ರಾಮಾಚಾರಿ ಚಾರುವನ್ನು ಮದುವೆಯಾದ ದಿನದಿಂದಲೂ ಸಹ ಒಂದಲ್ಲ ಒಂದು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಾ ಇದ್ದಾರೆ. ವಿಕಾಸ್ ಬಾನೇರಿಯಾ ಮನೆಯವರು ಜಾತಕವನ್ನೇ ಬದಲು ಮಾಡಿ ಚಾರು ಜಾತಕಕ್ಕೆ ಹೊಂದುವಂತಹ ಜಾತಕ ಮಾಡಿಸಿಕೊಂಡು ಬಂದು ಜೈ ಶಂಕರ್ ಆಸ್ತಿಯನ್ನು ಹೊಡೆಯಲು ಸಂಚನ್ನ ಹಾಕಿದ್ದಾರೆ. ಈ ಬಗ್ಗೆ ವಿಕಾಸ್ ಬಾನೇರಿಯಾ ಅಮ್ಮ ಸಹ ರಾಮಾಚಾರಿಗೆ ಹೇಗಾದರೂ ಮಾಡಿ ಈ ಮದುವೆಯನ್ನು ತಪ್ಪಿಸು ಎಂದು ಹೇಳಿದ್ದರು.
ರಾಮಾಚಾರಿ ಮದುವೆಯನ್ನು ಮಾಡಬೇಕು ಎಂದು ವೈಶಾಖ ಮಾತ್ರ ಪ್ರಯತ್ನವನ್ನ ಮಾಡುತ್ತಿದ್ದಾಳೆ. ಖುಷಿ ಫೋನ್ನಲ್ಲಿರುವ ವಿಡಿಯೋವನ್ನು ರಿಸ್ಟೋರ್ ಮಾಡಿಸಿಕೊಂಡು ಬರಲು ಹೋಗಿದ್ದಾರೆ. ರಾಮಾಚಾರಿ ಈಗ ಎಂಗೇಜ್ಮೆಂಟ್ ನಡೆಯುವ ಸ್ಥಳಕ್ಕೆ ತಲುಪಿದ್ದಾನೆ. ಎಂಗೇಜ್ಮೆಂಟ್ ಮಾಡಲು ಎಲ್ಲಾ ತಯಾರಿಯನ್ನ ಮಾಡಿಕೊಂಡಿದ್ದಾನೆ. ವಿಕಾಸ್ ಬಾನೇರಿಯ ಕುಟುಂಬಸ್ಥರು ಸಹ ಎಂಗೇಜ್ಮೆಂಟ್ ನಡೆಯುವ ಸ್ಥಳಕ್ಕೆ ಬಂದಿದ್ದಾರೆ.
ನಿನ್ನ ಹಾಗೂ ರಾಮಾಚಾರಿಯ ಬಗ್ಗೆ ನನಗೊಂದು ಸಣ್ಣ ಸುಳಿವು ಸಿಕ್ಕಿದೆ ನೀನು ನಾನು ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದೆ ಎಂದುಕೊಂಡಿದ್ದೀಯಾ ಆದರೆ ಇಲ್ಲಿ ನಡೆಯುವುದೇ ಬೇರೆ ಎಂದು ಮಾನ್ಯತಾ ಮನಸ್ಸಿನಲ್ಲೆ ಅಂದುಕೊಂಡಿದ್ದಾಳೆ. ನಿನ್ನ ಹಾಗೂ ವಿಕಾಸ್ ಬಾನೇರಿಯಾ ಮದುವೆಯನ್ನ ನಾನು ಹಿಂದೆ ಮಾಡುತ್ತೇನೆ ಎಂದು ಮಾನ್ಯತಾ ಹೇಳಿಕೊಂಡಿದ್ದಾಳೆ. ಆದರೆ ಚಾರುಗೆ ತನ್ನ ಅಮ್ಮನ ಮನಸ್ಸಿನಲ್ಲಿ ನಡೆಯುತ್ತಿರುವ ಮಾಸ್ಟರ್ ಪ್ಲಾನ್ ಮಾತ್ರ ತಿಳಿದಿಲ್ಲ
ಖುಷಿ ಮೊಬೈಲ್ನಲ್ಲಿದ್ದ ವಿಡಿಯೋವನ್ನು ರಿಸ್ಟೋರ್ ಮಾಡಿಸಿಕೊಂಡು ಬರಲು ಹೋದ ವೈಶಾಖ ಹಾಗೂ ಖುಷಿ ಇಬ್ಬರು ಇನ್ನೂ ಎಂಗೇಜ್ಮೆಂಟ್ ನಡೆಯುವ ಸ್ಥಳಕ್ಕೆ ಬಂದಿಲ್ಲ. ಹೇಗಾದರೂ ಮಾಡಿ ಎಲ್ಲರ ಎದುರು ಮಾನ ಕಳೆಯಬೇಕು ಎಂದುಕೊಂಡಿರುವ ವೈಶಾಖಳ ಪ್ಲಾನ್ ಉಲ್ಟಾ ಆಗಿದೆಯಾ ನೋಡಬೇಕಿದೆ. ಇಲ್ಲವೇ ಮಾನ್ಯತಾಳ ಪ್ಲಾನ್ ಏನಾದರು ಸಕ್ಸಸ್ ಆಗಿ ವಿಕಾಸ್ ಬಾನಿಯಲ್ಲಿ ಚಾರು ಕುತ್ತಿಗೆಗೆ ತಾಳಿ ಕಟ್ಟತಾನ ಅಥವಾ ರಾಮಾಚಾರಿ ಹಾಗೂ ಚಾರು ಮದುವೆ ಕುತೂಹಲವಾಗಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?