ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರದಿಂದ ವಿಶೇಷ ಕಾರ್ಯ- ವಿಶ್ವಶಾಂತಿಗಾಗಿ ಬೆಂಗಳೂರು ಟು ಬಾಗಲಕೋಟೆ ತನಕ ಸಸಿ ನೆಡುವ ಕಾರ್ಯಕ್ರಮ
ಸ್ವಾತಂತ್ರ್ಯೋತ್ಸವನ್ನು ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದೆ. ಕೊರೊನಾ ವಾರಿಯರ್ಗಳನ್ನು ಪ್ರೋತ್ಸಾಹಿಸಲು ಮತ್ತು ಕೊರೊನಾ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ವಿಶೇಷ ಕಾರ್ಯವನ್ನು ಮಾಡುತ್ತಿದೆ. ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಿಂದ ಬಾಗಲಕೋಟೆಯ ಗುಳೆದಗುಡ್ಡ ಪುರಾಣಿಕ ಮಠದ ತನಕ 300 ಸಸಿಗಳನ್ನು ನೆಟ್ಟುಕೊಂಡು ಹೋಗುವ ಯೋಜನೆ ಮಾಡಲಾಗಿದೆ.
ದಾರಿ ಉದ್ದಕ್ಕೂ ಕೊರೊನಾ ವಾರಿಯರ್ಗಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಲಾಗುತ್ತದೆ. ಅಷ್ಟೇ ಅಲ್ಲ ವಿಶ್ವಶಾಂತಿಗಾಗಿ ಪ್ರಾರ್ಥನೆ ಕೂಡ ಮಾಡಲಾಗುತ್ತದೆ. ಜನರಿಗೆ ಮಾಸ್ಕ್ ಗ್ಲೌಸ್, ಸ್ಯಾನಿಟೈಸರ್ ಮತ್ತು ಮಾಹಿತಿ ಕೂಡ ನೀಡಲಾಗುತ್ತದೆ. ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ವಿಶೇಷ ಕಾರ್ಯಗಳನ್ನು ಹಮ್ಮಿಕೊಂಡಿದೆ.