Featured
ಎಸ್ಪಿ ಸಂಗೀತಾ ವಿರುದ್ಧ ಕೊಪ್ಪಳದಲ್ಲಿ ಜನಾಕ್ರೋಶ – ಪಿಐ, ಪಿಸಿ ಅಮಾನತು ರದ್ದಿಗೆ ಆಗ್ರಹ

ರೈಸಿಂಗ್ ಕನ್ನಡ :
ಕೊಪ್ಪಳ :
ಪ್ರತಿನಿಧಿ :
ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ ಇತ್ತೀಚೆಗೆ ವಿವಾದಗಳಿಂದಲೇ ಸದ್ದು ಮಾಡುತ್ತಿದೆ. ಅದರಲ್ಲೂ ನಗರ ಠಾಣೆಯ ಪಿಐ ಮೌನೇಶ್ವರ ಮಾಲೀಪಾಟೀಲ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ಪ್ರಕಾಶ ತಿಮ್ಮಾಪುರ ಅವರನ್ನು ಅಮಾನತುಗೊಳಿಸಿರೋ ವಿಚಾರ ಈಗ ಎಲ್ಲಾ ಚರ್ಚೆಯಾಗುತ್ತಿದೆ.

ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಮತ್ತು ಕಾನ್ಸ್ಟೇಬಲ್ ಅಮಾನತು ಆದೇಶವನ್ನು ರದ್ದುಗೊಳಿಸಿ, ಅದೇ ಠಾಣೆಗೆ ಮತ್ತೇ ನಿಯುಕ್ತಿಗೊಳಿಸುವಂತೆ ಆಗ್ರಹಿಸಿ ಮೌನೇಶ್ವರ ಮಾಲೀಪಾಟೀಲ್ ಅಭಿಮಾನಿ ಬಳಗ ಪ್ರತಿಭಟನೆ ನಡೆಸಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಖಾಸುಮ್ಮನೆ ಆರೋಪ ಹೊರಿಸಿ ನಗರ ಠಾಣೆಯ ಸಿಬ್ಬಂದಿಯನ್ನು ಅಮಾನತುಗೊಳಿಸಿರುವುದು ಸರಿಯಲ್ಲ. ಮೌನೇಶ್ವರ ಮಾಲೀಪಾಟೀಲ್ ಅವರು ವಿ3 ಕೇರ್ ಲೈಫ್ ಕೇರ್ ಕಂಪನಿಯ ಮೂರನೇ ಆರೋಪಿ ಪತ್ತೆಗೆ ಸಂಬಂಧಿಸಿದಂತೆ ಸುಮಾರು 45 ದಿನಗಳ ಕಾಲ ಹೈದ್ರಾಬಾದ್, ಕರ್ನೂಲ್, ಗುಜರಾತ್ ಸೇರಿದಂತೆ ದೇಶದ ಹಲವು ಕಡೆ ಸುತ್ತಾಡಿದರೂ ಆರೋಪಿ ಸುಳಿವು ಸಿಕ್ಕಿರಲಿಲ್ಲ. ಈ ವಿಷಯ ಎಸ್ಪಿಗೆ ಗೊತ್ತಿರಲಿಲ್ಲವೇ? ಅಷ್ಟೆಲ್ಲಾ ರಾಜ್ಯ ಸುತ್ತಾಡಿ ಬಂದರೂ ಸಿಗದ ಆರೋಪಿ ಕೇವಲ ಒಂದೇ ದಿನದಲ್ಲಿ ಎಸ್ಪಿ ಸಂಗೀತ ನೇತೃತ್ವದ ತಂಡಕ್ಕೆ ಸಿಕ್ಕಿದ್ದಾದರೂ ಹೇಗೆ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಶಿಖಾ ಶೇಖ್ ಪ್ರಕರಣದ ತನಿಖೆಯೇ ಮುಳುವಾಯಿತೇ?
