Featured
ದಸರಾದಲ್ಲಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಲವ್ ಪ್ರಪೋಸ್ ಸರಿನಾ..? ತಪ್ಪಾ..? : ನಿಮ್ಮ ಅಭಿಪ್ರಾಯವೇನು..?

ಮೈಸೂರು : ರ್ಯಾಪರ್ ಚಂದನ್ ಶೆಟ್ಟಿ ಹಾಗೂ ಬಿಗ್ಬಾಸ್ ನಿವೇದಿತಾ ಗೌಡ ಸದ್ಯ ರಾಜ್ಯದ ಟ್ರೆಂಡಿಂಗ್ ನ್ಯೂಸ್ ಅಂದ್ರೆ ತಪ್ಪಲ್ಲ. ಇಡೀ ರಾಜ್ಯ ಒಂದಡೆ ಪ್ರವಾಹ, ಮತ್ತೊಂದೆಡೆ ಬರದಿಂದ ತತ್ತರಿಸಿದ್ರೂ, ಒಂದೇ ದಿನದಲ್ಲಿ ಅದೆಲ್ಲಾ ಮರೆತ ಜನ, ಇದೀಗ ಚಂದನ್ ಹಾಗೂ ನಿವೇದಿತಾ ಲವ್ ಬಗ್ಗೆ ಮಾತಾಡ್ತಿದ್ದಾರೆ. ಇಷ್ಟಕ್ಕೂ ಅವರಿಬ್ಬರು ಮಾಡಿದ್ದು ಅಷ್ಟೊಂದು ದೊಡ್ಡ ತಪ್ಪಾ..? ಸರಿನಾ..?
ಇಷ್ಟಕ್ಕೂ ಯುವ ದಸರಾದಲ್ಲಿ ಆಗಿದ್ದೇನು..?
ಸುಮಾರು ಎರಡು ಗಂಟೆಗಳ ಕಾಲ ದಸರಾದಲ್ಲಿ ನೆರೆದಿದ್ದ ಪ್ರೇಕ್ಷಕರನ್ನ, ಪ್ರವಾಸಿಗರನ್ನ ರಂಜಿಸಿದ್ದು ಚಂದನ್ ಶೆಟ್ಟಿ. ಅದೇ ವೇದಿಕೆಯಲ್ಲಿ ಯುವ ಮನಸ್ಸುಗಳ ಹೃದಯ ಕದ್ದ ಚಂದನ್ ಶೆಟ್ಟಿ, ಎಣ್ಣೆ, ಪಾರ್ಟಿ, ಗುಂಡು,ತುಂಡು, ಹುಡುಗಿ, ಚಡ್ಡಿ,ಬಡ್ಡಿ.. ಹೀಗೆ ಎಲ್ಲವನ್ನೂ ಹಾಡಿ, ಕುಣಿದು ಕುಪ್ಪಳಿಸಿದ್ರು.. ಕೊನೆಯಲ್ಲಿ ಬಹು ಕಾಲದ ಗೆಳತಿ ನಿವೇದಿತಾ ಗೌಡ ಅವರಿಗೆ ಸಿನಿಮ್ಯಾಟಿಕ್ ಆಗಿ ಲವ್ ಪ್ರಪೋಸ್ ಮಾಡಿಯೇ ಬಿಟ್ರು.. ಆ ಕ್ಷಣಕ್ಕೆ ಎಲ್ಲರೂ, ವಾವ್ಹ್ ಎಷ್ಟೊಂದು ಅದ್ಭುತ ಗುರು.. ಸೂಪರ್.. ಲವ್ ಪ್ರಪೋಸ್ ಅಂದ್ರೆ ಹೀಗಿರಬೇಕು ಅನ್ಕೊಂಡು ಚಪ್ಪಾಳೆ ತಟ್ಟಿದವರೇ ಹೆಚ್ಚು.. Bigg Boss Winner Chandan Shetty Proposes To Niveditha Gowda and She Accepts on Mysore Dasara Stage … (part1)#Chitraloka #NiveditaGowda #ChandanShetty #PopSinger #MarriageProposal #MysoreDasara pic.twitter.com/AxqrtOiq36— Chitraloka.com (@chitraloka) October 5, 2019
ರಾತ್ರಿ ಇಷ್ಟೆಲ್ಲಾ ಆದ್ಮೇಲೆ ಬೆಳಗೆ ಆಗೋದ್ರಲ್ಲಿ ಇದು ವಿವಾದವಾಗಿ ಹೋಗಿತ್ತು. ನೆಟ್ಟಿಗರು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿರುದ್ಧ ಆರೋಪಗಳ ಸುರಿಮಳೆಗೈದ್ರು. ಸಾಂಸ್ಕೃತಿಕ ಉತ್ಸವದಲ್ಲಿ ಇದೆಂತಾ ಅಸಹ್ಯ.. ಅಪರಾಧ.. ಅಕ್ಷಮ್ಯ ಅನ್ನೋ ಮಾತುಗಳು ಬಂದ್ವು. ಅದರಲ್ಲೂ ಮೈಸೂರು ಉಸ್ತುವಾರಿ, ದಸರಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಒಂದು ಹೆಜ್ಜೆ ಮುಂದೆ ಹೋದ್ರು. ತಾಯಿ ಚಾಮುಂಡಿ ಇಬ್ಬರಿಗೂ ಶಿಕ್ಷೆ ಕೊಡ್ತಾಳೆ ಅಂತ ಶಾಪವನ್ನೂ ಕೊಟ್ರು. ಮಾಧ್ಯಮಗಳು ಕೂಡ ಪರ ವಿರೋಧದ ವಾದ ಮಂಡಿಸಿದ್ವು.
