Featured
ರಾಣಾ ಈಗ ಹಿರಣ್ಯ ಕಶ್ಯಪ..! ಗಾಝಿ ಚಿತ್ರದ ಕ್ಯಾಪ್ಟನ್ಗೆ ಹೊಸ ಸವಾಲು- ಡಾ.ರಾಜ್ ಪಾತ್ರ ಮಾಡಲು ಸಜ್ಜಾಗಿದ್ದಾರೆ ದಗ್ಗುಬಾಟಿ

ರೈಸಿಂಗ್ ಕನ್ನಡ ಸಿನೆಮಾ ಡೆಸ್ಕ್:
ಬೆಂಗಳೂರು:
ರಾಣಾ ದಗ್ಗುಬಾಟಿ….. ಇಷ್ಟಂದ್ರೆ ಗೊತ್ತಾಗಿ ಬಿಡುತ್ತೆ.. ಬಾಹುಬಲಿಯ ಬಲ್ಲಾಳ ದೇವ, ರುದ್ರಮ್ಮದೇವಿ ಚಿತ್ರದ ಚಾಲುಕ್ಯ ವೀರಭದ್ರ, ಗಾಝಿ ಚಿತ್ರದ ಕ್ಯಾಪ್ಟನ್ ಅರ್ಜುನ್ ವರ್ಮಾ..ಹೀಗೆ ಪಾತ್ರ ಯಾವುದೇ ಆಗಿರಲಿ ಅದನ್ನು ಅಷ್ಟೇ ನಯಾನಾಜೂಕಾಗಿ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಮಾಡುವ ಕಲಾವಿದ. ಪೌರಾಣಿಕ, ಐತಿಹಾಸಿಕ ಚಿತ್ರಗಳಲ್ಲಿ ತನ್ನ ನಟನೆಯಿಂದಲೇ ಗೆದ್ದಿರುವ ರಾಣಾ ದಗ್ಗುಬಾಟಿ ಈಗ ತನ್ನ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಲು ಸಜ್ಜಾಗಿದ್ದಾರೆ.
ಪೌರಾಣಿಕ ಪಾತ್ರಗಳಲ್ಲಿ ಮಿಂಚಿದ್ದ ರಾಣಾ ಈ ಬಾರಿ ಹಿರಣ್ಯ ಕಶ್ಯಪನಾಗಿ ತೆರೆಯ ಮೇಲೆ ಬರಲಿದ್ದಾರೆ. ಗುಣಶೇಖರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದೆ. ಈಗಾಗಲೇ ಈ ಸಿನಿಮಾಕ್ಕಾಗಿ ಸಾಕಷ್ಟು ತಯಾರಿಗಳು ನಡೆದಿವೆ. ಲಾಕ್ಡೌನ್ನಿಂದಾಗಿ ಕೊಂಚ ತಡವಾಗುತ್ತಿದೆ.
ವಿಶೇಷ ಅಂದ್ರೆ ಕನ್ನಡದ ವರನಟ ಡಾ. ರಾಜ್ಕುಮಾರ್ 4 ದಶಕಗಳ ಹಿಂದೆ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯಕಶ್ಯಪನಾಗಿ ನಟಿಸಿದ್ದರು. ಈಗ ಅದೇ ಪಾತ್ರವನ್ನು ರಾಣಾ ಮಾಡಲಿದ್ದಾರೆ. ಹೀಗಾಗಿ ರಾಣಾಗೆ ಇದು ಸವಾಲಿನ ಕೆಲಸವಾಗಲಿದೆ. ದೊಡ್ಡ ಬಜೆಟ್ನಲ್ಲಿ ಈ ಚಿತ್ರ ಮಾಡಲು ಗುಣಶೇಖರ್ ಸಜ್ಜಾಗಿದ್ದಾರೆ.
ಈಗಾಗಲೇ ಹಿರಣ್ಯ ಕಶ್ಯಪ ಚಿತ್ರದ ಪ್ರಿಪ್ರೊಡಕ್ಷನ್ ಕೆಲಸಗಳು ಸಂಪೂರ್ಣಗೊಂಡಿದೆ. ಪರಿಸ್ಥಿತಿ ಮೊದಲಿನಂತೆ ಸಹಜ ಸ್ಥಿತಿಗೆ ಬಂದಮೇಲೆ ಚಿತ್ರೀಕರಣ ಶುರುವಾಗಲಿದೆ. ಪ್ಯಾನ್ ಇಂಡಿಯಾ ಸಿನೆಮಾ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?