Featured
ಸಿದ್ದರಾಮಯ್ಯ ಪುತ್ರ ರಾಕೇಶ್ ಸಾವಿಗೆ ಆತನೇ ಕಾರಣ : MTB ನಾಗರಾಜ್ ಗಂಭೀರ ಆರೋಪ

ಹೊಸಕೋಟೆ : ಉಪ ಚುನಾವಣಾ ರಾಜಕೀಯ ವೈಯಕ್ತಿಕ ಮಟ್ಟಕ್ಕೆ ಇಳಿದಿದೆ. ಹೊಸಕೋಟೆ ಅನರ್ಹ ಶಾಸಕ ಎಂಟಿಬಿ ನಾಗರಾಜ್, ಇವತ್ತು ಸಿದ್ದರಾಮಯ್ಯ ಮಗ ರಾಕೇಶ್ ಸಾವಿನ ಕುರಿತು ಮಾತ್ನಾಡಿದ್ದಾರೆ. ಸಿದ್ದು ಪುತ್ರ ರಾಕೇಶ್ ಸಾವಿಗೆ ಆತನೇ ಕಾರಣ. ಪಾರ್ಟಿಗಳಿಗೆ ಕರ್ಕೊಂಡು ಹೋಗಿ, ಪ್ರತಿ ದಿನ ಕುಡಿಸಿ ರಾಕೇಶ್ ಸಿದ್ದರಾಮಯ್ಯ ಅವರನ್ನ ಹಾಳು ಮಾಡಿದ್ದು ಅವನೇ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಎಂಟಿಬಿ ನಾಗರಾಜ್ ಆರೋಪ ಮಾಡಿರೋದು ಸಿದ್ದರಾಮಯ್ಯ ಆಪ್ತ, ಭೈರತಿ ಸುರೇಶ್ ಮೇಲೆ ಅನ್ನೋದು ಗೊತ್ತಾಗಿದೆ. ಭೈರತಿ ಸುರೇಶ್ ಪತ್ನಿಯನ್ನ ಹೊಸಕೋಟೆಯಿಂದ ಕಣಕ್ಕೆ ಇಳಿಸಲು ಸಜ್ಜಾಗ್ತಿರೋ ಈ ಟೈಮಲ್ಲಿ, ಭೈರತಿ ಸುರೇಶ್ ವಿರುದ್ಧ ಪರೋಕ್ಷವಾಗಿ ಎಂಟಿಬಿ ವಾಗ್ದಾಳಿ ನಡೆಸಿದ್ದಾರೆ. ಭೈರತಿ ಸುರೇಶ್ ಸಹವಾಸ ಮಾಡದೇ ಇದ್ದಿದ್ರೆ, ರಾಕೇಶ್ ಸಿದ್ದರಾಮಯ್ಯ ಇನ್ನೂ 50 ವರ್ಷ ಬದುಕಿರ್ತಿದ್ದ ಎಂದು ಎಂಟಿಬಿ ಹೇಳಿದ್ದಾರೆ.
ಇದೇ ವೇಳೆ ಭೈರತಿ ಸುರೇಶ್ ಇನ್ನೂ ರಾಜಕೀಯದಲ್ಲಿ ಬಚ್ಚ ಎಂದಿರೋ ಎಂಟಿಬಿ, ನನಗೆ ಟಿಕೆಟ್ ಕೊಡಿಸಿದ್ದು ಸಿದ್ದರಾಮಯ್ಯ ಅಲ್ಲ, ಎಸ್.ಎಂ. ಕೃಷ್ಣ ಅಂತ ಹೇಳಿದ್ರು. ಸಿದ್ದರಾಮಯ್ಯ ಕಾಂಗ್ರೆಸ್ಗೆ ಬಂದಿದ್ದು 2006ರಲ್ಲಿ, ಅದಕ್ಕೂ ಮೊದಲೇ ನಾನು ಕಾಂಗ್ರೆಸ್ ಅಭ್ಯರ್ಥಿ ಆಗಿದ್ದೆ ಎಂದು ಸಿದ್ದುಗೂ ಟಾಂಗ್ ಕೊಟ್ರು ಎಂಟಿಬಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?