾಜಸ್ಥಾನ ಪೊಲೀಸರು ಭೇಟಿ ಕೊಟ್ಟ ಕಾರಣದಿಂದ ಆ ಹೊಟೇಲ್ ಅನ್ನು ಪೈಲಟ್ ಬಣ ತ್ಯಜಿಸಿತ್ತು.
ಈ ನಡುವೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ಗೆ ಪ್ರಾದೇಶಿಕ ಪಕ್ಷ BTP ತನ್ನ ಎರಡು ಶಾಸಕರ ಬೆಂಬಲವನ್ನು ನೀಡಿದೆ. ರಾಜ್ಯಪಾಲರಿಗೆ ಸಿಎಂ ಗೆಹ್ಲೋಟ್ ಈ ಬೆಂಬಲ ಪತ್ರವನ್ನು ಹಸ್ತಾಂತರಿಸುವ ಸಾಧ್ಯತೆ ಇದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?