ಪುರಾಣಿಕ್ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯ ಪರಿಷತ್ ರೈಸಿಂಗ್ ಕನ್ನಡ ಮೂಲಕ ಮನೆಮದ್ದುಗಳನ್ನು ಪರಿಚಯಿಸುತ್ತಿದೆ. ಮನೆಯಲ್ಲೇ ದಿನನಿತ್ಯ ಬಳಸುವ ವಸ್ತುಗಳಿಂದಲೇ ವಿಟಮಿನ್ಗಳನ್ನು ಪಡೆಯುವ ಬಗ್ಗೆ ಮಾಹಿತಿ ನೀಡುತ್ತಿದೆ. ಮಹಾಮಾರಿ ಕರೋನಾ ವಿರುದ್ಧ ಜನ ಗಟ್ಟಿಯಾಗಿ ನಿಲ್ಲಬೇಕು ಅಂದ್ರೆ ವಿಟಮಿನ್ಗಳು ಮತ್ತು ರೋಗ ನಿರೋಧಕ ಶಕ್ತಿಗಳು ಹೆಚ್ಚು ಇರಲೇಬೇಕು. ಇದಕ್ಕಾಗಿ ಆಯುರ್ವೇದದಲ್ಲಿ ಮನೆಯಲ್ಲೇ ತಯಾರಿಸಬಹುದಾದ ಕಷಾಯಗಳ ಬಗ್ಗೆ ಮಾಹಿತಿ ಇಲ್ಲಿದೆ.
ಮೊದಲು ಕರಿಬೇವು ಮತ್ತು ಪುದಿನಾದಿಂದ ಎಲೆಗಳನ್ನು ಬೇರ್ಪಡಿಸಿ, ಕೇವಲ ಕಡ್ಡಿಗಳನ್ನು ಮಾತ್ರ ಇಟ್ಟುಕೊಳ್ಳಬೇಕು. ಈ ಕಡ್ಡಿಗಳನ್ನು ಕೈಯಿಂದ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಬೇಕು. ಅದಕ್ಕೆ 1 ಸ್ಪೂನ್ ಜೀರಿಗೆ ಜೊತೆಗೆ 25 ಗ್ರಾಂನಷ್ಟು ಹಸಿಶುಂಠಿಯನ್ನು ಚಿಕ್ಕ ಚಿಕ್ ಪೀಸ್ ಮಾಡಿ 2 ಗ್ಲಾಸ್ ನೀರಿಗೆ ಹಾಕಬೇಕು. ರುಚಿಗೆ ಬೇಕಾದಷ್ಟು ಕಲ್ಲುಸಕ್ಕರೆಯನ್ನು ಸೇರಿಸಿಕೊಂಡು ಕುದಿಸಬೇಕು. ನೀರು ಒಂದು ಗ್ಲಾಸ್ ಅಥವಾ ಒಂದೂವರೆ ಗ್ಲಾಸ್ ಆಗುವ ತನಕ ಕುದಿಸಿ ಕಷಾಯ ಮಾಡಿಕೊಳ್ಳಬೇಕು.
ಬಿಸಿ ಕಷಾಯ ದೇಹಕ್ಕೆ ಸಾಕಷ್ಟು ವಿಟಮಿನ್ಗಳನ್ನು ನೀಡುತ್ತದೆ. ಅಷ್ಟೇ ಅಲ್ಲ ದೇಹದ ಉಷ್ಣತೆ ಕಡಿಮೆ ಮಾಡುತ್ತದೆ. ಪುದಿನಾ ವಿಟಮಿನ್ Cಯನ್ನು ಒದಗಿಸಿಕೊಟ್ಟರೆ, ಕರಿಬೇವು ವಿಟಮಿನ್ Kಯನ್ನು ತಂದುಕೊಡುತ್ತದೆ. ಜೀರಿಗೆ ವಾಯು ಮತ್ತು ವಾತಕ್ಕೆ ರಾಮಬಾಣವಾದರೆ, ಶುಂಠಿ ಗ್ಯಾಸ್ಟ್ರಿಕ್ಗೆ ಮನೆ ಮದ್ದು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?