ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಕರ್ನಾಟಕದ ಕ್ರಿಕೆಟ್ ಅಭಿಮಾನಗಳು ಆರ್ಸಿಬಿ ಪರ ಜೈಕಾರ ಘೋಷಿಸೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಕನ್ನಡಿಗರಿಗೆ ಆರ್ಸಿಬಿಯೇ ಉಸಿರು. ಆದ್ರೆ, ಈ ಬಾರಿಯ ಐಪಿಎಲ್ನಲ್ಲಿ ಕನ್ನಡಿಗರ ಮನಸ್ಸು ಆರ್ಸಿಬಿ ಬಿಟ್ರೆ, ಕಿಂಗ್ಸ್ ಇಲೆವೆನ್ ಪಂಜಾಬ್ ಕಡೆಗೆ ಕೊಂಚ ಮಟ್ಟಿಗೆ ಮಿಡಿಯುತ್ತಿಗೆ. ಅದಕ್ಕೆ ಕಾರಣ, ಕೆಎಲ್ ರಾಹುಲ್ ಆ ತಂಡದ ನಾಯಕನಾಗಿರೋದು. ಎಲ್ಲಕ್ಕಿಂತ ಹೆಚ್ಚಾಗಿ, ಪಂಜಾಬ್ ತಂಡದಲ್ಲಿ ಒಟ್ಟು ಆರು ಜನ ಕನ್ನಡಿಗರಿದ್ದಾರೆ.
90ರ ದಶಕದಲ್ಲಿ ಭಾರತೀಯ ತಂಡದಲ್ಲೇ 6 ಜನ ಕನ್ನಡಿಗರಿರುತ್ತಿದ್ದರು. ಅದೇ ರೀತಿ ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ, ಕ್ಯಾಪ್ಟನ್ ಕೆ.ಎಲ್ ರಾಹುಲ್, ಕರುಣ್ ನಾಯರ್, ಮಾಯಾಂಕ್ ಅಗರ್ವಾಲ್, ಕೃಷ್ಣಪ್ಪ ಗೌತಮ್, ಜಗದೀಶ್ ಸುಚಿತ್ ಈ ಐವರು ಆಟಗಾರರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ರೆ, ಇನ್ನೂ ಕೋಚ್ ಅನಿಲ್ ಕುಂಬ್ಳೆ ಕನ್ನಡದ ಹಿರಿಮೆಯೇ ಸರಿ.
ಇನ್ನೂ ಈ ಕರ್ನಾಟಕದ ಬಾಯ್ಸ್ ಅದಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಕೆ.ಎಲ್ ರಾಹುಲ್, ಕರುಣ್ ನಾಯರ್, ಜಗದೀಶ್ ಸುಚಿತ್ ಕಠಿಣ ಅಭ್ಯಾಸ ನಡೆಸಿದ್ದಾರೆ. ಈ ಯುವ ಆಟಗಾರರ ಅಭ್ಯಾಸವನ್ನ ಕೋಚ್ ಅನಿಲ್ ಕುಂಬ್ಳೆ ವೀಕ್ಷಿಸಿದ್ದಾರೆ. ಸಂಪೂರ್ಣ ಟ್ರೇನಿಂಗ್ ಸೆಷನ್ನಲ್ಲಿ ಕೆ.ಎಲ್ ರಾಹುಲ್ ತುಂಬಾನೆ ಆ್ಯಕ್ಟಿವ್ ಆಗಿದ್ರು.
ಈ ಸೀಸನ್ನಲ್ಲಿ ನಾಯಕನ ಜವಾಬ್ದಾರಿಯನ್ನು ಹೊತ್ತಿರೋ ಕೆ.ಎಲ್ ರಾಹುಲ್ ನಾಯಕನಾಗಿ, ಆರಂಭಿಕ ಬ್ಯಾಟ್ಸ್ಮನ್ ಆಗಿ, ಜೊತೆಯಲ್ಲೇ ವಿಕೆಟ್ ಕೀಪರ್ ಆಗಿಯೂ ಮಹತ್ವದ ಪಾತ್ರವನ್ನ ನಿರ್ಹಹಿಸಬೇಕಿದೆ.
ಒಟ್ಟಿನಲ್ಲಿ ಕನ್ನಡಿಗರಿಗೆ ಆರ್ಸಿಬಿಯೇ ಮೊದಲು ನಿಜ, ಆದ್ರೆ, ಆರ್ಸಿಬಿ ಹೊರತಾಗಿ ನಾವು ಯಾವುದಾದ್ರೂ ತಂಡಕ್ಕೆ ಈ ಸಾಲಿನಲ್ಲಿ ಹೆಚ್ಚಾಗಿ ಸಪೋರ್ಟ್ ಮಾಡಿದ್ರೆ, ಅದು ಕಿಂಗ್ಸ್ ಇಲೆವೆನ್ ಪಂಜಾಬ್ ಮಾತ್ರ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?