ನೆಟ್ಟಿಗರು ಕೂಡ ಪರ-ವಿರೋಧದ
ಮಾತ್ನಾಡಿದ್ರು. ವಿಧಾನಸೌಧದಲ್ಲಿ ಅಶ್ಲೀಲ ದೃಶ್ಯ ನೋಡಿದವ್ರು ಇವತ್ತು ಡಿಸಿಎಂ, ಮಿನಿಸ್ಟರ್, ಶಾಸಕರಾದ್ದಾರೆ.
ಲವ್ ಪ್ರಪೋಸ್ ಮಾಡಿದ್ರೆ ತಪ್ಪೇನು ಅನ್ನೋ ಮಾತು ಕೇಳಿ ಬಂತು. ಸ್ವತಃ ಸಂಸದ ಪ್ರತಾಪ್ ಸಿಂಹ ಕೂಡ
ಇದನ್ನ ಬಿಟ್ಟುಬಿಡಿ ಸಾಕು ಇಲ್ಲಿಗೆ ಅಂದ್ರು. ಇತ್ತ ಸಾಮಾಜಿಕ ಹೋರಾಟಗಾರ ಹಾಗೂ ನಟ ಅರ್ಜುನ್ ಸರ್ಜಾ
ಆಪ್ತ ಪ್ರಶಾಂತ್ ಸಂಬರಗಿ ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ದೂರು ಕೂಡ ನೀಡಿದ್ರು.
ಇದೆಲ್ಲಾ ನೋಡ್ತಿದ್ರೆ, ಬಹುಶಃ ರಾಜ್ಯದ ಜನ ಪ್ರವಾಹ, ಬರಕ್ಕಿಂತಲೂ ಈ ರೀತಿಯ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡ್ತಾರೇನೋ ಅನ್ನೋ ಗೊಂದಲ ಶುರುವಾಗಿದ್ದು ಸುಳ್ಳಲ್ಲ. ಸಣ್ಣ ವಿಚಾರವನ್ನ ವಿವಾದ ಮಾಡಿ, ದೊಡ್ಡದ್ದು ಮಾಡುವ ಅಗತ್ಯವೂ ಇರಲಿಲ್ಲ. ಇದು ಕೇವಲ ಮಾಧ್ಯಮಗಳು ಮಾಡಿದ ವಿವಾದವಲ್ಲ. ಸ್ವತಃ ಸಚಿವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ರೆ, ಸಂಸದರು ಬಿಟ್ಟು ಬಿಡಿ ಅಂದ್ರು. ರಾಜಕೀಯವೂ ಸೇರಿತು. ನೆಟ್ಟಿಗರು ಪರ-ವಿರೋಧದ ಮಾತನಾಡಿದ್ರು.
ಇಷ್ಟೆಲ್ಲದರ ಮಧ್ಯೆ, ಪಾಪ ಚಂದನ್ ಶೆಟ್ಟಿ ಕ್ಷಮೆ ಕೂಡ ಕೋರಿದ್ರು. ಆದ್ರೂ, ವಿವಾದ ತಣ್ಣಗೆ ಆಗ್ತಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು..? ಕಾಮೆಂಟ್ ಮಾಡಿ. ಜೊತೆಗೆ ಈ ಸ್ಟೋರಿಯನ್ನ ಶೇರ್ ಮಾಡಿ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?