ಬೆಂಗಳೂರು : ಕರ್ನಾಟಕ ರಾಜಕಾರಣಿಗಳಿಗೆ ಅದ್ಯಾಕೋ ಏನೋ, ಗ್ರಹಚಾರ ಕೆಟ್ಟಂತೆ ಕಾಣ್ತಿದೆ. ಡಿಕೆಶಿ ಜೈಲಿಗೆ ಹೋಗಿ ಬಂದಾಯ್ತು. ಪರಮೇಶ್ವರ್ ಮೇಲೂ ಐಟಿ ದಾಳಿ ಆಯ್ತು. ಇದೀಗ ರೆಬಲ್ ನಾಯಕ, ಸಾಹುಕಾರ್ ಅಂತಲೇ ಕರೆಸಿಕೊಳ್ಳೋ ರಮೇಶ್ ಜಾರಕಿಹೊಳಿ ಕುಟುಂಬಕ್ಕೆ ಐಟಿ ಶಾಕ್ ನೀಡಿದೆ. ರಮೇಶ್ ಜಾರಕಿಹೊಳಿ ಕುಟುಂಬದ ಮೇಲೆ ಕೋಟಿ ಕೋಟಿ ತೆರಿಗೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ಐಟಿ ತನಿಖೆಯಲ್ಲಿ ಸಾಹುಕಾರ್ ವಂಚನೆ ಬಯಲಾಗಿದೆ.
ಈ ಸಂಬಂಧ ರಮೇಶ್ ಜಾರಕಿಹೊಳಿ ಕುಟುಂಬಕ್ಕೆ ಸೇರಿದ ೧೦೫ ಕೋಟಿ ಮೊತ್ತದ ಷೇರುಗಳು ಜಪ್ತಿ ಮಾಡಲಾಗಿದೆ. ರಮೇಶ್ ಜಾರಕಿಹೊಳಿಗೆ ಸೇರಿದ ಲಕ್ಷ್ಮಿ ಶುಗರ್ಸ್ ಮೇಲೆ ಈ ಹಿಂದೆ ಐಟಿ ದಾಳಿಯಾಗಿತ್ತು. ದಾಳಿ ವೇಳೆ ವಶಪಡಿಸಿಕೊಂಡ ದಾಖಲೆಗಳ ಪ್ರಕಾರ, ರಮೇಶ್ ಜಾರಕಿಹೊಳಿ ಪತ್ನಿ ಜಯಶ್ರೀ, ಮಕ್ಕಳಾದ ಅಮರನಾಥ್, ಸಂತೋಷ್ ಹಾಗೂ ಸಂಬಂಧಿಕರು ಸೇರಿ ೩೧ ಜನರ ಹೆಸರಲ್ಲಿ ೧೦೫ ಕೋಟಿ ಹೂಡಿಕೆ ಪತ್ತೆಯಾಗಿದೆ.
ಆದರೆ ಐಟಿ ತನಿಖೆ ವೇಳೆ ೩೧ ಹೂಡಿಕೆದಾರರಿಗೆ ಅವರ ಹೆಸರಲ್ಲಿ ಹಣ ಹೂಡಿಕೆ ಮಾಡಿರುವುದು ಗೊತ್ತಿಲ್ಲ. ಹೀಗಾಗಿ ಆದಾಯ ತೆರಿಗೆ ಇಲಾಖೆಯಿಂದ ೧೦೫ ಕೋಟಿ ಮೊತ್ತದ ಷೇರುಗಳನ್ನ ಜಪ್ತಿ ಮಾಡಲಾಗಿದೆ. ೨೦೧೭ ರಲ್ಲಿ ಸೌಭಾಗ್ಯ ಎಂಬುವವರು ರಮೇಶ್ ಜಾರಕಿಹೊಳಿ ಮ್ಯಾನೆಜಿಂಗ್ ಡೈರೆಕ್ಟರ್ ಆಗಿದ್ರು. ಸೌಭಾಗ್ಯ ಹೆಸರಿನಲ್ಲೂ ಷೇರುಗಳಿದ್ದು, ಅದನ್ನೂ ಕೂಡ ಜಪ್ತಿ ಮಾಡಲಾಗಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?