ಕೊಪ್ಪಳ ಜಿಲ್ಲೆಯಲ್ಲಿ ಆಗಿನ್ನೂ ಕೊರೊನಾ ಕೇಸ್ಗಳಿರಲಿಲ್ಲ. ಲಾಕ್ಡೌನ್ ಇದ್ದರೂ ಮುಂಬೈ ಮೂಲದ ಯುವತಿಯನ್ನು ಭಾಗ್ಯನಗರದ ಬಿಜೆಪಿ ಮುಖಂಡ ಗುರುಬಸವರಾಜ ಹೊಳಗುಂದಿ ಪೊಲೀಸ್ ವಾಹನದಲ್ಲೇ ಕೊಪ್ಪಳಕ್ಕೆ ಕರೆ ತಂದಿದ್ದ. ಆಕೆಯನ್ನು ಮರಳಿ ಮುಂಬೈಗೆ ಕಳಿಸಲು ನೇರವಾಗಿ ಡಿಸಿಯವರ ಬಳಿ ಪಾಸ್ ಕೇಳಲು ಹೋದಾಗ ದಕ್ಷ ಜಿಲ್ಲಾಧಿಕಾರಿ ಚಾಟಿ ಬೀಸಿ, ಪ್ರಕರಣ ದಾಖಲಿಸಲು ಸೂಚಿಸಿ, ಹೊಳಗುಂದಿಯನ್ನು ಕಂಬಿ ಹಿಂದೆ ತಳ್ಳಿದ್ದರು.
ನಿತ್ಯ ಪೊಲೀಸರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಗುರು ಬಸವರಾಜ ಹೊಳಗುಂದಿ ಎಸ್ಪಿಯವರ ಹಾಗೂ ಕೆಲ ರಾಜಕೀಯ ಮುಖಂಡರ ಕೃಪಾಕಟಾಕ್ಷದಿಂದ ಸೇಫ್ ಆಗಿದ್ದ. ಆದರೆ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದ ಮೌನೇಶ್ವರ ಮಾಲೀಪಾಟೀಲ್ ನಿಷ್ಪಕ್ಷಪಾತವಾಗಿ ಮಾಹಿತಿ ಸಂಗ್ರಹಿಸುತ್ತಿದ್ದುದು ಎಸ್ಪಿಯವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿ, ಯಾವುದೋ ಹಳೇ ಪ್ರಕರಣದ ತನಿಖೆ ಕಾರಣ ನೀಡಿ ಅಮಾನತು ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದೆಲ್ಲ ಪ್ರಭಾವಿ ಗುರುಬಸವರಾಜ ಹೊಳಗುಂದಿಯನ್ನು ಸೇಫ್ ಮಾಡುವ ತಂತ್ರ. ಇದುವರೆಗೂ ಶಿಖಾ ಶೇಖ್ ಎಲ್ಲಿದ್ದಾಳೆ? ಆ ಪ್ರಕರಣ ಏನಾಯಿತು? ಎಂಬುದನ್ನು ಮೊದಲು ಬಯಲು ಮಾಡಿ ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಕೂಡಲೇ ಪೊಲೀಸ್ ಕಾನ್ಸ್ಟೇಬಲ್ ಪ್ರಕಾಶ್ ತಿಮ್ಮಾಪುರ ಮತ್ತು ಪಿಐ ಮೌನೇಶ್ವರ ಮಾಲೀಪಾಟೀಲ್ ಅವರನ್ನು ಅದೇ ಠಾಣೆಗೆ ಸ್ಥಳ ನಿಯುಕ್ತಿ ಮಾಡಬೇಕು. ಇಲ್ಲದಿದ್ದರೆ ಉಗ್ರಹೋರಾಟ ನಡೆಸಲಾಗುವುದು ಎಂದು ಮೌನೇಶ್ವರ ಮಾಲೀಪಾಟೀಲ್ ಅಭಿಮಾನಿ ಬಳಗದ ಮುಖಂಡರು ಎಚ್ಚರಿಸಿ ಎಸ್ಪಿ ಸಂಗೀತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಕುಮಾರ್ ಕುಕನೂರು, ಸುನೀಲ್ ಹೆಸರೂರು, ವೆಂಕಟೇಶ ಹವಳೆ, ಬಸವರಾಜ ಭೋವಿ, ಗವಿಸಿದ್ದಪ್ಪ ಗೊರವರ, ಶೇಖರ್ ಎಸ್.ಪಾಟೀಲ, ಲಿಂಗರಾಜ ಕಟ್ಟೀಮನಿ, ಮಂಜು ತೋಟಗೇರ, ಸುರೇಶ ಬನ್ನಿಕೊಪ್ಪ, ರುದ್ರಗೌಡ ಸೊಲಬಗೌಡ್ರ, ಪ್ರವೀಣಗೌಡ್ರ, ಮಾರುತಿ ಆಪ್ಟೆ, ಸಿದ್ದು ಮೈನಳ್ಳಿ ಸೇರಿದಂತೆ ಇತರರು ಇದ್ದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?